ಮಾದರಿ ವನ ಬೆಳೆಸಿದ ಮುಚ್ಲುಕೋಡು ದೇಗುಲ

| ದೇಗುಲ ಆವರಣದಲ್ಲೊಂದು ಅಪೂರ್ವ ಸಸ್ಯರಾಶಿ

Team Udayavani, Jun 21, 2019, 9:30 AM IST

udupi-tdy-2..

ಉಡುಪಿ, ಜೂ. 20: ಕುಕ್ಕಿಕಟ್ಟೆ ಸಮೀಪದ ಮುಚ್ಲುಕೋಡು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆವರಣದಲ್ಲಿ 150ಕ್ಕೂ ಅಧಿಕ ಔಷಧೀಯ, ಪೂಜನೀಯ ಸೇರಿದಂತೆ ಅಪರೂಪದ ಗಿಡಗಳನ್ನು ಬೆಳೆಸಲಾಗಿದ್ದು ಮಾದರಿ ವನವೊಂದು ನಿರ್ಮಾಣಗೊಳ್ಳುತ್ತಿದೆ.

ದೇಗುಲದ 2 ಎಕರೆ ಜಾಗದಲ್ಲಿ ಅಪರೂಪದ ಅಣಲೆ ಮರ, ತಪಸ್ಸೀ ಮರ, ಅರ್ಜುನ ವೃಕ್ಷ, ಶಮೀ ವೃಕ್ಷ, ರೋಹಿತಕ, ಅಶೋಕ ವೃಕ್ಷ, ಪಲಾಶ, ಕದಂಬ, ಉತ್ತರಣೆ, ರಕ್ತಚಂದನ, ಕೇದಗೆ ಸೇರಿದಂತೆ ವಿವಿಧ ಸಸ್ಯ-ಮರಗಳು ಬೆಳೆಯುತ್ತಿವೆ.

ಇಲ್ಲಿ ಮೂಲಿಕಾ ವನ, ನವಗ್ರಹ ವನ, ರಾಶಿ ವನ ಹೀಗೆ ವಿವಿಧ ವರ್ಗದ ಸಸಿಗಳನ್ನೊಳಗೊಂಡ ಪ್ರತ್ಯೇಕ ಕಿರುವನಗಳಿವೆ. ಇದರ ಜತೆಗೆ ನಾಗಬನವನ್ನು ಕೂಡ ನೈಸರ್ಗಿಕವಾಗಿಯೇ ಉಳಿಸಿಕೊಳ್ಳಲಾಗಿದೆ. ಅದರಲ್ಲೂ ಸುರಗಿಯಂಥ ಮರಗಳಿವೆ.

ವಿಶೇಷ ದಿನಗಳಂದು ನಾಟಿ:

ಇಲ್ಲಿರುವ ಗಿಡ, ಮರಗಳ ಪೈಕಿ ಕೆಲವು ಗಿಡಗಳನ್ನು ವಿಶಿಷ್ಟ ದಿನಗಳಂದು ನೆಡಲಾಗಿದೆ. ಮೂಲಿಕಾ ವನದಲ್ಲಿರುವ 80 ಗಿಡಗಳನ್ನು ಪೇಜಾವರ ಮಠಾಧೀಶ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರ 80ನೇ ಜನ್ಮನಕ್ಷತ್ರದಂದು ನೆಡಲಾಗಿದೆ. ಸ್ವತಃ ಶ್ರೀಗಳು ಇಲ್ಲಿ ಹಲವು ಗಿಡಗಳನ್ನು ನೆಟ್ಟಿದ್ದಾರೆ. ಮಂತ್ರಾಲಯ ಶ್ರೀ ಗಳು ಶ್ರೀಗಂಧದ ಗಿಡ ನೆಟ್ಟಿದ್ದಾರೆ. ಪೇಜಾವರ ಕಿರಿಯ ಯತಿಗಳಾದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಆಸ್ಥೆವಹಿಸಿ ಗಿಡಗಳನ್ನು ಪೋಷಿಸಿಕೊಂಡು ಬಂದಿದ್ದಾರೆ. ವಾಸುದೇವ ಭಟ್ ಪೆರಂಪಳ್ಳಿ ಅವರು ಕೂಡ ಈ ಮಾದರಿ ವನ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದಾರೆ. ಕರ್ಜೆಯ ಮಂಜುನಾಥ ಗೋಳಿ ಅವರು ಹಲವು ಅಪರೂಪದ ಗಿಡಗಳನ್ನು ನೀಡಿದ್ದಾರೆ. ದೇವಳದ ವ್ಯವಸ್ಥಾಪಕ ರಾಜಶೇಖರ್‌ ಭಟ್ ಮತ್ತು ಸಿಬಂದಿಗೂ ಈ ವನರಾಶಿಯ ಮೇಲೆ ವಿಶೇಷ ಪ್ರೀತಿ. ಅವರು ಸಸ್ಯಗಳನ್ನು ಜಾಗರೂಕತೆಯಿಂದ ಬೆಳೆಸಿದ್ದಾರೆ. ದೇಗುಲದ ಕೆರೆ, ಮೂರು ಬಾವಿಗಳಿಂದ ಇದಕ್ಕೆ ನೀರು ಹಾಕಲಾಗುತ್ತಿದೆ. ಅನೇಕರು ಇದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಸಸ್ಯಶಾಸ್ತ್ರ ವಿದ್ಯಾರ್ಥಿಗಳ ತಂಡ ಕೂಡ ಇಲ್ಲಿ ಅಧ್ಯಯನ ನಡೆಸಿದೆ.

ಎಲ್ಲೆಡೆ ಬೆಳೆಯಲಿ:

ಇದು ಪೇಜಾವರ ಮಠದ ಆಡಳಿತಕ್ಕೊಳಪಟ್ಟ ದೇಗುಲ. ಅನಂತೇಶ್ವರ ದೇವಸ್ಥಾನಕ್ಕೆ ಸಂಬಂಧಿಸಿದ 4 ಸ್ಕಂದಾಲಯಗಳಲ್ಲಿ ಆಗ್ನೇಯ ಮೂಲದ ಸ್ಕಂದಾಲಯವಿದು. 12 ವರ್ಷಗಳ ಹಿಂದೆ ದೇಗುಲದ ಜೀರ್ಣೋದ್ಧಾರ ಸಂದರ್ಭದಲ್ಲೂ ಪ್ರಾಂಗಣದಲ್ಲಿದ್ದ ಬೃಹತ್‌ ಮರಗಳನ್ನು ಉಳಿಸಿಕೊಳ್ಳಲಾಗಿದೆ. ಅನಂತರ ಪಕ್ಕದಲ್ಲೇ ಅಪರೂಪದ ಸಸ್ಯಗಳ ವನ ನಿರ್ಮಿಸಲಾಗಿದೆ. ಇಂಥ ಸಸ್ಯರಾಶಿ ಎಲ್ಲೆಡೆ ಬೆಳೆಸಬೇಕಿದೆ. – ವಾಸುದೇವ ಭಟ್ ಪೆರಂಪಳ್ಳಿ,ಪರಿಸರ ಕಾರ್ಯಕರ್ತರು
ಪ್ರಥಮ ಪ್ರಯತ್ನ:

ದೇವಳದ ಪರಿಸರದಲ್ಲಿ ಈ ರೀತಿಯ ಅಪರೂಪದ ಸಸ್ಯಗಳನ್ನೊಳಗೊಂಡ ಇಷ್ಟು ದೊಡ್ಡ ವನ ನಿರ್ಮಿಸಿರುವುದು ಇದೇ ಮೊದಲು. ಇತರ ದೇವಸ್ಥಾನಗಳಲ್ಲಿಯೂ ಲಭ್ಯ ಇರುವ ಜಾಗದಲ್ಲಿ ಇಂಥ ವನ ನಿರ್ಮಿಸಿದರೆ ಅತ್ಯಂತ ಉಪಯುಕ್ತವಾಗಿರುವ ಅಪರೂಪದ ಸಸ್ಯಗಳನ್ನು ರಕ್ಷಿಸಿದಂತೆ ಆಗುತ್ತದೆ. ಇತರ ಸಸ್ಯಗಳಂತೆಯೇ 2-3 ವರ್ಷ ಸರಿಯಾಗಿ ನೀರು ಗೊಬ್ಬರ ಹಾಕಿ ಕಾಳಜಿ ವಹಿಸಿದರೆ ಅನಂತರ ಅವುಗಳಷ್ಟಕ್ಕೇ ಬೆಳೆಯುತ್ತವೆ. ಇಲ್ಲಿ ಬೆಳೆಸುತ್ತಿರುವ ಅಪರೂಪದ ಮರಗಳ ಪೈಕಿ ಒಂದೆರಡು ಜಾತಿಯ ಮರಗಳು ಹಿಂದೆ ಉಡುಪಿ ನಗರದಲ್ಲೇ ಇದ್ದವು. -ಗೋಪಾಲಕೃಷ್ಣ ಭಟ್,ನಿವೃತ್ತ ಸಸ್ಯಶಾಸ್ತ್ರ ಪ್ರಾಧ್ಯಾಪಕರು, ಉಡುಪಿ

ಟಾಪ್ ನ್ಯೂಸ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Brahmavar

Padubidri: ಅಪಘಾತದ ಗಾಯಾಳು ಸಾವು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Father; ಚಂದ್ರು ನಿರ್ಮಾಣದ ‘ಫಾದರ್‌’ ಚಿತ್ರಕ್ಕೆ ಮುಹೂರ್ತ

Father; ಚಂದ್ರು ನಿರ್ಮಾಣದ ‘ಫಾದರ್‌’ ಚಿತ್ರಕ್ಕೆ ಮುಹೂರ್ತ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.