ಕೊಲ್ಲೂರು: “ಪಿಯಾನೋ ಕೀ’ ಮಾದರಿಯ ಕಿಂಡಿ ಅಣೆಕಟ್ಟು

ರಾಜ್ಯದಲ್ಲೇ ಪ್ರಥಮ ಬಾರಿಗೆ ವಿನೂತನ ಪ್ರಯೋಗ

Team Udayavani, Jul 13, 2019, 5:15 AM IST

1207KLRE1

ಕೊಲ್ಲೂರು: ನೀರು ಸಂಗ್ರಹಣೆ ಉದ್ದೇಶದಿಂದ ವಿಶಿಷ್ಟ ಪಿಯಾನೋ ಕೀ ಮಾದರಿ ಅಣೆಕಟ್ಟೊಂದನ್ನು ಕೊಲ್ಲೂರಿನ ದಳಿ ಎಂಬಲ್ಲಿ ನಿರ್ಮಿಸಲಾಗುತ್ತಿದೆ.

ಏನಿದು ಪಿಯಾನೋ
ಕೀ ಅಣೆಕಟ್ಟು ?
ಸಂಗೀತ ಉಪಕರಣ ಪಿಯಾನೋ ಕೀ ಮಾದರಿಯಲ್ಲಿರುವ ಈ ಅಣೆಕಟ್ಟು ವಿಶಿಷ್ಟವಾದ ವಿನ್ಯಾಸ ಹೊಂದಿದ್ದು, ನೀರನ್ನು ತಡೆಗಟ್ಟುವುದರೊಂದಿಗೆ ರಭಸವಾಗಿ ಹರಿಯುವುದನ್ನೂ ನಿಯಂತ್ರಿಸುತ್ತದೆ. 2.22 ಕೋಟಿ ರೂ. ವೆಚ್ಚದಲ್ಲಿ ಈ ಅಣೆಕಟ್ಟು ರೂಪುತಳೆಯುತ್ತಿದ್ದು, ಹರಿಯುವ ನೀರನ್ನು ಪರಿಣಾಮಕಾರಿಯಾಗಿ ಬಳಸುವುದಕ್ಕೆ ಪ್ರಯೋಜನಕಾರಿಯಾಗಿದೆ.

ಯಾಕಾಗಿ ಈ ವ್ಯವಸ್ಥೆ?
ಸಾಮಾನ್ಯ ಅಣೆಕಟ್ಟಿನಲ್ಲಿ ನೀರ ಹರಿವಿಗೆ ಅಡ್ಡಲಾಗಿ ಕಾಂಕ್ರೀಟ್‌ ಗೋಡೆ ಕಟ್ಟಲಾಗುತ್ತದೆ. ಆದರೆ ಇಲ್ಲಿ ಅಡ್ಡಲಾಗಿ ಪಿಯಾನೋ ಕೀ ಮಾದರಿಯಲ್ಲಿ ಕಾಂಕ್ರೀಟ್‌ ಸ್ಲಾéಬ್‌ಗಳಿದ್ದು ನೀರಿನ ಮಟ್ಟ ನಿಗದಿತ ಪ್ರಮಾಣದಿಂದ ಹೆಚ್ಚಾದ ಬಳಿಕ ಅದನ್ನು ಹಾದು ಹೋಗುತ್ತದೆ. ಇದರಿಂದ ಅಧಿಕ ಪ್ರಮಾಣದ ನೀರಿನ ಹರಿವಿನ ಸಂದರ್ಭ ಅಣೆಕಟ್ಟೆಯ ಮೇಲೆ ಒತ್ತಡ ಬೀಳದು. ಜತೆಗೆ ಸ್ಥಳೀಯವಾಗಿ ಸಾಕಷ್ಟು ನೀರು ಒದಗಿಸಲೂ ಸಾಕಾಗುತ್ತದೆ.
ಇತರ ಅಣೆಕಟ್ಟುಗಳಿಗೆ ಹೋಲಿಸಿದಲ್ಲಿ ಇದರ ವೆಚ್ಚ, ನಿರ್ವಹಣೆ ವೆಚ್ಚವೂ ಕಡಿಮೆ. 50 ಮೀ. ಉದ್ದ, 4 ಮೀ. ಎತ್ತರಕ್ಕೆ ಈ ಅಣೆಕಟ್ಟು ನಿರ್ಮಾಣವಾಗುತ್ತಿದೆ. ಹೆಚ್ಚಿನ ನೀರು ಬದಿಯಲ್ಲಿ ಸೋರಿಕೆಯಾಗಬಾರದೆಂಬ ಉದ್ದೇಶದಿಂದ ಬದಿಯಲ್ಲಿ ಕಿಂಡಿ ಅಣೆಕಟ್ಟಿನ ಮಾದರಿ ಗೇಟ್‌ಗಳನ್ನು ಹಾಕಲಾಗುವುದು. ಪ್ರಾಯೋಗಿಕವಾಗಿ ರಾಜ್ಯದಲ್ಲೇ ಪ್ರಥಮವಾಗಿ ಮಾಡಲಾಗಿರುವ ಈ ಕಿಂಡಿ ಅಣೆಕಟ್ಟು ಕೊಲ್ಲೂರಿನ ನಿವಾಸಿಗಳಿಗೆ ಉಪಯೋಗ ಆಗಲಿದೆ.

ಮುಂದಿನ ತಿಂಗಳು ಲೋಕಾರ್ಪಣೆ
ಅಣೆಕಟ್ಟು ನಿರ್ಮಾಣ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಗೇಟ್‌ ನಿರ್ಮಾಣ ನಡೆಯುತ್ತಿದೆ. ಮುಂದಿನ ತಿಂಗಳು ಲೋಕಾರ್ಪಣೆಗೊಳ್ಳುವ ಸಾಧ್ಯತೆ ಇದೆ.

ಪೋಲಾಗುವುದಿಲ್ಲ
ರಾಜ್ಯದಲ್ಲೇ ಪ್ರಥಮವಾಗಿ ಪ್ರಾಯೋಗಿಕ ನೆಲೆಯಲ್ಲಿ ನಿರ್ಮಿಸಲಾಗುತ್ತಿರುವ ಪಿಯಾನೋ ಕೀ ಕಿಂಡಿ ಅಣೆಕಟ್ಟು ಪೋಲಾಗುವ ನೀರಿನ ಬಳಕೆಗೆ ಉಪಯೋಗಕಾರಿಯಾಗಿದೆ.
ಆಲ್ವಿನ್‌,
ಸಹಾಯಕ ಇಂಜಿನಿಯರ್‌, ಸಣ್ಣ ನಿರಾವರಿ ಇಲಾಖೆ

ಕೃಷಿ ಭೂಮಿಗೆ ನೀರು
ದಡಿ ಆಸು-ಪಾಸಿನ ನಿವಾಸಿಗಳಿಗೆ ನೀರಿನ ಲಭ್ಯತೆಗೆ ಹಾಗೂ ಕೃಷಿ ಭೂಮಿಗೆ ನೀರುಣಿಸುವ ಉದ್ದೇಶದಿಂದ ಈ ಯೋಜನೆಗೆ ಚಾಲನೆ ನೀಡಲಾಗಿದೆ.
-ಬಿ.ಎಂ. ಸುಕುಮಾರ ಶೆಟ್ಟಿ,
ಶಾಸಕರು, ಬೈಂದೂರು

-ಡಾ| ಸುಧಾಕರ್‌ ನಂಬಿಯಾರ್‌

ಟಾಪ್ ನ್ಯೂಸ್

17-

Bantwala: ರಾಂಗ್‌ಸೈಡಿನಲ್ಲಿ ಬಂದು ಎರಡು ಬೈಕ್‌ಗಳಿಗೆ  ಢಿಕ್ಕಿ ಹೊಡೆದ ಲಾರಿ

Man shot a Cow on head twice

Manipur; ಹಸುವಿಗೆ ಗುಂಡಿಟ್ಟು ಕೊಂದ ಕ್ರೂರಿ!: ವ್ಯಾಪಕ ಆಕ್ರೋಶ

Rekha Jhunjhunwala lost Rs 800 crore in a single day!

Share Market; ರೇಖಾ ಜುಂಜುನ್‌ವಾಲಾಗೆ ಒಂದೇ ದಿನ 800 ಕೋಟಿ ರೂ. ನಷ್ಟ!

sunita williams

Sunita williams ಬಾಹ್ಯಾಕಾಶ ಯಾನ 90 ನಿಮಿಷಗಳಿದ್ದಾಗ ರದ್ದು!

Kalaburagi; ಮತದಾನ ಮಾಡಿ ವಿಡಿಯೋ ವೈರಲ್ ಮಾಡಿದ ಚಿಂಚೋಳಿ ಮತದಾರ

Kalaburagi; ಮತದಾನ ಮಾಡಿ ವಿಡಿಯೋ ವೈರಲ್ ಮಾಡಿದ ಚಿಂಚೋಳಿ ಮತದಾರ

16-

ಮೂಡುಬಿದಿರೆ: ಹಿಟಾಚಿಗಳ ಬ್ಯಾಟರಿ ಕಳವು

yuzvendra Chahal

IPL 2024; ಹೊಸ ಭಾರತೀಯ ದಾಖಲೆ ಬರೆದ ಯುಜುವೇಂದ್ರ ಚಾಹಲ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-

Kundapura ಭಾಗದ ಅಪರಾಧ ಸುದ್ದಿಗಳು

13

Byndoor: ಬಾವಿಗೆ ಬಿದ್ದ ವ್ಯಕ್ತಿಯ ರಕ್ಷಣೆ

6-KAUP

Kaup: ಪಾಂಗಾಳದಲ್ಲಿ ಆಕಸ್ಮಿಕ ಬೆಂಕಿ: ಬೆಂಕಿ ನಂದಿಸಲು ನೆರವಾದ ತಹಶೀಲ್ದಾರ್

Siddapura: ಶಾರ್ಟ್ ಸರ್ಕ್ಯೂಟ್ ಗೆ ಅಂಗಡಿಗಳು ಬೆಂಕಿಗಾಹುತಿ… ಲಕ್ಷಾಂತರ ರೂ ನಷ್ಟ

Siddapura: ಶಾರ್ಟ್ ಸರ್ಕ್ಯೂಟ್ ಗೆ ಅಂಗಡಿಗಳು ಬೆಂಕಿಗಾಹುತಿ… ಲಕ್ಷಾಂತರ ರೂ ನಷ್ಟ

Weather ಕಡಲಬ್ಬರ ತುಸು ಜೋರು; ಗಾಳಿ ಬಿರುಸು

Weather ಕಡಲಬ್ಬರ ತುಸು ಜೋರು; ಗಾಳಿ ಬಿರುಸು

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

17-

Bantwala: ರಾಂಗ್‌ಸೈಡಿನಲ್ಲಿ ಬಂದು ಎರಡು ಬೈಕ್‌ಗಳಿಗೆ  ಢಿಕ್ಕಿ ಹೊಡೆದ ಲಾರಿ

Man shot a Cow on head twice

Manipur; ಹಸುವಿಗೆ ಗುಂಡಿಟ್ಟು ಕೊಂದ ಕ್ರೂರಿ!: ವ್ಯಾಪಕ ಆಕ್ರೋಶ

Rekha Jhunjhunwala lost Rs 800 crore in a single day!

Share Market; ರೇಖಾ ಜುಂಜುನ್‌ವಾಲಾಗೆ ಒಂದೇ ದಿನ 800 ಕೋಟಿ ರೂ. ನಷ್ಟ!

sunita williams

Sunita williams ಬಾಹ್ಯಾಕಾಶ ಯಾನ 90 ನಿಮಿಷಗಳಿದ್ದಾಗ ರದ್ದು!

Kalaburagi; ಮತದಾನ ಮಾಡಿ ವಿಡಿಯೋ ವೈರಲ್ ಮಾಡಿದ ಚಿಂಚೋಳಿ ಮತದಾರ

Kalaburagi; ಮತದಾನ ಮಾಡಿ ವಿಡಿಯೋ ವೈರಲ್ ಮಾಡಿದ ಚಿಂಚೋಳಿ ಮತದಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.