ಮಂಗಳೂರು ಲೈಟ್ಹೌಸ್ ರಸ್ತೆಗೆ ಮುಲ್ಕಿ ಸುಂದರರಾಮ ಶೆಟ್ಟಿ ಹೆಸರು
Team Udayavani, Jun 23, 2017, 4:32 PM IST
ಉಡುಪಿ/ಮಂಗಳೂರು:ಮಂಗಳೂರಿನ ಲೈಟ್ಹೌಸ್ ರಸ್ತೆಗೆ ವಿಜಯ ಬ್ಯಾಂಕ್ ಶಿಲ್ಪಿ ಮುಲ್ಕಿ ಸುಂದರರಾಮ ಶೆಟ್ಟಿ ಅವರ ಹೆಸರನ್ನು ನಾಮಕರಣ ಮಾಡಲಾಗಿದೆ.
ಮಂಗಳೂರು ಪುರಭವನದಲ್ಲಿ ಜು. 29ರಂದು ನಡೆಯುವ ಉದ್ಘಾಟನಾ ಸಮಾರಂಭಕ್ಕೆ ಆಶೀರ್ವಾದ ಕೋರಲು ಭೇಟಿಯಾದ ಸಂಘಟನೆಗಳ ಮುಖ್ಯಸ್ಥ ರೊಂದಿಗೆ ಮಾತನಾಡಿದ ಪರ್ಯಾಯ ಶ್ರೀ ಪೇಜಾವರ ಶ್ರೀಗಳು ಸರಕಾರ, ಸಂಬಂಧಪಟ್ಟ ಇಲಾಖೆಗಳು, ಪ್ರಯತ್ನ ಮಾಡಿದ ವಿಜಯ ಬ್ಯಾಂಕ್ ವರ್ಕರ್ಆರ್ಗನೈಸೇಶನ್ ಮತ್ತು ಆಫೀಸರ್ ಯೂನಿಯನ್ ಸಂಘಟನೆಯನ್ನು ಅಭಿನಂದಿಸಿದರು.
ಒಬ್ಬರ ಬದುಕು ಇನ್ನೊಬ್ಬರ ಬದುಕಿಗೆ ಪೂರಕವಾಗಿದ್ದರೆ ಅವರ ಜೀವನ ಸಾರ್ಥಕವೆನಿಸುತ್ತದೆ. ಈ ನಿಟ್ಟಿನಲ್ಲಿ ಸುಂದರರಾಮ ಶೆಟ್ಟಿಯವರ ಹೆಸರು ಜನಮನದಲ್ಲಿ ಉಳಿಯಲು 2010ರಿಂದ ಸಂಘಟನೆಯು ವಿವಿಧ ಚಟುವಟಿಕೆಗಳನ್ನು ವರ್ಷಂಪ್ರತಿ ಏರ್ಪಡಿಸಿಕೊಂಡು ಬರುತ್ತಿದೆ. ಈ ಕಾರ್ಯಕ್ರಮ ಉದ್ಘಾಟನೆಗೊಂಡದ್ದು ಪೇಜಾವರ ಶ್ರೀಗಳಿಂದ. ಸಂಘಟ ನೆಯು ಶೆಟ್ಟಿಯವರ ಹೆಸರು ಶಾಶ್ವತ ವಾಗಿ ಉಳಿಯುವಂತೆ ಮಾಡಿದ ಪ್ರಯತ್ನಗಳಲ್ಲಿ ರಸ್ತೆ ನಾಮಕರಣವೂ ಒಂದಾಗಿದೆ. ಸುಂದರರಾಮ ಶೆಟ್ಟಿಯವರ ಆಡಳಿತಾವಧಿ ಚಾರಿತ್ರಿಕವಾಗಿದ್ದು ದಕ್ಷ, ಪ್ರಾಮಾಣಿಕ ಆಡಳಿತದಿಂದ ಜಾತ್ಯ ತೀತವಾಗಿ ಸಾವಿರಾರು ಯುವಕ-ಯುವತಿಯರಿಗೆ ಉದ್ಯೋಗ ನೀಡಿದ ಅವರು ಅವಿಭಜಿತ ದ.ಕ. ಜಿಲ್ಲೆಯ ಅಭಿವೃದ್ಧಿಗೆ ವಿಶಿಷ್ಟ ಕೊಡುಗೆ ಸಲ್ಲಿಸಿದ್ದಾರೆ. ಸಮಾಜವು ಧೀಮಂತ ನಾಯಕರನ್ನು ಮರೆಯಬಾರದು ಎಂದು ಶ್ರೀಗಳು ಈ ಸಂದರ್ಭದಲ್ಲಿ ತಿಳಿಸಿದರು.
ಅಖೀಲ ಭಾರತ ತುಳು ಒಕ್ಕೂಟದ ಗೌರವಾಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ವಿಜಯ ಬ್ಯಾಂಕ್ ವರ್ಕರ್ ಆರ್ಗನೈಸೇಶನ್ ಅಧ್ಯಕ್ಷ ಶ್ರೀಧರ ಶೆಟ್ಟಿ ಎಂ., ವಲಯ ಕಾರ್ಯದರ್ಶಿ ರಘುರಾಮ ಸುವರ್ಣ, ಮಾಜಿ ಅಧ್ಯಕ್ಷ ಸೀತಾಚರಣ್ ಶೆಟ್ಟಿ, ಆಫೀಸರ್ ಯೂನಿಯನ್ ಮಾಜಿ ಅಧ್ಯಕ್ಷ ಮೂಲ್ಕಿ ಕರುಣಾಕರ ಶೆಟ್ಟಿ, ಶೋಭಾ ಕರುಣಾಕರ ಶೆಟ್ಟಿ, ನಿವೃತ್ತ ಪ್ರಬಂಧಕ ರಮೇಶ ಶೆಟ್ಟಿ ಉಡುಪಿ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ
Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ
Kapu Assembly constituency: ನಕಲಿ ಮತದಾನ;ಆರೋಪ
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
MUST WATCH
ಹೊಸ ಸೇರ್ಪಡೆ
Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ
Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು
Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ
Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್
IPL; ಮೆಕ್ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ