‘ಕಂಬಳಗಳು ಗ್ರಾಮೀಣ ಜನರ ಬದುಕಿನ ಅವಿಭಾಜ್ಯ ಅಂಗ’
Team Udayavani, Dec 23, 2018, 2:25 AM IST
ಬೈಂದೂರು: ಯಡ್ತರೆ ಗ್ರಾಮದ ಹೊಸೂರು ಕಂಬಳ ಮಹೋತ್ಸವ ಹಡವಿನ ಗದ್ದೆ ದಿ| ಸುಬ್ಬ ಪೂಜಾರಿ ಅವರ ಕಂಬಳಗದ್ದೆಯಲ್ಲಿ ನಡೆಯಿತು. ಕಂಬಳ್ಳೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಶಿರೂರು ಯಕ್ಷ ಸಂಪದ ಅಧ್ಯಕ್ಷ ಚಿಕ್ಕು ಪೂಜಾರಿ, ಕಂಬಳಗಳು ಗ್ರಾಮೀಣ ಜನರ ಬದುಕಿನ ಅವಿಭಾಜ್ಯ ಅಂಗವಾಗಿದೆ. ಕೃಷಿ ಚಟುವಟಿಕೆಯ ಜತೆಗೆ ಬಿಡುವಿನ ವೇಳೆಯಲ್ಲಿ ಆಚರಿಸಿಕೊಳ್ಳುವ ರೈತರ ಸಂಭ್ರಮ ಇಂದು ಬಹಳಷ್ಟು ಪ್ರಸಿದ್ಧಿ ಪಡೆದಿದೆ. ಕಂಬಳಕ್ಕೆ ಇಂದು ಯುವಜನತೆ ಸೇರಿದಂತೆ ಬಹಳಷ್ಟು ಜನರ ಆಸಕ್ತಿಯ ಕ್ರೀಡೆಯಾಗಿದೆ. ಯಶಸ್ವಿಯಾಗಿ 9 ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಹೊಸೂರು ಕಂಬಳ ಪ್ರಮುಖ ಕಂಬಳಗಳಲ್ಲಿ ಒಂದಾಗಿದೆ ಎಂದರು. ಕಂಬಳಗದ್ದೆ ಮಾಲಕರಾದ ದಾರಮ್ಮ ಹಡವಿನಗದ್ದೆ ಕಂಬಳಕ್ಕೆ ಚಾಲನೆ ನೀಡಿದರು.
ಗ್ರಾಮದ ಹಿರಿಯರಾದ ಕುಪ್ಪ ಮರಾಠಿ, ಕಂಬಳ್ಳೋತ್ಸವದ ಪ್ರಾಯೋಜಕರಾದ ವಸಂತರಾಜ್ ಹಡವಿನಗದ್ದೆ, ಸಂಘಟನ ಸಮಿತಿಯ ಚಂದ್ರ ಪೂಜಾರಿ, ನಾಗಪ್ಪ ಮರಾಠಿ, ಪತ್ರಕರ್ತ ಗಿರಿ ಶಿರೂರು, ಮಾಸ್ತಯ್ಯ ಪೂಜಾರಿ, ನಾರಾಯಣ ಮರಾಠಿ, ಮಾಸ್ತಪ್ಪ ನಾಯ್ಕ, ಮಹಾದೇವ ಮರಾಠಿ, ವಾಸುದೇವ ಮರಾಠಿ, ಪವನ್ ಕುಮಾರ್ ಹಾಜರಿದ್ದರು. ಕಂಬಳ್ಳೋತ್ಸವದಲ್ಲಿ ಹಗ್ಗ ಹಾಗೂ ಹಲಗೆ ವಿಭಾಗದಲ್ಲಿ 40ಕ್ಕೂ ಅಧಿಕ ಕೋಣಗಳು ಭಾಗವಹಿಸಿದ್ದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ
Kapu Assembly constituency: ನಕಲಿ ಮತದಾನ;ಆರೋಪ
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…