ನಿರ್ವಹಣೆ ಸಮಸ್ಯೆಯಿಂದ ಜನರಿಂದ ದೂರ ಸರಿಯುತ್ತಿರುವ ಹುಡ್ಕೋ ಕಾಲನಿ ಪಾರ್ಕ್‌

 ತುಕ್ಕು ಹಿಡಿದ ಉಪಕರಣಗಳು, ಭೇಟಿ ನೀಡುವವರ ಸಂಖ್ಯೆ ಇಳಿಮುಖ

Team Udayavani, Feb 6, 2020, 5:12 AM IST

502UDKC2-2

ಉಡುಪಿ: ಮಣಿಪಾಲದ ಅನಂತ ನಗರದ ಹುಡ್ಕೋ ಕಾಲನಿಯ ಬಳಿ ಸುಮಾರು ಒಂದು ಎಕ್ರೆ ಜಾಗದಲ್ಲಿ ರುವ ಹುಡ್ಕೊ ಸಾರ್ವಜನಿಕ ಉದ್ಯಾನವನ ಮೂಲ ಸೌಕರ್ಯಗಳಿಲ್ಲದೆ ಸಾರ್ವಜನಿಕರಿಗೆ ಉಪಯೋಗಕ್ಕೆ ಬಾರದಂತಾಗಿದೆ.

ಹುಡ್ಕೋ ಕಾಲನಿಯಲ್ಲಿ ಸುಮಾರು 300 ಮನೆಗಳಿದ್ದು ಸಾವಿರಕ್ಕೂ ಹೆಚ್ಚು ಮಂದಿ ವಾಸಿಸುತ್ತಿದ್ದಾರೆ. ಇಲ್ಲಿನ ಸ್ಥಳೀಯ ನಿವಾಸಿಗಳು ಈ ಪಾರ್ಕ್‌ ಅನ್ನು ಬಳಸುತ್ತಿದ್ದಾರೆ. ಆದರೆ ಪಾರ್ಕ್‌ನ ಸುತ್ತ ಪೊದೆ ಗಿಡ ಮರಗಳು ಬೆಳೆದು ನಿತ್ಯ ಭೇಟಿ ನೀಡುವ ಸ್ಥಳೀಯರು ತೊಂದರೆ ಅನುಭವಿಸುವಂತಾಗಿದೆ. ಮಕ್ಕಳ ಆಟಿಕೆ ವಸ್ತುಗಳು ಸಂಪೂರ್ಣ ಹಾಳಾಗಿ ಗಿಡಬಳ್ಳಿಗಳ ಒಳಗೆ ಹುದುಗಿಹೋಗಿದೆ.

ಮಕ್ಕಳ ಆಟಿಕೆ ವಸ್ತುಗಳಿಗೆ ಹಾನಿ
ಮಕ್ಕಳ ಆಟಿಕೆಗಳು ಕೆಲವು ತುಂಡಾಗಿ ನೆಲಕ್ಕೆ ಬಿದ್ದರೆ ಇನ್ನು ಕೆಲವು ಅರ್ಧ ಹಾನಿಗೆ ಒಳಗಾಗಿ ತುಕ್ಕು ಹಿಡಿದ ಸ್ಥಿತಿಯಲ್ಲಿದೆ. ಬೆಂಜ್‌ ಪ್ರಸ್‌ ಉಯ್ನಾಲೆಗಳ ಸುತ್ತ ಗಿಡಗಳು ಬೆಳೆದು ಮಕ್ಕಳಿಗೆ ಬಳಕೆಗೆ ಬಾರದಂತಾಗಿದೆ. ಸಲಕರಣೆಗಳ ಸುತ್ತ ಮುಳ್ಳಿನ ಗಿಡಗಳು ಬೆಳೆದಿದ್ದು ಇದರಲ್ಲಿ ಆಟವಾಡಲು ತೊಡಗಿದ ಮಕ್ಕಳಿಗೆ ಪರಚಿದ ಗಾಯಗಳಾಗುವುದು ಸಾಮಾನ್ಯ ಎಂಬುದು ಸ್ಥಳೀಯರ ಅಭಿಪ್ರಾಯ. ಇಲ್ಲಿ ವಾಕಿಂಗ್‌ ಟ್ರ್ಯಾಕ್‌ ಇಲ್ಲದಿರುವುದು ಸಾರ್ವಜನಿಕರಿಗೆ ಅನಾನುಕೂಲವಾಗಿದೆ.

ಪಾರ್ಕ್‌ ಆವರಣದ ಬಹುಭಾಗ ಗಿಡಗಳ ರಾಶಿಯೆ ಬೆಳೆದಿರುವುದರಿಂದ ಪಾರ್ಕ್‌ನ್ನು ಸದ್ಭಳಕೆ ಮಾಡಲು ಸಾಧ್ಯವಾಗುತ್ತಿಲ್ಲ. ಮುಳ್ಳಿನ ಗಿಡಗಳು ಸಾರ್ವಜನಿಕರ ಓಡಾಟಕ್ಕೆ ತೊಂದರೆ ಉಂಟು ಮಾಡಿದೆ. ಕೂರಲು ನಾಲ್ಕೈದು ಬೆಂಚ್‌ಗಳು ಇದ್ದು ಇವು ಹಾನಿಗೊಳಗಾದ ಸ್ಥಿತಿಯಲ್ಲಿದೆ.

ಶುಚಿತ್ವ ಇಲ್ಲ
ಹೊಸ ಶೌಚಾಲಯ ಕಟ್ಟಡವನ್ನು ಈ ಪಾರ್ಕಿನಲ್ಲಿ ನಿರ್ಮಿಸಿದರೂ ಶುಚಿತ್ವ ಇಲ್ಲದೆ ಬಳಸುವಂತಿಲ್ಲ. ಪಾರ್ಕ್‌ನಲ್ಲಿ ಕಸದ ಬುಟ್ಟಿ ಇಲ್ಲದಿರುವುದರಿಂದ ಪಾರ್ಕ್‌ ಗೆ ಭೇಟಿ ನೀಡುವ ಜನರು ತಾವು ತಂದ ತಿನಿಸುಗಳ ಪೊಟ್ಟಣಗಳನ್ನು ಪಾರ್ಕ್‌ನಲ್ಲೆ ಚೆಲ್ಲಿ ಹೋಗುತ್ತಿದ್ದು ಪಾರ್ಕ್‌ನ ಶುಚಿತ್ವಕ್ಕೆ ಹೊಡೆತ ಬಿದ್ದಿದೆ.

ಹೊಸ ರೂಪ
ಸಂಬಂಧ ಪಟ್ಟ ಅಧಿಕಾರಿಗಳಿಗೆ ಅನೇಕ ಬಾರಿ ತಿಳಿಸಿದ್ದು ಹೊಸ ರೂಪ ನೀಡುವ ಚಿಂತನೆ ಇದೆ. ನಗರ ಸಭೆಯಿಂದ ವಾರ್ಡ್‌ಗಳ ಶುಚಿತ್ವಕ್ಕಾಗಿ ನೇಮಿಸಿರುವ ಕಾರ್ಮಿಕರು ಆರಂಭದಲ್ಲಿ ವಾರದಲ್ಲಿ ಎರಡು ದಿನ ಏಳೆಂಟು ಮಂದಿ ಬರುತ್ತಿದ್ದರು. ಈಗ ವಾರದಲ್ಲಿ ಒಂದೇ ದಿನ ಇಬ್ಬರು ಮೂವರು ಬರುತ್ತಿದ್ದಾರೆ. ಇದರಿಂದ ವಾರ್ಡ್‌ನ ಇತರಡೆಗಳ ಶುಚಿತ್ವಕ್ಕೆ ಮಾತ್ರ ಗಮನ ಕೊಡಲಾಗುತ್ತಿದೆ. ಹೀಗಾಗಿ ಪಾರ್ಕ್‌ ಸ್ವತ್ಛತೆ ಮಾಡಲು ಸಾಧ್ಯವಾಗುತ್ತಿಲ್ಲ.
-ಕಲ್ಪನಾ ಸುಧಾಮ,
ನಗರಸಭಾ ಸದಸ್ಯೆ, ಮಣಿಪಾಲ

ಅಭಿವೃದ್ಧಿ ಕಾಣಬೇಕಿದೆ
ಸುಮಾರು ವರ್ಷಗಳಿಂದ ಇಲ್ಲಿನ ಪಾರ್ಕ್‌ ಸಮರ್ಪಕ ವ್ಯವಸ್ಥೆ ಇಲ್ಲದೆ ಜನರನ್ನು ಆಕರ್ಷಿಸುವಲ್ಲಿ ಹಿಂದೆ ಬಿದ್ದಿದೆ. ಜನರು ಯಾವುದೇ ಸೌಲಭ್ಯ ಇಲ್ಲದಿರುವುದರಿಂದ ಪಾರ್ಕ್‌ ಗೆ ಭೇಟಿ ನೀಡುತ್ತಿಲ್ಲ. ಮತ್ತಷ್ಟು ಅಭಿವೃದ್ಧಿ ಕಾರ್ಯಗಳು ಈ ಪಾರ್ಕ್‌ ನಲ್ಲಾದರೆ ಸಾರ್ವಜನಿಕರಿಗೆ ಅನುಕೂಲವಾಗಲಿದೆ.
-ಆಕಾಶ್‌, ಸ್ಥಳೀಯರು

- ಕಾರ್ತಿಕ್‌ ಚಿತ್ರಾಪುರ

ಟಾಪ್ ನ್ಯೂಸ್

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Brahmavar

Padubidri: ಅಪಘಾತದ ಗಾಯಾಳು ಸಾವು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-wqeqqweqwe

Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.