“ಗಿಡಗಳನ್ನು ಮಕ್ಕಳಂತೆ ಪೋಷಿಸಿ ಸಮೃದ್ಧ ವನಸಿರಿ ಬೆಳೆಸಿ’
ಚಿತ್ರಪಾಡಿ ಗಿರಿ ಫ್ರೆಂಡ್ಸ್: ಔಷಧೀಯ ವನಕ್ಕೆ ಚಾಲನೆ
Team Udayavani, Nov 21, 2019, 5:37 AM IST
ಕೋಟ: ಪರಿಸರದಲ್ಲಿ ದಿನದಿಂದ ದಿನಕ್ಕೆ ಮರಗಳ ಸಂಖ್ಯೆ ಕಡಿಮೆಯಾಗುತ್ತಿದ್ದು ಪ್ರಕೃತಿ ವಿಕೋಪಗಳು ಹೆಚ್ಚುತ್ತಿದೆ. ಆದ್ದರಿಂದ ಗಿಡಗಳನ್ನು ಮಕ್ಕಳಂತೆ ಫೋಷಣೆ ಮಾಡಿ ಉತ್ತಮ ವನಸಿರಿ ಬೆಳೆಸುವ ಅಗತ್ಯವಿದೆ ಎಂದು ಬ್ರಹ್ಮಾವರ ಉಪವಲಯಾರಣ್ಯಾಧಿಕಾರಿ ಜೀವನ ಶೆಟ್ಟಿ ಹೇಳಿದರು.
ಅವರು ನ.17ರಂದು ಸಾಲಿಗ್ರಾಮ ಚಿತ್ರಪಾಡಿ ಗಿರಿಫ್ರೆಂಡ್ಸ್ ಆಶ್ರಯದಲ್ಲಿ ಔಷಧೀಯ ವನ ಬೆಳೆಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಸಂಘ ಸಂಸ್ಥೆಗಳು ಮರಗಿಡಗಳನ್ನು ಬೆಳೆಸುವ ಕಾರ್ಯಕ್ರಮದಲ್ಲಿ ಅಗತ್ಯವಾಗಿ ಭಾಗವಹಿಸಬೇಕು. ಇಲಾಖೆ ಅವರಿಗೆ ಅಗತ್ಯ ನೆರವು ನೀಡುತ್ತದೆ ಹಾಗೂ ಗಿರಿಫ್ರೆಂಡ್ಸ್ನ ಈ ಕಾರ್ಯ ಇತರ ಸಂಘಟನೆಗಳಿಗೆ ಮಾದರಿ ಎಂದರು.
ಸಂಘದ ಅಧ್ಯಕ್ಷ ಸತೀಶ್ ಆಚಾರ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಸಂಸ್ಥೆಯ ವತಿಯಿಂದ ಜರಗಿದ ರಂಗೋಲಿ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ ಜರಗಿತು.ಉಪನ್ಯಾಸಕ ಲಕ್ಷ್ಮೀನಾರಾಯಣ ಕಾರಂತ, ಜಯಕರ್ನಾಟಕ ಸಾಲಿಗ್ರಾಮ ಘಟಕದ ಅಧ್ಯಕ್ಷ ನಾಗರಾಜ ಗಾಣಿಗ, ವಿಶ್ವನಾಥ ನಾವುಡ ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.ಕಾರ್ಯದರ್ಶಿದಿನೇಶ್ ಸ್ವಾಗತಿಸಿ, ನಾಗೇಂದ್ರ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…
Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ
ದೇಶದ ಭದ್ರತೆ, ಅಭಿವೃದ್ಧಿ, ಆರ್ಥಿಕತೆಗಾಗಿ ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ:ಕಿಶೋರ್ಕುಮಾರ್