ಕೆಪಿಟಿಸಿಎಲ್‌ ಪರೀಕ್ಷೆಗೆ ಶೂ, ಬೆಲ್ಟ್ , ಪೂರ್ಣತೋಳಿನ ಅಂಗಿ ನಿಷಿದ್ಧ!

ಪಿಎಸ್‌ಐ ಪರೀಕ್ಷೆ ಅಕ್ರಮದಿಂದ ಎಚ್ಚೆತ್ತುಕೊಂಡ ಪ್ರಾಧಿಕಾರ?

Team Udayavani, Jul 21, 2022, 7:17 AM IST

thumb 3 exam

ಉಡುಪಿ: ಪೂರ್ಣತೋಳಿನ ಅಂಗಿ, ಶೂ, ಬೆಲ್ಟ್, ಚಿನ್ನದ ಸರ, ಕಿವಿಯೋಲೆ, ಎನ್‌-95 ಮಾಸ್ಕ್ ಧರಿಸುವಂತಿಲ್ಲ. ಪರೀಕ್ಷೆಗೆ ಸ್ಯಾಂಡಲ್‌, ಚಪ್ಪಲಿಯಲ್ಲೇ ಹೋಗಬೇಕು… ಷರತ್ತುಗಳ ಪಟ್ಟಿಕಂಡು ಬೆಚ್ಚಿಬಿದ್ದ ಅಭ್ಯರ್ಥಿಗಳು!

ಹೌದು, ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮದ ಸಹಾಯಕ ಎಂಜಿನಿಯರ್‌ (ವಿದ್ಯುತ್‌/ಸಿವಿಲ್‌), ಕಿರಿಯ ಎಂಜಿನಿಯರ್‌ (ವಿದ್ಯುತ್‌/ ಸಿವಿಲ್‌) ಮತ್ತು ಕಿರಿಯ ಸಹಾಯಕ ಹುದ್ದೆಗಳ ನೇಮಕಾತಿಗೆ ಕರ್ನಾಟಕ ಪರೀಕ್ಷೆ ಪ್ರಾಧಿಕಾರ ಜು. 24ರಂದು ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗೆ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ಪ್ರತ್ಯೇಕ ಮಾರ್ಗಸೂಚಿ, ಡ್ರೆಸ್‌ ಕೋಡ್‌ ಬಿಡುಗಡೆ ಮಾಡಿದೆ. ಪರೀಕ್ಷೆ ಬರೆಯಲು ಸಜ್ಜಾಗಿರುವ ಅಭ್ಯರ್ಥಿಗಳು ಷರತ್ತುಗಳನ್ನು ಕಂಡು ಹೌಹಾರಿದ್ದಾರೆ.

ಪುರುಷ ಅಭ್ಯರ್ಥಿಗಳಿಗೆ
ಪುರುಷರು ಕೋವಿಡ್‌ ಸುರಕ್ಷತೆ ಮಾರ್ಗ ಸೂಚಿ ಪ್ರಕಾರ ಅರೆ ಪಾರದರ್ಶಕವಾದ ಸರ್ಜಿ ಕಲ್‌ ಮಾಸ್ಕ್ ಮಾತ್ರ ಧರಿಸಬೇಕು. ಎನ್‌-95 ಅಥವಾ ಕಾಟನ್‌ ಮಾಸ್ಕ್ಗೆ ಅವಕಾಶವಿಲ್ಲ. ಆರ್ಧತೋಳಿನ ಅಂಗಿಯನ್ನೇ ಧರಿಸಿರಬೇಕು. ದಿರಿಸಿ ನಲ್ಲಿ ಜಿಪ್‌ ಪಾಟೆಕ್‌ಗಳು, ಪಾಕೆಟ್‌ಗಳಲ್ಲಿ ದೊಡ್ಡ ಬಟನ್‌ಗಳು, ವಿಸ್ತಾರವಾದ ಕಸೂತಿ ಇರುವ ಬಟ್ಟೆಗಳು ಇರಬಾರದು. ಕುರ್ತಾ, ಪೈಜಾಮ ಧರಿಸುವಂತಿಲ್ಲ. ಕೊಠಡಿ ಒಳಗೆ ಶೂ ಧರಿಸುವಂತಿಲ್ಲ. ತೆಳುವಾದ ಅಡಿಭಾಗ ಹೊಂದಿರುವ ಸ್ಯಾಂಡಲ್‌ ಅಥವಾ ಚಪ್ಪಲಿಯನ್ನಷ್ಟೇ ಧರಿಸ ಬೇಕು. ಯಾವುದೇ ಲೋಹದ ಆಭರಣ ಧರಿಸುವಂತಿಲ್ಲ. ಕಿವಿಯೋಲೆ, ಉಂಗುರ ಹಾಗೂ ಕಡಗಗಳಿಗೂ ನಿರ್ಬಂಧ ಹೇರಲಾಗಿದೆ.

ಮಹಿಳಾ ಅಭ್ಯರ್ಥಿಗಳಿಗೆ: ಮಹಿಳೆಯರು ಕೂಡ ಅರೆಪಾರದರ್ಶಕವಾದ ಸರ್ಜಿ ಕಲ್‌ ಮಾಸ್ಕ್ ಮಾತ್ರ ಧರಿಸಬೇಕು. ವಿಸ್ತಾರವಾದ ಕಸೂತಿ, ಹೂಗಳು, ಬ್ರೂಚ್‌ಗಳು ಅಥವಾ ಬಟನ್‌ಗಳನ್ನು ಹೊಂದಿರುವ ಉಡುಪು ಧರಿಸು ವಂತಿಲ್ಲ. ಪೂರ್ಣ ತೋಳಿನ ಯಾವುದೇ ಬಟ್ಟೆಗೆ ಅವಕಾಶವಿಲ್ಲ. ಎತ್ತರದ ಹಿಮ್ಮಡಿಯ ಮತ್ತು ಎತ್ತರದ ಅಡಿಭಾಗ ಹೊಂದಿರುವ ಬೂಟು ಹಾಕು ವಂತಿಲ್ಲ. ಸ್ಯಾಂಡಲ್ಸ್‌, ಚಪ್ಪಲಿ ಅಥವಾ ಕಡಿಮೆ ಹಿಮ್ಮಡಿಯ ಪಾದರಕ್ಷೆ ಬಳಸಬೇಕು. ಕಿವಿಯೋಲೆ, ಉಂಗುರ, ಪೆಂಡೆಂಟ್‌, ನೆಕ್ಲೇಸ್‌, ಬಳೆ ಸಹಿತ ಯಾವುದೇ ಲೋಹದ ಆಭರಣ ಧರಿಸುವಂತಿಲ್ಲ.

ನಿಷೇಧಿತ ವಸ್ತುಗಳು
ಎಲೆಕ್ಟ್ರಾನಿಕ್‌ ವಸ್ತುಗಳು, ಮೊಬೈಲ್‌, ಪೆನ್‌ಡ್ರೈವ್‌, ಇಯರ್‌ಫೋನ್‌, ಮೈಕ್ರೋ ಫೋನ್‌, ಬ್ಲೂಟೂತ್‌ ಹಾಗೂ ಕೈಗಡಿಯಾರ ಮೊದಲಾದ ಸಾಧನಗಳು, ಪ್ಯಾಕ್‌ ಮಾಡಿದ ಅಥವಾ ಮಾಡಿರದ ಯಾವುದೇ ಆಹಾರ ಪದಾರ್ಥವನ್ನು ಕೇಂದ್ರದೊಳಗೆ ಕೊಂಡೊ ಯ್ಯುವಂತಿಲ್ಲ. ಪೆನ್ಸಿಲ್‌, ಪೇಪರ್‌, ಎರೇಸರ್‌, ಮಾಪಕಗಳು, ಜ್ಯಾಮಿಟ್ರಿ ಬಾಕ್ಸ್‌, ಲಾಗ್‌ ಟೇಬಲ್‌ಗ‌ಳನ್ನು ಕೊಂಡೊಯ್ಯುವಂತಿಲ್ಲ. ವ್ಯಾಲೆಟ್‌, ಗಾಗಲ್ಸ್‌, ಬೆಲ್ಟ್, ಕ್ಯಾಪ್‌, ಪರಿಕರಗಳು, ಕೆಮರಾ, ಆಭರಣಗಳನ್ನು ಕೊಂಡೊ ಯ್ಯುವಂತಿಲ್ಲ. ಯಾವುದೇ ಲೇಬಲ್‌ ಇಲ್ಲದ ಪಾರದರ್ಶಕ ನೀರಿನ ಬಾಟಲಿ ಕೊಂಡೊ ಯ್ಯಲು ಅವಕಾಶವಿದೆ ಎಂದು ಪ್ರಾಧಿಕಾರ ಮಾರ್ಗಸೂಚಿಯಲ್ಲಿ ತಿಳಿಸಿದೆ.

ಏಕೆ ಇಷ್ಟೊಂದು ಕಠಿನ?
ರಾಷ್ಟ್ರೀಯ ಪರೀಕ್ಷೆ ಏಜೆನ್ಸಿ ನಡೆಸುವ ಬಹುತೇಕ ಸ್ಪರ್ಧಾತ್ಮಕ ಪರೀಕ್ಷೆಗಳು ಇಷ್ಟೇ ಕಠಿನವಾದ ಷರತ್ತುಗಳನ್ನು ಹೊಂದಿರುತ್ತವೆ. ಆದರೆ ಕರ್ನಾಟಕ ಪರೀಕ್ಷೆ ಪ್ರಾಧಿಕಾರ ನಡೆಸುವ ಪರೀಕ್ಷೆಗೆ ಇಷ್ಟು ಕಠಿನವಾದ ಷರತ್ತುಗಳನ್ನು ವಿಧಿಸಿರು ವುದು ಇದೇ ಮೊದಲಿರಬಹುದು. ಇತ್ತೀಚೆಗೆ ಸದ್ದು ಮಾಡಿದ್ದ ಪಿಎಸ್‌ಐ ಪರೀಕ್ಷೆ ಅಕ್ರಮದಿಂದ ಎಚ್ಚೆತ್ತುಕೊಂಡು ಪರೀಕ್ಷೆಗೆ ಕಠಿನ ನಿಯಮ ರಚಿಸಲಾಗಿದೆ ಎನ್ನಲಾಗುತ್ತಿದೆ.

ಅವೈಜ್ಞಾನಿಕ ನಿಯಮ: ಅಭ್ಯರ್ಥಿಗಳ ಆಕ್ಷೇಪ
ಪರೀಕ್ಷೆ ಕೇಂದ್ರ ಹಾಗೂ ಪರೀಕ್ಷೆ ಕೊಠಡಿಯ ಒಳಗೆ ಸಿಸಿ ಕೆಮರಾ ಅಳವಡಿಸುವುದು ಉತ್ತಮ. ಪೂರ್ಣ ತೋಳಿನ ಶರ್ಟ್‌, ಕಿವಿಯೋಲೆ ಧರಿಸಬಾರದು, ಆಹಾರ ಪದಾರ್ಥ ಕೊಂಡೊ  ಯ್ಯುವಂತಿಲ್ಲ ಎಂಬ ಕೆಲವೊಂದು ನಿರ್ಬಂಧ ತೀರ ಅವೈಜ್ಞಾನಿಕವಾಗಿದೆ. ಇದರಿಂದಲೇ ಹಲವು ಅಭ್ಯರ್ಥಿಗಳು ಪರೀಕ್ಷೆ ಕೇಂದ್ರಕ್ಕೆ ಬಾರದೆಯೂ ಇರಬಹುದು. ಇದನ್ನು ಸರಕಾರ ಹಾಗೂ ಸಂಬಂಧಪಟ್ಟ ಪ್ರಾಧಿಕಾರದ ಅಧಿಕಾರಿಗಳು ಪುನರ್‌ ಪರಿಶೀಲನೆ ಮಾಡಬೇಕು ಎಂದು ಅಭ್ಯರ್ಥಿಗಳು ಆಗ್ರಹಿಸಿದ್ದಾರೆ.

ಟಾಪ್ ನ್ಯೂಸ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

Central Govt ನಾಲ್ಕಾಣೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

Kapu Assembly constituency: ನಕಲಿ ಮತದಾನ;ಆರೋಪ

Kapu Assembly constituency: ನಕಲಿ ಮತದಾನ;ಆರೋಪ

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

1-eewq-ewq

Yadgir; ಮೇ.1 ರಂದು ಕಾಂಗ್ರೆಸ್ ನಾಯಕರ ಸಮಾಗಮ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.