ತೋಡಿನ ಹೂಳೆತ್ತಲೂ ಅನುಮತಿ ಬೇಕೆ?!
Team Udayavani, Mar 30, 2019, 6:02 AM IST
ಉಡುಪಿ: ನೀರಿನ ಹರಿವು ನಿಂತಿರುವ ತೋಡಿನಿಂದ ಹೂಳೆತ್ತಿ ತೆಂಗಿನ ಮರದ ಬುಡಕ್ಕೆ ಹಾಕಿದ ಕೃಷಿಕನಿಗೆ ಕಾನೂನಿನ ನೆಪವೊಡ್ಡಿ ಪೊಲೀಸರು ಗದರಿಸಿದ ಘಟನೆ ಬಾರಕೂರು – ಶಿರಿಯಾರ ಸಮೀಪದ ಯಡ್ತಾಡಿಯಲ್ಲಿ ಶುಕ್ರವಾರ ನಡೆದಿದೆ!
ಹೂಳನ್ನು ತೋಟಕ್ಕೆ ಹಾಕಿದರೆ ತೋಡಿನಲ್ಲಿ ನೀರು ಸಂಗ್ರಹಕ್ಕೆ ಅನುವಾಗುತ್ತದೆ, ಜತೆಗೆ ತೆಂಗಿನ ಮರಕ್ಕೆ ಗೊಬ್ಬರವೂ ಆಗುತ್ತದೆ ಎಂದು ಕೃಷಿಕ ಯಡ್ತಾಡಿ ಸತೀಶ ಕುಮಾರ್ ಶೆಟ್ಟಿ ಅವರು ಆಲೋಚಿಸಿ ಕಾರ್ಮಿಕರನ್ನು ಕಲೆ ಹಾಕಿ ಕೆಲಸ ಆರಂಭಿಸಿದರು. ಯಾರು ಮಾಹಿತಿ ಕೊಟ್ಟರೋ ಗೊತ್ತಿಲ್ಲ. ಅಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ ಎಂಬ ವಾಸನೆ ಪೊಲೀಸರ ಮೂಗಿಗೆ ಬಡಿ ಯಿತು; ಧಾವಿಸಿ ಬಂದವರೇ “ಏನು ಮಾಡುತ್ತಿದ್ದೀರಿ? ಇದಕ್ಕೆ ಯಾರ ಅನುಮತಿ ಪಡೆದುಕೊಂಡಿದ್ದೀರಿ?’ ಎಂದೆಲ್ಲ ಪ್ರಶ್ನಿಸಲಾರಂಭಿಸಿದರು.
ಹಿಂದಿನ ಜಿಲ್ಲಾಧಿಕಾರಿಯವರು ಜಿಲ್ಲಾ ಜನಸಂಪರ್ಕ ಸಭೆಯಲ್ಲಿ ತಲೆಹೊರೆಯಲ್ಲಿ ಹೊಳೆ ಬದಿ ಹೂಳನ್ನು ಎತ್ತಬಹುದು. ವಾಹನದಲ್ಲಿ ಕೊಂಡೊಯ್ಯಬಾರದು ಎಂದಿದ್ದರು ಎಂದು ಶೆಟ್ಟರು ಉತ್ತರಿಸಿದರು. “ಇದಕ್ಕೆ ಎಲ್ಲಿದೆ ಅನುಮತಿ ಪತ್ರ?’ ಎಂದು ಪೊಲೀಸ್ ಸಿಬಂದಿ ಕೇಳಿದಾಗ, “ಇದನ್ನು ತಡೆಯಲು ನಿಮಗೆಲ್ಲಿದೆ ಆದೇಶ?’ ಎಂದು ಶೆಟ್ಟರು ಮರು ಪ್ರಶ್ನಿಸಿದರು. ಅವರ ಪ್ರಶ್ನೆಗಳ ಬಾಣಕ್ಕೆ ಉತ್ತರಿಸಲಾಗದ ಸಿಬಂದಿ ಬಂದ ಹಾಗೇ ಮರಳಿದರು.
ಪ್ರಕರಣದ ಬಗ್ಗೆ ಉದಯವಾಣಿ ಪ್ರತಿನಿಧಿ ಪೊಲೀಸ ರಿಂದ ಪ್ರತಿಕ್ರಿಯೆ ಬಯಸಿದಾಗ, “ಮಾಹಿತಿ ಬಂದಾಗ ಸ್ಥಳಕ್ಕೆ ಬಾರದೆ ಹೋದರೆ ನಮ್ಮದು ಕರ್ತವ್ಯ ಲೋಪವಾ ಗುತ್ತದೆ’ ಎಂದು ಅಸಹಾಯಕತೆ ಬಿಚ್ಚಿಟ್ಟರು. ನಮಗೆ ಮಾಹಿತಿಷ್ಟೇ ಬಂದಿತ್ತು; ಅಧಿಕೃತ ದೂರು ಬಂದರೆ ತನಿಖೆ ನಡೆಸಲಾ ಗುವುದು ಎಂದರು.
ಗಣಿ ಇಲಾಖೆ ಏನೆನ್ನುತ್ತದೆ?
“ತೋಡು ಮೊದಲಾದೆಡೆ ಸಿಗುವ ಮರಳನ್ನು ಬಳಸಲು ಕಾನೂನು ಅಡ್ಡಿ ಇಲ್ಲ. ಹೊರಗೆ ವ್ಯಾಪಾರ ದೃಷ್ಟಿಯಿಂದ ಸಾಗಿಸಬಾರದು ಎಂದಿದೆ ಅಷ್ಟೆ’ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್ ಎಂ. ಪೈ ಬ್ಲಾಕ್ ಇಂದು ಲೋಕಾರ್ಪಣೆ
ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್ ಹೊಂದಿರುವ ಕ್ಯಾನ್ಸರ್ ಚಿಕಿತ್ಸೆ ಕ್ರಮ
Manipal; ಕೌಶಲಾಧಾರಿತ ಮಾನವ ಶಕ್ತಿ ಇದ್ದರೆ ಸರ್ವ ಸಾಧನೆ: ಕೆ.ವಿ. ಕಾಮತ್
Karkala ಡಾ| ಟಿಎಂಎ ಪೈ ರೋಟರಿ ಆಸ್ಪತ್ರೆಗೆ ಡಯಾಲಿಸಿಸ್ ಯಂತ್ರ ಕೊಡುಗೆ
Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್ ವಾಹನ ಅಪಘಾತ
MUST WATCH
ಹೊಸ ಸೇರ್ಪಡೆ
Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ
ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ
Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ
ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ
Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್ ಎಂ. ಪೈ ಬ್ಲಾಕ್ ಇಂದು ಲೋಕಾರ್ಪಣೆ