Kapu; ವಿವಾಹಿತೆಗೆ ವರದಕ್ಷಿಣೆ ಕಿರುಕುಳ : ದೂರು ದಾಖಲು
Team Udayavani, Jan 30, 2024, 9:09 PM IST
ಕಾಪು: ವಿವಾಹಿತೆಗೆ ಪತಿ ಮತ್ತು ಅವರ ಮನೆಯವರು ವರದಕ್ಷಿಣೆ ಕಿರುಕುಳ ನೀಡುತ್ತಿರುವುದರ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಲ್ಲಾರು ಗ್ರಾಮದ ಆಯಿಶಾ ಫರೀನ್ ಗಂಡನ ಮನೆಯವರಿಂದ ಕಿರುಕುಳ ಅನುಭವಿಸುತ್ತಿರುವ ಮಹಿಳೆ. ಆಯಿಶಾ 2017ರಲ್ಲಿ ಕೊಂಬುಗುಡ್ಡೆಯ ಪರ್ವೇಜ್ನೊಂದಿಗೆ ಕೊಪ್ಪಲಂಗಡಿಯ ಕಮ್ಯೂನಿಟಿ ಹಾಲ್ನಲ್ಲಿ ವಿವಾಹವಾಗಿದ್ದು 20 ದಿನಗಳ ಬಳಿಕ ಪತಿ ಒಮಾನ್ಗೆ ತೆರಳಿದ್ದನು. ಆ ಸಮಯದಲ್ಲಿ ಪತಿಯ ತಂದೆ ಶುಕೂರ್, ತಾಯಿ ಜೋಹರಾಬಿ, ಮೈದುನ ಫಾರೂಕ್, ನಾದಿನಿ ಅನ್ಹೋದಾ, ಫೈಸಲ್ ಮತ್ತು ಫರ್ಹಾನ್ ಅವಾಚ್ಯ ಶಬ್ದಗಳಿಂದ ಬೈದು ಮಾನಸಿಕ ಕಿರುಕುಳ ನೀಡಿದ್ದು, ಫಾರೂಕ್ ಕೂಡ ಬೆದರಿಕೆ ಹಾಕುತ್ತಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ.
ತವರು ಮನೆಯಿಂದ ಇನ್ನೂ ಚಿನ್ನ ಮತ್ತು ಹಣವನ್ನು ತಂದುಕೊಡು, ಇಲ್ಲದಿದ್ದರೆ ಮನೆಯಲ್ಲಿ ಇರಲು ಬಿಡುವುದಿಲ್ಲ ಎಂದು ಬೆದರಿಕೆ ಹಾಕಿ ಹೊಡೆಯುತ್ತಿದ್ದರು. ಮಾತ್ರವಲ್ಲದೇ ಸುಮಾರು 6 ಲಕ್ಷ ರೂ. ಗಳಷ್ಟು ಚಿನ್ನವನ್ನು ಮಾರಾಟ ಮಾಡಿಸಿ ಹಣ ಪಡೆದುಕೊಂಡಿದ್ದಾರೆ.
ಈ ನಡುವೆ ಪತಿ ಮೂರು ಸಲ ಒಮಾನ್ಗೆ ಕರೆಸಿಕೊಂಡು ಅಲ್ಲಿ ಕೂಡ ದೈಹಿಕ, ಮಾನಸಿಕ ಹಿಂಸೆ ನೀಡಿದ್ದು, ತಲಾಕ್ ಕೊಡುತ್ತೇನೆ ಎಂದು ಬೆದರಿಕೆ ಹಾಕಿದ್ದನು. ಕಳೆದ 6 ವರ್ಷಗಳಿಂದ ಖರ್ಚಿಗೂ ಹಣ ಕೊಡದೇ, ಮಾನಸಿಕ, ದೈಹಿಕ ಹಿಂಸೆ ನೀಡುತ್ತಿರುವುದಾಗಿ ಆಯಿಶಾ ಫರೀನ್ ಕಾಪು ಪೊಲೀಸ್ ಠಾಣೆಯಲ್ಲಿ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ
Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ
Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ
Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್ ಪಂತ್
Amruthapura: ಅಮೃತಪುರವೆಂಬ ಅದ್ಭುತ ತಾಣ