ರಾ. ಹೆ. 66 ಕತ್ತಲ ಸಂಚಾರಕ್ಕೆ ಹೆಸರುವಾಸಿ!


Team Udayavani, Oct 15, 2018, 11:47 AM IST

kaup02.jpg

ಕಾಪು: ಮಂಗಳೂರು- ಕುಂದಾಪುರ ನಡುವಿನ ರಾ. ಹೆದ್ದಾರಿಯಲ್ಲಿ ಬರುವ ಪಟ್ಟಣಗಳ ಡಿವೈಡರ್‌ಗಳಲ್ಲಿ ಅಪಘಾತ-ಅಪರಾಧಗಳನ್ನು ತಡೆಯುವಲ್ಲಿ ಮಹತ್ವದ ಪಾತ್ರ ವಹಿಸುವ ದಾರಿದೀಪಗಳಲ್ಲಿ ಸುಮಾರು ಅರ್ಧ ಪ್ರಮಾಣದಷ್ಟು ಬೆಳಗುತ್ತಿಲ್ಲ.

ಇದು ಸಣ್ಣ ಸಂಗತಿ ಎನಿಸಿದರೂ ಪರಿಣಾಮ ದೊಡ್ಡದು. ರಾ.ಹೆ. 66ರಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚುತ್ತಿರುವುದಕ್ಕೆ ದಾರಿದೀಪಗಳು ಉರಿಯದಿರು ವುದೂ ಕಾರಣ. ಮಂಗಳೂರಿನ ನಂತೂರು ಜಂಕ್ಷನ್‌ನಿಂದ ಕುಂದಾಪುರ ಪಾರಿಜಾತ್‌ ಸರ್ಕಲ್‌ವರೆಗೆ ಡಿವೈಡರ್‌ಗಳಲ್ಲಿ 1, 860 ದೀಪಗಳಿವೆ. “ಉದಯವಾಣಿ’ ಪ್ರತಿನಿಧಿ ಮಂಗಳೂರಿನಿಂದ ಕುಂದಾ
ಪುರದವರೆಗೆ ಸಮೀಕ್ಷೆ ನಡೆಸಿದಾಗ, ಈ ಪೈಕಿ ಶೇ. 40ರಿಂದ 50ರಷ್ಟು ಉರಿಯುತ್ತಿರಲಿಲ್ಲ. ಕೆಲವೆಡೆ ರಾತ್ರಿ 9 ಗಂಟೆಯಾಗುತ್ತಲೇ ಆರುತ್ತವೆ.

ಜಂಕ್ಷನ್‌ಗಳಲ್ಲೇ ಕತ್ತಲು 
ನಂತೂರು-ಕುಂದಾಪುರ ಮಧ್ಯೆ ಗ್ರಾಮೀಣ ಒಳ ರಸ್ತೆಗಳು ಬಂದು ಸೇರುವ 30ಕ್ಕೂ ಅಧಿಕ ಜಂಕ್ಷನ್‌ಗಳಿವೆ. ಇಲ್ಲೂ ದೀಪಗಳಿಲ್ಲ. ಬೆಳಕು ಇಲ್ಲದೆ, ಡಿವೈಡರ್‌ ಕೂಡ ಸಮರ್ಪಕ ಇರದೆ ಸವಾರರು ಗೊಂದಲಗೊಂಡು ಅಪಘಾತಗಳು ಘಟಿಸುತ್ತಿವೆ.

ಕಾರಣವೇನು?
ನಿರ್ವಹಣೆಯ ಕೊರತೆಯೇ ಕತ್ತಲು ಬೆಳಕಿನ ಆಟಕ್ಕೆ ಕಾರಣ. ತಲಪಾಡಿಯಿಂದ ಸುರತ್ಕಲ್‌, ಕುಂದಾಪುರದವರೆಗಿನ ದಾರಿ ದೀಪ ನಿರ್ವಹಣೆ ಹೊಣೆ ನವಯುಗ ಕಂಪೆನಿಯದು ಎನ್ನುತ್ತಿವೆ ರಾ.ಹೆ. ಪ್ರಾಧಿ ಕಾರದ ಮೂಲಗಳು. ಗುತ್ತಿಗೆದಾರ ಕಂಪೆನಿ, ತಲಪಾಡಿಯಿಂದ ನಂತೂರು ಮತ್ತು ಸುರತ್ಕಲ್‌ನಿಂದ ಕುಂದಾಪುರದ ವರೆಗಿನ ಹೊಣೆ ತನ್ನದು. ನಂತೂರು- ಸುರತ್ಕಲ್‌ ನಡುವಿನ ಜವಾಬ್ದಾರಿ ಇಲಾಖೆಯದು ಎಂದಿದೆ. ಆದರೆ, ಸುರತ್ಕಲ್‌ನಿಂದ ಕುಂದಾಪುರದ ವರೆಗಿನ ಪ್ರದೇಶದಲ್ಲೂ ಎಲ್ಲ ದೀಪಗಳು ಉರಿಯುತ್ತಿಲ್ಲ!

ಎಂಟು ವರ್ಷ, 2500 ಸಾವು
ರಾ. ಹೆ. ಚತುಷ್ಪಥ ಕಾಮಗಾರಿ ಆರಂಭವಾದ 2010ರಿಂದ ಇಲ್ಲಿಯ ವರೆಗೆ ತಲಪಾಡಿ- ಕುಂದಾಪುರ ನಡುವೆ ಅಪಘಾತಗಳಲ್ಲಿ 2,500 ಮಂದಿ ಸಾವಿಗೀಡಾಗಿದ್ದಾರೆ. 4,000 ಮಂದಿ ಗಾಯ ಗೊಂಡಿದ್ದಾರೆ ಎನ್ನುತ್ತದೆ ಪೊಲೀಸ್‌ ಮಾಹಿತಿ. 

ಮಿನಿ ಪೇಟೆ: ದೀಪವಿಲ್ಲ, ಅಪರಾಧ, ಅಪಘಾತ ಹೆಚ್ಚು
ನಂತೂರು ಜಂಕ್ಷನ್‌ನಿಂದ ಸುರತ್ಕಲ್‌ ತನಕ 680 ದೀಪಗಳಿದ್ದು, ಶೇ. 60ಕ್ಕೂ ಹೆಚ್ಚು ಉರಿಯುತ್ತಿಲ್ಲ. ಸುರತ್ಕಲ್‌ನಿಂದ ಹೆಜಮಾಡಿ ಟೋಲ್‌ ತನಕ 370 ದೀಪಗಳಿವೆ, ಶೇ.30ರಷ್ಟು ಕೆಟ್ಟಿವೆ. ಹೆಜಮಾಡಿ ಟೋಲ್‌ನಿಂದ ಸಾಸ್ತಾನ ಟೋಲ್‌ ತನಕ ಇರುವ 520 ದೀಪಗಳಲ್ಲಿ ಹಾಗೂ ಸಾಸ್ತಾನದಿಂದ ಕುಂದಾಪುರ ತನಕ ಇರುವ 300 ದೀಪಗಳಲ್ಲಿ ಶೇ. 50 ಉರಿಯುತ್ತಿಲ್ಲ. ನಡುವೆ ಹಲವು ಮಿನಿ ಪೇಟೆಗಳಿದ್ದು,ಇಲ್ಲೆಲ್ಲ ರಾತ್ರಿ ಕತ್ತಲು. ಇದರಿಂದಾಗಿ ಅಪರಾಧವೂ ಅಪಘಾತವೂ ಹೆಚ್ಚಿದೆ. ಸರಗಳ್ಳರ ಹಾವಳಿ, ಕಿರುಕುಳ, ಗುಂಪು ಹಲ್ಲೆ, ಹಿಟ್‌ ಆ್ಯಂಡ್‌ ರನ್‌ ಇತ್ಯಾದಿ ನಿತ್ಯ ವರದಿಯಾಗುತ್ತಿವೆ.

ಹೆದ್ದಾರಿಯಲ್ಲಿ ದೀಪಗಳು ಉರಿಯದೆ ಚಾಲಕರು, ಪಾದಚಾರಿಗಳಿಗೆ ತೊಂದರೆ ಆಗುತ್ತಿದೆ. ದ್ವಿಚಕ್ರ ವಾಹನ ಸವಾರರಿಗೆ ಸಮಸ್ಯೆ ಹೆಚ್ಚು. 
ಮಲ್ಲಿಕಾರ್ಜುನ್‌ ರಿಕ್ಷಾ ಚಾಲಕ, ಕೊಲಾ°ಡು

ನಿರ್ವಹಣೆ ಕೊರತೆಯಿಂದ ಅಪಘಾತಗಳು ಸಂಭವಿಸುತ್ತಿವೆ. ಗುತ್ತಿಗೆದಾರರು ಮತ್ತು ಆಧಿಕಾರಿಗಳು ಸಭೆಯಲ್ಲಿ ಹೇಳುವುದು ಒಂದು, ಮಾಡುವುದು ಮತ್ತೂಂದು.
ಕಾಪು ದಿವಾಕರ ಶೆಟ್ಟಿ, ಹೋರಾಟ ಸಮಿತಿ  ಮುಖಂಡ

ಮುಕ್ಕದಿಂದ ಕುಂದಾಪುರ, ನಂತೂರಿನಿಂದ ತಲಪಾಡಿವರೆಗೆ ದಾರಿ ದೀಪಗಳ ಅಳವಡಿಕೆ ನಮ್ಮ ಜವಾಬ್ದಾರಿ, ನಿರ್ವಹಣೆಯನ್ನು ಟೋಲ್‌ಗೇಟ್‌ ನಿರ್ವಾಹಕರಿಗೆ ನೀಡಲಾಗಿದೆ.
ಶಂಕರ್‌, ಚೀಪ್‌ ಪ್ರಾಜೆಕ್ಟ್ ಮ್ಯಾನೇಜರ್‌, ನವಯುಗ ಕಂಪೆನಿ ಪ್ರೈ. ಲಿ.

*ರಾಕೇಶ್‌ ಕುಂಜೂರು

ಟಾಪ್ ನ್ಯೂಸ್

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

Kapu Assembly constituency: ನಕಲಿ ಮತದಾನ;ಆರೋಪ

Kapu Assembly constituency: ನಕಲಿ ಮತದಾನ;ಆರೋಪ

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ

Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.