ಕಟ್ಟಡ ತಂತ್ರಜ್ಞಾನದಲ್ಲಿ  ಮಾಹೆ ವಿ.ವಿ.- ಕೆಇಎಫ್ ಮಹತ್ವದ ಹೆಜ್ಜೆ


Team Udayavani, Dec 16, 2018, 11:01 AM IST

mahe.jpg

ಉಡುಪಿ: ಮಣಿಪಾಲದ ಮಾಹೆ ವಿಶ್ವ ವಿದ್ಯಾನಿಲಯ ಮತ್ತು ದುಬಾೖ ಮೂಲದ ಕೆಇಎಫ್ ಹೋಲ್ಡಿಂಗ್ಸ್‌ನ ಫೈಜಲ್‌ ಶಬಾನ ಫೌಂಡೇಶನ್‌ ಸಹಭಾಗಿತ್ವದಲ್ಲಿ ನಿರ್ಮಿಸಿರುವ ಎಂಐಟಿ-ಕೆಇಎಫ್ ಆರ್‌ ಆ್ಯಂಡ್‌ ಡಿ ಕೇಂದ್ರದ ಪ್ರಥಮ ಹಂತವನ್ನು ಕೆಇಎಫ್ ಅಧ್ಯಕ್ಷ, ಎಂಐಟಿ ಪ್ರಾಕ್ತನ ವಿದ್ಯಾರ್ಥಿ, ಕೇಂದ್ರದ ಮೂಲಪ್ರೇರಕ ಫೈಜಲ್‌ ಇ. ಕೊಟ್ಟಿಕೊಲನ್‌ ಶನಿವಾರ ಎಂಐಟಿ ಆವರಣದಲ್ಲಿ ಉದ್ಘಾಟಿಸಿದರು.  

ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ಇದು ಮಹತ್ವಪೂರ್ಣವಾಗಿದೆ. ಸಿವಿಲ್‌ ಎಂಜಿನಿಯರಿಂಗ್‌ ಮತ್ತು ಆರ್ಕಿಟೆಕ್ಚರ್‌ ವಿಭಾಗದ ವಿದ್ಯಾರ್ಥಿಗಳು ಕ್ಷಿಪ್ರ ಸಮಯದಲ್ಲಿ ಕಟ್ಟಡ ನಿರ್ಮಿಸುವ ತಂತ್ರಜ್ಞಾನದಲ್ಲಿ ಜ್ಞಾನ ಗಳಿಸಬೇಕು. ಇದಕ್ಕಾಗಿ ವಿವಿಧ ಎಂಜಿನಿಯರಿಂಗ್‌ ವಿಭಾಗದ ಪ್ರಾಧ್ಯಾಪಕರ ತಂಡದಿಂದ ಬೆಂಗಳೂರಿನಲ್ಲಿ ಮಾರ್ಗದರ್ಶನ ನೀಡಲಾಗುವುದು. ಕಟ್ಟಡಗಳ ಉತ್ಪಾದನೆ ಈಗ ಹೊಸ ಉಪಕ್ರಮವಾಗಿದೆ. ಅಮೆರಿಕದ ತಂತ್ರಜ್ಞಾನವನ್ನು
ಭಾರತಕ್ಕೆ ಕೊಂಡೊಯ್ಯುವ ಬದಲು ಭಾರತದ ಜ್ಞಾನವನ್ನು ಅಮೆರಿಕಕ್ಕೆ ಕೊಂಡೊಯ್ಯುವಂತಾ ಗಬೇಕು. ಇಲ್ಲಿನ ಪ್ರಾಧ್ಯಾಪಕರಿಗೆ ತರಬೇತಿ ಕೊಟ್ಟು ಬಳಿಕ ವಿದ್ಯಾರ್ಥಿಗಳಿಗೆ ತರಬೇತಿ ನೀಡಬೇಕು ಎಂದು ಫೈಜಲ್‌ ಆಶಯ ವ್ಯಕ್ತಪಡಿಸಿದರು.

ಕೆಇಎಫ್ ಸಿಇಒ ರಿಚರ್ಡ್‌ ಪಾಟಲ್‌, ಸ್ಟ್ರಕ್ಚರಲ್‌ ಎಂಜಿನಿಯರ್‌ ಸ್ಪಿರೋಜ್‌ ಅವರು ಕಟ್ಟಡ ನಿರ್ಮಾಣ ತಂತ್ರಜ್ಞಾನದಲ್ಲಿ ಆಗುತ್ತಿರುವ ಬೆಳವಣಿಗೆಗಳ ಮಾಹಿತಿ ನೀಡಿದರು. ಮಾಹೆ ಟ್ರಸ್ಟ್‌ನ ಟ್ರಸ್ಟಿ ಟಿ. ವಸಂತಿ ಪೈ, ಬೆಂಗಳೂರು ಎಂಇಎಂಜಿ ಆಡಳಿತ ನಿರ್ದೇಶಕ ಡಾ| ರಂಜನ್‌ ಪೈ, ಮಾಹೆ ಸಹಕುಲಾಧಿಪತಿ ಡಾ| ಎಚ್‌.ಎಸ್‌. ಬಲ್ಲಾಳ್‌, ಕುಲಪತಿ ಡಾ| ಎಚ್‌. ವಿನೋದ ಭಟ್‌, ಎಂಐಟಿ ನಿರ್ದೇಶಕ ಡಾ| ಶ್ರೀಕಾಂತ ರಾವ್‌, ಶಾಬಾನ, ಪ್ರಾಧ್ಯಾಪಕರು ಉಪಸ್ಥಿತರಿದ್ದರು.

ಕೇಂದ್ರಕ್ಕೆ 16 ಕೋ.ರೂ. ವೆಚ್ಚ
ಕೇಂದ್ರದ ಒಟ್ಟು ಯೋಜನೆ 16 ಕೋ.ರೂ.ಗಳದ್ದು. ಇದರಲ್ಲಿ ಮಾಹೆ ಮತ್ತು ಕೆಇಎಫ್ ತಲಾ 8 ಕೋ.ರೂ. ವೆಚ್ಚ ಮಾಡುತ್ತಿದೆ. ಈಗ ಮೊದಲ ಹಂತದ ಉದ್ಘಾಟನೆಗೊಂಡಿದೆ. ಎರಡನೇ ಹಂತದಲ್ಲಿ ವಸ್ತುಸಂಗ್ರಹಾಲಯ, ಮೂರನೇ ಹಂತದಲ್ಲಿ ಶೋಕೇಸ್‌ ನಿರ್ಮಾಣಗೊಳ್ಳಲಿದೆ. ಈ ಕಟ್ಟಡದ ಪ್ರತಿಯೊಂದು ಬಿಡಿ ಭಾಗಗಳನ್ನು (ಆರ್‌ಸಿಸಿ ಪಾನೆಲ್‌) ಬೆಂಗಳೂರು ಸಮೀಪದ ಕೃಷ್ಣಗಿರಿಯಲ್ಲಿ ನಿರ್ಮಿಸಿ ಲಾರಿಯಲ್ಲಿ ತಂದು ಕ್ರೇನ್‌ ಮೂಲಕ ಜೋಡಿಸಲಾಗಿದೆ. ಪದವಿ, ಸ್ನಾತಕೋತ್ತರ, ಸಂಶೋಧನ ವಿದ್ಯಾರ್ಥಿಗಳಿಗೆ ಈ ತಂತ್ರಜ್ಞಾನವನ್ನು (ಪ್ರಿಕಾಸ್ಟ್‌ ಟೆಕ್ನಾಲಜಿ) ಪರಿಚಯಿಸಲಾಗುತ್ತಿದೆ. ಇದರ ಬಗ್ಗೆ ಪಠ್ಯಕ್ರಮವನ್ನು ಅಳವಡಿಸುವ ಚಿಂತನೆಯೂ ಇದೆ.  ಕಟ್ಟಡಗಳ ಉತ್ಪಾದನೆಯ ಕಲ್ಪನೆಯನ್ನು ಕೆಇಎಫ್ 2014ರಲ್ಲಿ ಭಾರತದಲ್ಲಿ ಜಾರಿಗೊಳಿಸಿತು. ಬೆಂಗಳೂರಿನಲ್ಲಿ ಕಚೇರಿಯನ್ನು ಹೊಂದಿ ಹಲವು ಕಟ್ಟಡಗಳ ವಿನ್ಯಾಸವನ್ನು ರೂಪಿಸಲಾಗುತ್ತಿದೆ. ಕರ್ನಾಟಕದ ಎಲ್ಲ ಇಂದಿರಾ ಕ್ಯಾಂಟೀನ್‌ಗಳೂ ಕೆಇಎಫ್ನಿಂದ ವಿನ್ಯಾಸಗೊಂಡು ರಚನೆಯಾಗಿದೆ. 

ಕಾರ್ಖಾನೆಯ ಪರಿಸರದಲ್ಲಿ ವಿನ್ಯಾಸ ರೂಪಿಸಿ ವಿವಿಧ ಭಾಗಗಳನ್ನು ಉತ್ಪಾದಿಸಲಾಗುತ್ತದೆ. ಈ ಕ್ಷೇತ್ರದಲ್ಲಿ ನಾವು ರೊಬೋಟಿಕ್ಸ್‌ಗಳನ್ನು ಪರಿಚಯಿಸಿದ್ದೇವೆ. ನಮ್ಮ ತಂಡ ಮತ್ತು ನಿಮ್ಮ ಪ್ರಾಧ್ಯಾಪಕರು ಜತೆ ಸೇರಿ ಈ ಕಲ್ಪನೆಯನ್ನು ಜಾರಿಗೊಳಿಸಲು ಸಂತೋಷಿಸುತ್ತಿದ್ದೇನೆ. ನಾವು ವಿಮಾನ, ಕಾರುಗಳನ್ನು ಉತ್ಪಾದಿಸುವುದಾದರೆ ಕಟ್ಟಡ ಗಳನ್ನು ಏಕೆ ಉತ್ಪಾದಿಸಬಾರದು ಎಂದು ಪ್ರಶ್ನಿಸಿದರು. 50,000 ಚದರಡಿ ವಿಸ್ತೀರ್ಣದ ಈ ಕಟ್ಟಡವನ್ನು ಕೇವಲ ಎರಡು ತಿಂಗಳಲ್ಲಿ ನಿರ್ಮಿಸಲಾಗಿದೆ. ಕೇಂದ್ರವು ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಮುನ್ನಡೆ ಸಾಧಿಸಬೇಕಾಗಿದೆ ಎಂದರು.

ಗ್ರೀನ್ಸ್‌ನಲ್ಲಿ ನಡೆದ ಮಾಹೆ ವಿ.ವಿ.ಯ 3ನೇ ಜಾಗತಿಕ ಪ್ರಾಕ್ತನ ವಿದ್ಯಾರ್ಥಿಗಳ ಎರಡು ದಿನಗಳ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಫೈಜಲ್‌ ಮತ್ತು ಶಾಬಾನ ಅವರನ್ನು ಅಭಿನಂದಿಸಲಾಯಿತು.

ಟಾಪ್ ನ್ಯೂಸ್

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.