ನಂದಳಿಕೆ-ಗೋಳಿಕಟ್ಟೆ ರಸ್ತೆ: ಘನ ವಾಹನ ಸಂಚಾರದಿಂದ ತೊಂದರೆ
Team Udayavani, Dec 23, 2022, 5:40 AM IST
ಬೆಳ್ಮಣ್ : ಇತ್ತೀಚೆಗೆ ನಂದಳಿಕೆ ಗ್ರಾ.ಪಂ.ನ ಮಹಿಳಾ, ಮಕ್ಕಳ ಗ್ರಾಮಸಭೆಯಲ್ಲಿ ಗೋಳಿಕಟ್ಟೆಯಲ್ಲಿ ಘನ ವಾಹನ ಸಂಚಾರ ನಿಷೆೇಧಕ್ಕೆ ನಡೆಸಿದ್ದ ಆಗ್ರಹ ಹೊಸ ರೂಪ ಪಡೆದಿದ್ದು ಅಕ್ರಮ ಕಲ್ಲಿನ ಕೋರೆಗಳ ಬಗ್ಗೆ ಜನಾಕ್ರೋಶ ವ್ಯಕ್ತವಾಗಿದೆ.
ನಂದಳಿಕೆ, ಸೂಡ ಗ್ರಾಮದ ಸುತ್ತಮುತ್ತಲಿನಲ್ಲಿ ಅನಧಿಕೃತ ಕಲ್ಲು ಕೋರೆಗಳಲ್ಲಿ ಹಗಲು ರಾತ್ರಿಯೆನ್ನದೆ ನಿತ್ಯ ಗಣಿಗಾರಿಕೆ ನಡೆಯುತ್ತಿದ್ದು ಇಲ್ಲಿಂದ ಭಾರೀ ಗಾತ್ರದ ಕಲ್ಲಿನ ಲೋಡು ತುಂಬಿದ ಲಾರಿ, ಟಿಪ್ಪರ್ಗಳು ಕಾಮಗಾರಿ ಹಂತದಲ್ಲಿರುವ ಗೋಳಿಕಟ್ಟೆ ರಸ್ತೆಯಲ್ಲಿ ಸಂಚರಿಸುತ್ತಿವೆ. ನಿತ್ಯ ಸುಮಾರು 300ಕ್ಕೂ ಅಧಿಕ ಬƒಹತ್ ಗಾತ್ರದ ಟಿಪ್ಪರ್ಗಳು ಇಲ್ಲಿ ಸಂಚರಿಸುತ್ತಿವೆ. ಒಂದೆಡೆ
ಧೂಳಿನ ಸಮಸ್ಯೆ, ಮತ್ತೂಂದೆಡೆ ಜಲ್ಲಿ, ಕಲ್ಲುಗಳು ರಸ್ತೆಗೆ ಬೀಳುವುದರಿಂದ ವಾಹನ ಸವಾರರಿಗೆ ಅಡಚಣೆಯಾಗಿದೆ.
ಹದಗೆಡುವ ಭೀತಿಯಲ್ಲಿ ಹೊಸ ರಸ್ತೆ
ಇಲ್ಲಿನ ಗೋಳಿಕಟ್ಟೆ ಕೊಪ್ಪಳ ರಸ್ತೆ “ನಮ್ಮ ಗ್ರಾಮ ನಮ್ಮ ರಸ್ತೆ’ ಯೋಜನೆಯಡಿಯಲ್ಲಿ ಸಂಪೂರ್ಣ ಕಾಂಕ್ರೀಟ್ ರಸ್ತೆ ನಿರ್ಮಾಣ ಹಂತದಲ್ಲಿದೆ. ಸುಮಾರು ಶೇ. 75ರಷ್ಟು ಕಾಮಗಾರಿ ಮಾತ್ರ ಪೂರ್ಣಗೊಂಡಿದ್ದು ಕ್ಯೂರಿಂಗ್ ನಡೆಯುವ ಮುನ್ನವೇ ಈ ರಸ್ತೆಯಲ್ಲೇ ನಿತ್ಯ ಘನ ವಾಹನ ಸಂಚರಿಸುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂಬುದು ಸ್ಥಳೀಯರ ಆರೋಪ.ಅಧಿಕಾರಿಗಳ ಮೌನ ನಂದಳಿಕೆ, ಸೂಡ ಗ್ರಾಮದಲ್ಲಿ ಅನೇಕ ಅಕ್ರಮ ಗಣಿಗಾರಿಕೆಗಳು ನಡೆಯುತ್ತಿದ್ದು 1-2 ಎಕರೆಗೆ ಪರವಾನಿಗೆ ಪಡೆದು ಸುಮಾರು 5-6 ಎಕರೆ ಜಾಗದಲ್ಲಿ ಅಕ್ರಮ
ವಾಗಿ ಕೆಲವೊಂದು ಕೋರೆಗಳಲ್ಲಿ ಗಣಿಗಾರಿಕೆ ನಡೆಯುತ್ತಿದೆ. ಅಲ್ಲದೆ ಬೆಳಗ್ಗೆ ಹಾಗೂ ಮಧ್ಯಾಹ್ನದ ವೇಳೆ ಇಲ್ಲಿ ಸ್ಫೋಟಕ ಬಳಸಿ ಬಂಡೆಗಳನ್ನು ಅಪಾಯಕಾರಿಯಾಗಿ ನ್ಪೋಟಿಸುತ್ತಿದ್ದಾರೆ ಎಂದು ಸ್ಥಳೀಯರ ಆರೋಪಿಸಿದ್ದಾರೆ.
ಪ್ರತಿಭಟನೆಗೆ ನಿರ್ಧಾರ
ಈಗಾಗಲೇ ಸ್ಥಳೀಯಾಡಳಿತಕ್ಕೆ ಮೌಖೀಕ, ಲಿಖೀತವಾಗಿಯೂ ದೂರು ನೀಡಿದ್ದು ಜಿಲ್ಲಾಧಿಕಾರಿಗಳಿಗೂ ಗ್ರಾ.ಪಂ. ಮೂಲಕ ದೂರು ನೀಡಲಾಗಿದೆ. ಮುಂದಿನ ದಿನಗಳಲ್ಲಿ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಕಾನೂನು ರೀತಿಯಲ್ಲಿ ಹೋರಾಟ ನಡೆಸಲಾಗು ವುದು ಎಂದು ಇಲ್ಲಿನ ಸಾಮಾಜಿಕ ಹೋರಾಟಗಾರರು ತಿಳಿಸಿದ್ದಾರೆ.
ಆದೇಶದ ನಿರೀಕ್ಷೆಯಲ್ಲಿದ್ದೇವೆ
ಈ ಬಗ್ಗೆ ಜಿಲ್ಲಾಧಿಕಾರಿಯವರಿಗೂ ಪತ್ರ ಬರೆಯಲಾಗಿದೆ. ಮುಂದಿನ ಜಿಲ್ಲಾಧಿಕಾರಿಗಳ ಆದೇಶದ ನಿರೀಕ್ಷೆ ಯಲ್ಲಿದ್ದೇವೆ. -ಸಂದೇಶ, ಗ್ರಾಮಸ್ಥರು.
ಅನಾಹುತ ತಪ್ಪಿಸಿ
ಈ ರಸ್ತೆ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಆದರೆ ಅದೇ ರಸ್ತೆಯಲ್ಲಿ ಸಾಲಾಗಿ ಬೃಹತ್ ಘನ ವಾಹನ ಸಂಚರಿಸುತ್ತಿದೆ. ಸಂಬಂಧಪಟ್ಟವರ ಗಮನಕ್ಕೆ ತಂದು ಕ್ರಮ ಕೈಗೊಳ್ಳಲಾಗುವುದು
-ನಿತ್ಯಾನಂದ ಅಮೀನ್, ನಂದಳಿಕೆ, ಗ್ರಾ.ಪಂ. ಅಧ್ಯಕ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ
Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ
Kapu Assembly constituency: ನಕಲಿ ಮತದಾನ;ಆರೋಪ
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
MUST WATCH
ಹೊಸ ಸೇರ್ಪಡೆ
IPL 2024; ಪಂಜಾಬ್ ವಿರುದ್ಧ ಸೋಲು; ಅಂಪೈರ್ ಜತೆ ವಾಗ್ವಾದಕ್ಕಿಳಿದ ಗೌತಮ್ ಗಂಭೀರ್
ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ
Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್ ನಲ್ಲಿ ಪತ್ತೆ!
W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ
Muddebihal: ಹೆಂಡತಿಗೆ ಚೂರಿ ಇರಿದು ಪರಾರಿಯಾದ ಗಂಡ