ಘನ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣಕ್ಕೆ ವಿರೋಧ
Team Udayavani, Jul 1, 2019, 5:35 AM IST
ಹೆಬ್ರಿ: ಹೆಬ್ರಿಯ ಇಂದಿರಾನಗರ ವಾರ್ಡ್ ಪೊಲೀಸ್ ವಸತಿಗೃಹದ ಹತ್ತಿರ ಜನವಸತಿ ಇರುವ ಪ್ರದೇಶದಲ್ಲಿ ಹೆಬ್ರಿ ಗ್ರಾ.ಪಂ. ವತಿಯಿಂದ ನಿರ್ಮಾಣಗೊಳ್ಳುತ್ತಿರುವ ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಜೂ.30ರಂದು ಸಭೆ ನಡೆದಿದ್ದು ತ್ಯಾಜ್ಯ ಘಟಕ ನಿರ್ಮಾಣ ಮಾಡಲು ಬಿಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜತೆಗೆ ಉಗ್ರಪ್ರತಿಭಟನೆಯ ಎಚ್ಚರಿಕೆ ನೀಡಿದ್ದಾರೆ. ಸಭೆಯಲ್ಲಿ ವಾರ್ಡಿಗೆ ಸಂಬಂಧಪಟ್ಟ ಮುಳ್ಳುಂಬ್ರಿ, ರಾಗಿಹಕ್ಲು, ಸೇಳಂಜೆ, ಅಡಾಲ್ಬೆಟ್ಟು, ವಿನೂ ನಗರ ಹಾಗೂ ಮಠದಬೆಟ್ಟು ಗ್ರಾಮಸ್ಥರಿದ್ದರು.
ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣವಾದರೆ ಅಂತರ್ಜಲ ಹಾನಿಯಾಗುತ್ತದೆ. ಸಮೀಪದಲ್ಲೇ ಹರಿಯುವ ಸೀತಾನದಿ ಕಲ್ಮಶಗೊಂಡು ಜನರ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಆದ್ದರಿಂದ ಯೋಜನೆಯನ್ನು ಇಂದಿರಾನಗರ ವಾರ್ಡ್ ನಿಂದ ಸ್ಥಳಾಂತರಿಸಬೇಕು ಎಂದು ಗಣಪತಿ ನಾಯಕ್ ಆಗ್ರಹಿಸಿದರು.
ಜನವಸತಿ ಇರುವ ಸ್ಥಳದಿಂದ ಯೋಜನೆ ಸ್ಥಳಾಂತರಿಸದಿದ್ದರೆ ಉಗ್ರ ಪ್ರತಿಭಟನೆ ನಡೆಸುವುದಾಗಿ ಪಂಚಾಯತ್ ಮಾಜಿ ಸದಸ್ಯ ಕರುಣಾಕರ್ ರಾವ್, ಶ್ರೀಧರ ಹೆಗ್ಡೆ ಹೇಳಿದರು. ಈ ಸಂದರ್ಭ ಹೆಬ್ರಿ ಗ್ರಾ.ಪಂ. ಮಾಜಿ ಅಧ್ಯಕ್ಷ ಕರುಣಾಕರ ನಾಯ್ಕ,ನಾಗರಾಜ್, ಶ್ರೀಕಾಂತ್ ಹೆಗ್ಡೆ, ಸುನಿಲ್ ಭಂಡಾರಿ ಮೊದಲಾದವರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bidar; ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕ್ರೂಸರ್ ವಾಹನ; ಮೂವರು ಸ್ಥಳದಲ್ಲೇ ಸಾವು
UV Fusion: ಸದ್ಗತಿಯ ಹಾದಿಯಲ್ಲಿ ನೆಮ್ಮದಿಯ ಹಾಸು
ಕೊಳವೆ ಬಾವಿ ಕೊರೆಯಲು ಹೆಚ್ಚಿದ ಬೇಡಿಕೆ; ನದಿಗಳ ಒಡಲು ಬರಿದು
Vijayapura; ಶನಿವಾರ ಇಂಚಗೇರಿಯಲ್ಲಿ ಪಂಚಮಸಾಲಿ ಸಮಾವೇಶ; ಕಾಂಗ್ರೆಸ್ಗೆ ಬೆಂಬಲ ಎಂದ ನಾಯಕರು
Americaದ ವಿವಿಯಲ್ಲಿ ತೀವ್ರಗೊಂಡ ಪ್ಯಾಲೆಸ್ತೀನ್ ಪರ ಪ್ರತಿಭಟನೆ; ನೂರಾರು ಮಂದಿ ಬಂಧನ