ಪಾದಚಾರಿಗಳಿಗೆ ದಾರಿ: ತಳ್ಳುಗಾಡಿಗಳಿಂದ ಮುಕ್ತಿ
Team Udayavani, Feb 2, 2019, 12:30 AM IST
ಉಡುಪಿ: ಸಿಟಿ ಮತ್ತು ಸರ್ವೀಸ್ ಬಸ್ ನಿಲ್ದಾಣಗಳ ನಡುವಿನ ಜನ, ವಾಹನ ನಿಬಿಡ ಸ್ಥಳವಾಗಿರುವ ಐರೋಡಿಕಾರ್ ಜಂಕ್ಷನ್ನಲ್ಲಿ ರಸ್ತೆ ಮಧ್ಯೆಯೇ ಇದ್ದ ತಳ್ಳುಗಾಡಿಗಳನ್ನು ತೆರವುಗೊಳಿಸಲಾಗಿದೆ.
ತಳ್ಳುಗಾಡಿಗಳಿಂದಾಗಿ ಪಾದಚಾರಿಗಳಿಗೆ ತೊಂದರೆಯಾಗುತ್ತಿರುವ ಬಗ್ಗೆ ಉದಯವಾಣಿ ವರದಿ ಪ್ರಕಟಿಸಿತ್ತು. ಜತೆಗೆ ಎರಡು ಬ್ಯಾರಿಕೇಡ್ಗಳ ನಡುವೆ ಪಾದಚಾರಿಗಳು ಸಂಚರಿಸುತ್ತಿದ್ದ ಸ್ಥಳವನ್ನು ರಿಬ್ಬನ್ಗಳನ್ನು ಕಟ್ಟುವ ಮೂಲಕ ಬಂದ್ ಮಾಡಿರುವ ಬಗ್ಗೆಯೂ ಗಮನ ಸೆಳೆದಿತ್ತು. ವರದಿ ಪ್ರಕಟವಾದ ಅನಂತರ ಪೊಲೀಸರು ಎರಡು ತಳ್ಳುಗಾಡಿಗಳನ್ನು ತೆರವುಗೊಳಿಸಿದ್ದಾರೆ. ಅಡ್ಡಲಾಗಿ ಕಟ್ಟಿದ್ದ ರಿಬ್ಬನ್ಗಳನ್ನು ಕೂಡ ತೆರವು ಮಾಡಿದ್ದಾರೆ.
“ಐರೋಡಿಕಾರ್ ಜಂಕ್ಷನ್ನಿಂದ ಸಿಟಿಬಸ್ (ಉಡುಪಿ-ಮಣಿಪಾಲ ಮುಖ್ಯರಸ್ತೆ) ಕಡೆ ಏಕಮುಖ ಸಂಚಾರವಿದೆ. ನಿಯಮ ಉಲ್ಲಂಘಿಸಿದರೆ ಕ್ರಮ ಕೈಗೊಳ್ಳಲಾಗುವುದು. ಪಾದಚಾರಿಗಳಿಗಾಗಿ ಮೀಸಲಿಟ್ಟ ಜಾಗದಲ್ಲಿ ದ್ವಿಚಕ್ರಗಳನ್ನು ನುಗ್ಗಿಸಿದರೆ ಕೇಸು ದಾಖಲಿಸಲಾಗುವುದು ಎಂದು ಸಂಚಾರಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ