ಮೊಗವೀರ ಸಮಾಜದ 41 ಜೋಡಿಗಳು ಹಸೆಮಣೆಗೆ

ಇದುವರೆಗೆ 312 ಜೋಡಿಗಳಿಗೆ ಕಂಕಣ ಭಾಗ್ಯ

Team Udayavani, May 2, 2019, 6:00 AM IST

010519ASTRO05

ಡಾ| ಜಿ. ಶಂಕರ್‌ ದಂಪತಿಗಳು ನವ ವಧು-ವರರಿಗೆ ತಾಳಿ ವಿತರಿಸಿದರು.

ಉಡುಪಿ: “ಆದಿತ್ಯಾದಿ ನವಗ್ರಹಾಃ ಶುಭಕರಾ ಮೇಷಾದಯೋ ರಾಶಯೋ|… ಸರ್ವೇ ಸ್ಥಾವರ ಜಂಗಮಾಃ ಪ್ರತಿದಿನಂ ಕುರ್ವಂತು ನೋ ಮಂಗಲಮ್‌||’

ಜಿ. ಶಂಕರ್‌ ಫ್ಯಾಮಿಲಿ ಟ್ರಸ್ಟ್‌ ಅಂಬಲಪಾಡಿ, ಜಿಲ್ಲಾ ಮೊಗವೀರ ಯುವ ಸಂಘಟನೆ ಆಶ್ರಯದಲ್ಲಿ ಅಂಬಲಪಾಡಿ ಶ್ಯಾಮಿಲಿ ಸಭಾಂಗಣದಲ್ಲಿ ಬುಧವಾರ ನಡೆದ 11ನೇ ವರ್ಷದ ಸಾಮೂಹಿಕ ವಿವಾಹದಲ್ಲಿ ಮೊಗವೀರ ಸಮಾಜದ 41 ಜೋಡಿ
ಗಳು ಹಸೆಮಣೆ ಏರಿ, ಮಾಂಗಲ್ಯ ಧಾರಣೆ ಮಾಡಿದರು.

ಪುರೋಹಿತರು ಜೋಡಿಗಳಿಗೆ ನವಗ್ರಹಗಳೂ ಸಕಲ ಸ್ಥಾವರ ಜಂಗಮಗಳೂ ಪ್ರತಿನಿತ್ಯ ಶುಭವನ್ನುತರಲಿ ಎಂದು ಹಾರೈಸುವುದೇ ಮೊದ ಲಾದ ಎಂಟು ಸೊಲ್ಲುಗಳಿರುವ, ಉಡುಪಿ ಪಲಿಮಾರು ಮಠದ ಆರನೆಯ ಯತಿ ಶ್ರೀರಾಜರಾಜೇಶ್ವರ ತೀರ್ಥರು ರಚಿಸಿದ “ಮಂಗಲಾಷ್ಟಕ’ ವನ್ನು ಪಠಿಸಿ ಶುಭ ಕೋರಿದರು.

ವರದಕ್ಷಿಣೆ ರಹಿತವಾದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ದಲ್ಲಿ ಈವರೆಗೆ ಒಟ್ಟು 271 ಜೋಡಿಗಳು ಕಂಕಣ ಭಾಗ್ಯ ಪಡೆದಿದ್ದಾರೆ. ಈಗಾ ಗಲೇ ವಿವಾಹವಾದ ಜೋಡಿಗಳು ನೆಮ್ಮದಿಯ ಪರಿಪೂರ್ಣ ಬದುಕುಸಾಗಿಸುತ್ತಿದ್ದಾರೆ ಎಂದು ಜಿ. ಶಂಕರ್‌
ಫ್ಯಾಮಿಲಿ ಟ್ರಸ್ಟ್‌ನ ಪ್ರವರ್ತಕ ಡಾ| ಜಿ. ಶಂಕರ್‌ ಹೇಳಿದರು.

ಮದುವೆಗಾಗಿ ಖರ್ಚು ಮಾಡಿ ಸಾಲಗಾರರಾಗಿ ಬದುಕುವ ಸನ್ನಿವೇಶ ಎದುರಾಗಬಾರದು, ಮದುವೆ ಯೋಗವೇ ಇಲ್ಲ ಎಂದು ಕೊರಗುವ ಜನರಿಗೆ ಅನುಕೂಲವಾಗಲಿ ಎನ್ನುವಮಹದಾಸೆ ಹೊತ್ತು ಈ ಉಚಿತ ಸಾಮೂಹಿಕ ವಿವಾಹ ಸಂಘಟಿಸ ಲಾಗಿದೆ. ಇದರಿಂದ ಹೊಸ ಜೋಡಿಗಳ ಬದುಕಿಗೆ ಅರ್ಥ ಬರುವುದಲ್ಲದೆ ನಮಗೂ ಸಂತೃಪ್ತಿ ದೊರಕಲಿದೆ ಎಂದು ಅವರು ಅಭಿಪ್ರಾಯಪಟ್ಟರು.

ಜಿಲ್ಲಾ ಮೊಗವೀರ ಯುವ ಸಂಘಟನೆ ಅಧ್ಯಕ್ಷ ವಿನಯ ಕರ್ಕೇರ ಮಾತ ನಾಡಿ, ಮೊಗವೀರ ವಿವಾಹಗಳಲ್ಲಿ ದುಂದು ವೆಚ್ಚಕ್ಕೆ ಕಡಿವಾಣ; ಸರಳ, ಆದರ್ಶ ವಿವಾಹಕ್ಕೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಡಾ| ಜಿ. ಶಂಕರ್‌ ಹುಟ್ಟು ಹಾಕಿದ ಪರಿಕಲ್ಪನೆಯೇ “ಉಚಿತ ಸಾಮೂಹಿಕ ವಿವಾಹ ಸಮಾರಂಭ’ ಎಂದರು.

ಶಾಲಿನಿ ಜಿ. ಶಂಕರ್‌, ನವೀನ್‌ ಮತ್ತು ಶ್ಯಾಮಿಲಿ ದಂಪತಿ, ಜಿಲ್ಲಾ ಮೊಗವೀರ ಯುವ ಸಂಘಟನೆ ನಿಕಟಪೂರ್ವಾಧ್ಯಕ್ಷ ಗಣೇಶ್‌ ಕಾಂಚನ್‌, ಸ್ಥಾಪಕಾಧ್ಯಕ್ಷ ಸತೀಶ್‌ ಅಮೀನ್‌ ಪಡುಕೆರೆ, ಗಣ್ಯರಾದ ಸದಾನಂದ ಬಳ್ಕೂರು, ಸತೀಶ್‌ ಎಂ. ನಾಯ್ಕ, ಸಂಜೀವ ಎಂ.ಎಸ್‌. ಕೋಟ, ಸತೀಶ್‌ ಮರಕಾಲ, ಉಚ್ಚಿಲ ಹೋಬಳಿ ಅಧ್ಯಕ್ಷ ಜಯ
ಸಿ. ಕೋಟ್ಯಾನ್‌, ವಿಶ್ವನಾಥ ಕೂರಾಡಿ, ಕೆ.ಕೆ. ಕಾಂಚನ್‌, ಕೆ. ಗೋಪಾಲ ಪೂಜಾರಿ, ಯಶಪಾಲ್‌ ಎ. ಸುವರ್ಣ, ಶಿವಪ್ಪ ಟಿ. ಅಮೀನ್‌, ಶಿವ ಜಿ. ಕರ್ಕೇರ, ಆನಂದ ಕೆ. ಸಾಸ್ತಾನ, ಉಭಯ ಸಂಘಟನೆಗಳ ಪದಾಧಿಕಾರಿಗಳು, ಗಣ್ಯರು, 41 ಜೋಡಿಗಳ ಬಂಧು ಬಾಂಧವರು ಉಪಸ್ಥಿತರಿದ್ದರು.

ವೇದವ್ಯಾಸ ಐತಾಳ್‌ ಪೌರೋಹಿತ ದಲ್ಲಿ ಹಸೆಮಣೆ ಏರಿದ ಜೋಡಿಗಳಿಗೆ ಡಾ| ಜಿ. ಶಂಕರ್‌ ದಂಪತಿ, ಗಣ್ಯರು ಶುಭ ಹಾರೈಸಿದರು.

ವಿಶೇಷ ಚೇತನ ಜೋಡಿಗಳಿಗೆ ಧನಸಹಾಯ
ಮೂರು ವಿಶೇಷ ಚೇತನ ಜೋಡಿಗಳಿಗೆ ಮದುವೆ ಮಾಡಿಸಲಾಗಿದ್ದು, ಅವರ ಕುಟುಂಬ ನಿರ್ವಹಣೆಗೆ ಅನುಕೂಲವಾಗುವಂತೆ ಜಿ. ಶಂಕರ್‌ ಫ್ಯಾಮಿಲಿ ಟ್ರಸ್ಟ್‌ ವತಿಯಿಂದ ಪ್ರತೀ ಜೋಡಿಗೆ 50 ಸಾವಿರ ರೂ. ಧನಸಹಾಯ ನೀಡುವುದಾಗಿ ಡಾ| ಜಿ. ಶಂಕರ್‌ ಘೋಷಿಸಿದರು.

ಟಾಪ್ ನ್ಯೂಸ್

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.