ಕಾರ್ಕಳ: ಆಟೋ ರಿಕ್ಷಾ-ಬೈಕ್ ನಡುವೆ ಅಪಘಾತ: ಚಾಲಕ ಸಾವು
Team Udayavani, Dec 16, 2022, 6:33 PM IST
ಕಾರ್ಕಳ: ಆಟೋ ರಿಕ್ಷಾ-ಬೈಕ್ ನಡುವೆ ಡಿಕ್ಕಿ ಸಂಭವಿಸಿ ವಿಜಯ ಬಿ. ಶೆಟ್ಟಿ ( 57) ಮೃತಪಟ್ಟ ಘಟನೆ ಡಿ.15ರಂದು ರಾತ್ರಿ ನಡೆದಿದೆ.
ಮೂಡಬಿದ್ರೆ ಅಲಂಗಾರು ನಿವಾಸಿಗಳಾದ ವಿಜಯ ಶೆಟ್ಟಿ ಸೇರಿದಂತೆ ಸಂಬಂದಿಕರು ನಾಲ್ಕು ಮಂದಿ ಬಜಗೋಳಿಯಲ್ಲಿ ಕಾರ್ಯಕ್ರಮ ಮುಗಿಸಿ ರಿಕ್ಷಾದಲ್ಲಿ ವಾಪಸಾಗುವ ವೇಳೆ ಕಾರ್ಕಳದ ಪುಲ್ಕೇರಿ ಕಡೆಯಿಂದ ಕಜೆ ಕಡೆಗೆ ಹೋಗುವ ಬೈಕ್ ನಡುವೆ ಕರಿಯಕಲ್ಲು ರಾಕ್ಸೈಡ್ ಬಾರ್ ಬಳಿ ಅಪಘಾತ ಸಂಭವಿಸಿದೆ.
ಬೈಕ್ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸುವ ಭರದಲ್ಲಿ ರಿಕ್ಷಾ ಚಾಲಕ ಒಮ್ಮೆಲೆ ಬ್ರೇಕ್ ಹಾಕಿದ್ದು ನಿಯಂತ್ರಣ ತಪ್ಪಿ ಬೈಕ್ಗೆ ಡಿಕ್ಕಿ ಹೊಡೆದಿದೆ.
ರಿಕ್ಷಾ ಮಗುಚಿ ಬಿದ್ದು ಗಾಯಗೊಂಡ ವಿಜಯ ಶೆಟ್ಟಿ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ದಾರಿ ಮಧ್ಯೆ ಮೃತಪಟ್ಟಿದ್ದಾರೆ. ರಿಕ್ಷಾದಲ್ಲಿದ್ದವರು ಪ್ರಾಣಪಾಯದಿಂದ ಪಾರಾಗಿದ್ದಾರೆ, ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.