ಲಾಕ್ಡೌನ್ನಲ್ಲಿಯೂ ಅಂಚೆ ಸೇವೆ
Team Udayavani, Apr 4, 2020, 10:35 AM IST
ಉಡುಪಿ: ರಸ್ತೆ, ರೈಲ್ವೇ, ವಾಯು ಮಾರ್ಗಗಳು ಸ್ಥಗಿತ ಗೊಂಡಿರುವಾಗ ಸಾರ್ವಜನಿಕರಿಗಾಗಿ ಔಷಧ ಸರಬರಾಜಿನಲ್ಲಿ ಅಂಚೆ ಇಲಾಖೆ ಪ್ರಮುಖ ಪಾತ್ರ ವಹಿಸುತ್ತಿದೆ.
ಸಾಮಾಜಿಕ ಭದ್ರತಾ ಪಿಂಚಣಿ ಯನ್ನು ಅಂಚೆ ಇಲಾಖೆ ಪಾವತಿಸುತ್ತಿದೆ. ಸುಮಾರು ಶೇ. 70ರಷ್ಟು ಡಿಜಿಟಲ್ ಪಾವತಿ ಮೂಲಕ ನಡೆಯುತ್ತಿದ್ದು ಉಳಿದಂತೆ ಮನಿ ಆರ್ಡರ್ ಮೂಲಕ ಪೋಸ್ಟ್ಮನ್ ವಿತರಿಸುತ್ತಿದ್ದಾರೆ. ಡಿಜಿಟಲ್ ಪಾವತಿಯೂ ಅಂಚೆ ಕಚೇರಿ ಪಾಸ್ಬುಕ್ನಲ್ಲಿದ್ದರೆ ಅಂಚೆ ಸಿಬಂದಿ ಗ್ರಾಹಕರಿಗೆ ಸ್ಯಾನಿಟೈಸ್ ಮುಂಜಾಗ್ರತೆ ಮೂಲಕ ನೀಡುತ್ತಿದ್ದಾರೆ. ವೈದ್ಯಕೀಯ ಅಗತ್ಯಗಳನ್ನು ಅಂಚೆ ಮೂಲಕ ಕಳುಹಿಸಿದರೆ ಅವುಗಳನ್ನು ಸಾಧ್ಯವಿರುವಲ್ಲಿ ಮನೆಗಳಿಗೆ ತಲುಪಿಸಲಾಗುತ್ತಿದೆ.
ಗ್ರಾಮೀಣ ಅಂಚೆ ಕಚೇರಿಗಳೂ ಸಹಿತ ಬಹುತೇಕ ಎಲ್ಲ ಅಂಚೆ ಕಚೇರಿಗಳೂ ತೆರೆದಿದ್ದು ಠೇವಣಿ ಸ್ವೀಕಾರ ಮತ್ತು ಹಣ ಪಾವತಿಯನ್ನು ಬೆಳಗ್ಗೆ 10ರಿಂದ ಮಧ್ಯಾಹ್ನ 2ರ ವರೆಗೆ ಮಾಡಲಾಗುತ್ತಿದೆ. ಬ್ಯಾಂಕುಗಳ ಎಟಿಎಂ ಜತೆ ಅಂಚೆ ಇಲಾಖೆ ಎಟಿಎಂಗೆ ಸಂಪರ್ಕವಿದ್ದು ಈ ಇಂಟರ್ ಆಪರೇಬಲ್ ಎಟಿಎಂಗಳು ಕಾರ್ಯನಿರ್ವಹಿಸುತ್ತಿವೆ.
ಆಧಾರ್ ಲಿಂಕ್ ಹೊಂದಿರುವ ಬ್ಯಾಂಕ್ ಖಾತೆಗಳು ಇದ್ದಲ್ಲಿ ಖಾತೆದಾರರಿಗೆ ಗ್ರಾಮೀಣ ಪೋಸ್ಟ್ಮನ್ಗಳಿಗೆ ನೀಡಿದ ಮೊಬೈಲ್ ಮೂಲಕ ಹಣ ನೀಡಲಾಗುತ್ತಿದೆ. ಇಂಡಿಯ ಪೋಸ್ಟ್ ಪೇಮೆಂಟ್ ಬ್ಯಾಂಕ್ನಡಿ ಆಧಾರ್ ಎನೇಬಲ್ಡ್ ಪೇಮೆಂಟ್ ಸಿಸ್ಟಮ್ನಡಿ ಈ ಸೇವೆ ನಡೆಯುತ್ತಿದೆ ಎಂದು ಕರ್ನಾಟಕ ವೃತ್ತದ ಚೀಫ್ ಪೋಸ್ಟ್ಮಾಸ್ಟರ್ ಜನರಲ್ ತಿಳಿಸಿದ್ದಾರೆ.
ಪಿಂಚಣಿ ಹಣ ಜಮೆ
ಮಂಗಳೂರು: ಮಾರ್ಚ್ನಲ್ಲಿ ವಿವಿಧ ಸಾಮಾಜಿಕ ಪಿಂಚಣಿ ಯೋಜನೆಗಳಲ್ಲಿ 25,777 ಜನರಿಗೆ ಪಾವತಿಯಾಗಬೇಕಾಗಿರುವ 2,18,45,000 ರೂ. ಫಲಾನು ಭವಿಗಳ ಖಾತೆಗಳಿಗೆ ಜಮೆ ಯಾಗಿದ್ದು ಸಮೀಪದ ಅಂಚೆ ಕಚೇರಿಯಿಂದ ಪಡೆಯಬಹುದು. ಹೆಚ್ಚಿನ ಮಾಹಿತಿಗೆ ಬಲ್ಮಠ ವಿಭಾಗೀಯ ಕಚೇರಿಯ ವಾಟ್ಸ್ ಆ್ಯಪ್ ಸಂಖ್ಯೆ 9448291072ಕ್ಕೆ ಸಂದೇಶ ಕಳುಹಿಸಬಹುದು ಎಂದು ಮಂಗಳೂರು ವಿಭಾಗದ ಹಿರಿಯ ಅಂಚೆ ಅಧೀಕ್ಷಕರ ಪ್ರಕಟನೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ
Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ
Kapu Assembly constituency: ನಕಲಿ ಮತದಾನ;ಆರೋಪ
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
MUST WATCH
ಹೊಸ ಸೇರ್ಪಡೆ
Devotion: ಭಕ್ತಿಯ ಅರ್ಥವಾದರೂ ಏನು?
Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ
Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್
ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು