ಸ್ವರ್ಣೆ ತಟದಲ್ಲಿ ‘ನಾನು ಸನ್ಯಾಸಿಯಾಗಲು ಹೊರಟಿದ್ದೆ’ ಪುಸ್ತಕ ಬಿಡುಗಡೆ
Team Udayavani, Dec 24, 2018, 1:30 AM IST
ಕಾರ್ಕಳ: ಉಡುಪಿ ಎಂ.ಜಿ.ಎಂ. ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಮಂಜುನಾಥ್ ಕಾಮತ್ ಅವರ ನಾನು ಸನ್ಯಾಸಿಯಾಗಲು ಹೊರಟಿದ್ದೆ ಪುಸ್ತಕ ಡಿ. 22ರಂದು ಸಂಜೆ ತಾಲೂಕಿನ ಬಜಗೋಳಿ ಸಮೀಪದ ಕಡಾರಿಯ ಸ್ವರ್ಣ ನದಿ ತಟದಲ್ಲಿ ವಿಭಿನ್ನ ರೀತಿಯಲ್ಲಿ ಬಿಡುಗಡೆಗೊಂಡಿತು. ಒಂದೂವರೆ ಸಾವಿರ ಹಣತೆಗಳ ಬೆಳಕು, ನಾದ ಮಣಿ ನಾಲ್ಕೂರು ಅವರ ಕತ್ತಲ ಹಾಡು ಹಾಗೂ ಇಬ್ಬರು ಮಂಗಳಮುಖೀಯರಾದ ನಗ್ಮಾ ಹಾಗೂ ಕಾಜಲ್ ಸ್ವರ್ಣ ನದಿಗೆ ಆರತಿ ಬೆಳಗುವುದರೊಂದಿಗೆ ಪುಸ್ತಕ ಬಿಡುಗಡೆ ಮಾಡಲಾಯಿತು.
ಉದ್ಯಮಿ ವಿಶ್ವನಾಥ ಶೆಣೈ ಅವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಶುಭಹಾರೈಸಿದರು. ಇದೊಂದು ವಿಚಿತ್ರ, ವಿಭಿನ್ನವಾದ ಕಾರ್ಯಕ್ರಮ. ಪುಸ್ತಕ ಬಿಡುಗಡೆ ಈ ರೀತಿಯಾಗಿ ಎಲ್ಲಿಯೂ ಆಗಿರಲಿಕ್ಕಿಲ್ಲ. ಸಾವಿರಾರು ದೀಪಗಳ ನಡುವೆ ಪುಸ್ತಕ ಬಿಡುಗಡೆಯಾಗುತ್ತಿರುವುದು ಇದೊಂದು ಸಂಭ್ರಮ ಎಂದು ಹೇಳಿದರು.
ಲೇಖಕ ಮಂಜುನಾಥ ಕಾಮತ್ ಮಾತನಾಡಿ, ಪ್ರಸ್ತುತ ನಮಗೆ ನೀರು, ನದಿ ತುಂಬಾ ಮುಖ್ಯ. ಇಲ್ಲಿನ ನದಿಯ ಬಗ್ಗೆ ಪ್ರೀತಿ, ಕಾಳಜಿ ಮೂಡಬೇಕು. ನದಿಯನ್ನು ಹೆಣ್ಣು ಅಂತ ನಾವು ಆರಾಧಿಸುತ್ತೇವೆ. ಕಾಶಿಗೆ ತೆರಳಿದಾಗ ಅಲ್ಲಿ ಕೆಲವು ಸಂದರ್ಭ ಲಕ್ಷಗಟ್ಟಲೆ ಹಣತೆ ಬೆಳಗಿಸಿ ಗಂಗೆಗೆ ಆರತಿ ಬೆಳಗಿಸುವ ಬಗ್ಗೆ ಕೇಳಿ, ಗಮನಿಸಿದ್ದೆ. ಆದರೆ ಅದು ನನಗೆ ನೋಡಲು ಸಾಧ್ಯವಾಗಿಲ್ಲ. ನಮ್ಮೂರಲ್ಲೇ ಅಂತಹ ಕಾರ್ಯಕ್ರಮ ಮಾಡಬೇಕೆಂದು ಯೋಚಿಸಿ, ಆ ರೀತಿ ಪುಸ್ತಕ ಬಿಡುಗಡೆ ಮಾಡಲು ನಿರ್ಧರಿಸಿದ್ದೇನೆ ಎಂದರು. ಆಕೃತಿ ಪಬ್ಲಿಕೇಶನ್ನ ಕಲ್ಲೂರು ನಾಗೇಶ್ ಪ್ರಸ್ತಾವನೆಗೈದು, ನಿರೂಪಿಸಿದರು. ನೂರಾರು ಮಂದಿ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ
Kapu Assembly constituency: ನಕಲಿ ಮತದಾನ;ಆರೋಪ
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ