ನಾಗರ ಪಂಚಮಿ ನಾಡಿಗೆ ದೊಡ್ಡದು: ಸಂಭ್ರಮಾಚರಣೆ
Team Udayavani, Jul 28, 2017, 6:10 AM IST
ತೆಕ್ಕಟ್ಟೆ: ನಿಸರ್ಗವನ್ನು ಆರಾಧಿಸುವ ನಿಟ್ಟಿನಿಂದ ಹಿಂದೂಗಳು ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿಯಂದು ನಾಗದೇವತೆಯನ್ನು ಅತ್ಯಂತ ಶ್ರದ್ಧಾ ಭಕ್ತಿಯಿಂದ ಪೂಜಿಸಿ ಎಲ್ಲ ದುರಿತಗಳನ್ನು ನಿವಾರಿಸಿ ರಕ್ಷಿಸಲೆಂದು ನಾಗದೇವರಿಗೆ ಹಾಲು ಹಣ್ಣು ಅರ್ಪಿಸಿ ಸಂತೃಪ್ತರನ್ನಾಗಿಸುವ ವಿಶೇಷ ಹಬ್ಬ ನಾಗರಪಂಚಮಿ.
ಕುಂದಾಪುರ ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಒಂದಾದ ಕೋಣಿ ಆಚಾರ್ ಬೆಟ್ಟು,ಕುಂಭಾಶಿ,ಹಲೂ¤ರು ಹಾಗೂ ತೆಕ್ಕಟ್ಟೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಸೇರಿದಂತೆ ಮುಂತಾದ ಗ್ರಾಮೀಣ ಭಾಗಗಳಲ್ಲಿ ಗುರುವಾರದಂದು ಸಂಭ್ರಮದಿಂದ ನಡೆಯಿತು.
ಈ ಸಂದರ್ಭದಲ್ಲಿ ನೂರಾರು ಭಕ್ತರು ನಾಗ ಬನಗಳಲ್ಲಿ ತನು ಎರೆದು ನಾಗ ದೇವನಿಗೆ ವಿಶೇಷ ಪೂಜೆ ಸಲ್ಲಿಸಿದರು.
ಉಳೂ¤ರು, ಕೆದೂರು, ಬೇಳೂರು, ಮೊಗೆಬೆಟ್ಟು, ಕೊರ್ಗಿ, ಹೊಸಮಠ, ತೆಕ್ಕಟ್ಟೆ ಸೇರಿದಂತೆ ವಿವಿಧೆಡೆಗಳಲ್ಲಿ ನಾಗ ಸಾನ್ನಿಧ್ಯಕ್ಕೆ ಹಾಲು ಹಣ್ಣು ಅರ್ಪಿಸಲಾಯಿತು.
ಭಕ್ತರಲ್ಲಿ ಗೊಂದಲ
ಹಲವೆಡೆಗಳಲ್ಲಿ ನಾಗರಪಂಚಮಿಯ ಬಗ್ಗೆ ಕ್ಯಾಲೆಂಡರ್ನಲ್ಲಿ ಉಲ್ಲೇಖೀಸಿದ ದಿನಾಂಕ ಹಾಗೂ ಶಾಸ್ತ್ರದಲ್ಲಿನ ಪಂಚಮಿಯ ಬಗೆಗಿನ ಗೊಂದಲಕರ ಮಾಹಿತಿಯಿಂದಾಗಿ ಅದೆಷ್ಟೋ ಭಕ್ತರು ಗೊಂದಲಕ್ಕೆ ಒಳಗಾದ ಘಟನೆ ಸಂಭವಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ
Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ
Kapu Assembly constituency: ನಕಲಿ ಮತದಾನ;ಆರೋಪ
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ