ಡಿ. 20: ಪಡುಬಿದ್ರಿ-ಕಾರ್ಕಳ ಹೆದ್ದಾರಿ ಬಂದ್
Team Udayavani, Dec 15, 2018, 9:47 AM IST
ಬೆಳ್ಮಣ್: ನಿಂತು ಹೋಗಿದ್ದ ಬೆಳ್ಮಣ್ ಟೋಲ್ಗೇಟ್ ಪ್ರಕ್ರಿಯೆಗೆ ಮತ್ತೆ ಚಾಲನೆ ದೊರಕಿರುವ ಹಿನ್ನೆಲೆಯಲ್ಲಿ ಟೋಲ್ ವಿರೋಧಿ ಸಮಿತಿ ನೇತೃತ್ವದಲ್ಲಿ ಡಿ. 20ರಂದು ಪಡುಬಿದ್ರೆ -ಕಾರ್ಕಳ ರಾಜ್ಯ ಹೆದ್ದಾರಿ ಬಂದ್ ನಡೆಯಲಿದೆ.
ಅಂದು ಬೆಳಗ್ಗೆ 9ಕ್ಕೆ ಬೆಳ್ಮಣ್ ಬಸ್ ನಿಲ್ದಾಣದ ಬಳಿ ಬೃಹತ್ ಪ್ರತಿಭಟನ ಸಭೆ ನಡೆಯಲಿದ್ದು ಪಡುಬಿದ್ರೆಯಿಂದ ಕಾರ್ಕಳದವರೆಗಿನ ಹೆದ್ದಾರಿಯ ಎಲ್ಲ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಸಹಕರಿಸುವುದರ ಜತೆ ಉದ್ಯಮಿಗಳು ಹಾಗೂ ನಾಗರಿಕರು ಸಂಪೂರ್ಣ ಬೆಂಬಲ ನೀಡಬೇಕೆಂದು ಟೋಲ್ಗೇಟ್ ವಿರೋಧಿ ಸಮಿತಿಯ ಸಂಚಾಲಕ ನಂದಳಿಕೆ ಸುಹಾಸ್ ಹೆಗ್ಡೆ ತಿಳಿಸಿದ್ದಾರೆ.