ಸೀತಾನದಿ: ನಾಗ ದೇವರ ಕಲ್ಲಿನಮೂರ್ತಿ ಕಳ್ಳತನ
Team Udayavani, Jul 25, 2018, 2:30 AM IST
ಹೆಬ್ರಿ: ಇತ್ತೀಚಿಗೆ ಎಲ್ಲಡೆ ದೇವಸ್ಥಾನದ ಗರ್ಭಗುಡಿಯ ಒಳಹೊಕ್ಕು ಬೆಲೆ ಬಾಳುವ ದೇವರ ಚಿನ್ನದ ಅಥವಾ ಬೆಳ್ಳಿಯ ಆಭರಣಗಳ ಕಳ್ಳತನ ಹೆಚ್ಚಾಗುತ್ತಿದೆ.ಆದರೆ ಹೆಬ್ರಿ ಸಮೀಪ ಸೀತಾನದಿ ನಿಸರ್ಗ ಧಾಮದ ಬಳಿ ಇರುವ ನಾಗಬ್ರಹ್ಮಲಿಂಗೇಶ್ವರ ಸನ್ನಿಧಿಯ ನಾಗನ ಕಟ್ಟೆಯಲ್ಲಿರುವ ನಾಗದೇವರ ಎರಡು ಕಲ್ಲಿನ ವಿಗ್ರಹವನ್ನು ಕಳವು ಮಾಡಿರುವುದು ಅಚ್ಚರಿ ಜನರಲ್ಲಿ ಮೂಡಿಸಿದೆ.
ಚಂದುಕುಂದು ಗ್ರಾಮದ ಸುಮಾರು 50 ಕುಟುಂಬಗಳು ಆರಾಧಿಸಿಕೊಂಡು ಬಂದಿರುವ ಸೀತಾನದಿ ಹೊಳೆಯ ಬದಿಯಿರುವ ನಾಗಸನ್ನಿಧಿಯಲ್ಲಿ ಪ್ರತಿ ಸಂಕ್ರಮಣದಂದು ಪೂಜೆ ನಡೆಯುತ್ತಿದ್ದು ಜು. 16ರ ಬೆಳಗ್ಗೆ ಹೋಗಿ ಗಮನಿಸುವಾಗ ಅನಾದಿಕಾಲದಿಂದ ಬಂದಿರುವ ನಾಗನ ವಿಗ್ರಹ ಹಾಗೂ ಪ್ರತಿಷ್ಠಾಪಿಸಲ್ಪಟ್ಟ ಒಂದು ಕಲ್ಲಿನ ವಿಗ್ರಹವನ್ನು ಯಾರೋ ಕಿಡಿಗೇಡಿಗಳು ಕಳ್ಳತನ ಮಾಡಿದ್ದು ಆ ಪ್ರದೇಶದಲ್ಲಿ ಒಂದು ಬಿಯರ್ ಬಾಟ್ಲಿಯನ್ನು ಇಟ್ಟು ಹೋಗಿದ್ದಾರೆ.ಈ ಬಗ್ಗೆ ನಾಗಬ್ರಹ್ಮಲಿಂಗೇಶ್ವರ ಸನ್ನಿಧಿಯ ಆಡಳಿತ ಸಮಿತಿಯ ಅಧ್ಯಕ್ಷ ನವೀನ್ ಅಡ್ಯಂತಾಯ ಹೆಬ್ರಿ ಠಾಣೆಗೆ ದೂರು ನೀಡಿದ್ದಾರೆ.
10 ವರ್ಷದ ಹಿಂದೆ ಇಲ್ಲಿರುವ ಪಂಚಲೋಹದ ನಂದಿ ವಿಗ್ರಹವೊಂದು ಕಳ್ಳತನವಾಗಿತ್ತು. ಸನ್ನಿಧಿಯ ಸಮೀಪ ಟ್ರಕಿಂಗ್ ಪಾಥ್ ಇದ್ದು ಇಲ್ಲಿಗೆ ಹೆಚ್ಚಿನ ಪ್ರವಾಸಿಗರು ಬರುತ್ತಾರೆ. ಅವರೇ ಈ ಕೆಲಸ ಮಾಡಿರಬಹುದೇನೋ ಎಂದು ಸ್ಥಳೀಯರು ಸಂಶಯವನ್ನು ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ
Kapu Assembly constituency: ನಕಲಿ ಮತದಾನ;ಆರೋಪ
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ