ಪ್ರಯಾಣಿಕರ ಪ್ರಾಣದೊಡನೆ ಚೆಲ್ಲಾಟವಾಡುತ್ತಿದೆ ಹೆದ್ದಾರಿ ಕಾಮಗಾರಿ


Team Udayavani, Apr 6, 2017, 1:01 PM IST

06-REPORTER-9.jpg

ಬೈಂದೂರು: ಹಿಮಾಲಯ ಪರ್ವತ ಪಾರ್ಶ್ವದ ಲಡಾಕ್‌ ಎಂಬಲ್ಲಿ ಕರ್‌ದುಂಗ್ಲಾ ಪಾಸ್‌ ಎನ್ನುವ ರಸ್ತೆಯಿದೆ. ಸಮುದ್ರ ಮಟ್ಟದಿಂದ 18,358 ಅಡಿ ಎತ್ತರವಿರುವ ಈ ರಸ್ತೆ ಪ್ರಪಂಚದ ಅತ್ಯಂತ ಎತ್ತರದ, ಅಪಾಯಕಾರಿ ರಸ್ತೆ ಎಂದು ಗುರುತಿಸಿಕೊಂಡಿದೆ. ಇಲ್ಲಿನ ಕಣಿವೆಗಳು ನೋಡುಗರ ಎದೆ ಝಲ್‌ ಎನಿಸುತ್ತದೆ. 

ಸಂಚಾರ ಅಪಾಯಕಾರಿ
ಇಷ್ಟೆಲ್ಲಾ ಪೀಠಿಕೆ ಯಾಕೆಂದರೆ ಬೈಂದೂರು ಸಮೀಪದ ಒತ್ತಿನೆಣೆ ಪರಿಸರದಲ್ಲಿ ನಿರ್ಮಾಣವಾಗುತ್ತಿರುವ ರಸ್ತೆ ಹಿಮಾಲಯದ ಕಣಿವೆ ರಸ್ತೆಗಳನ್ನು ನೆನಪು ಮಾಡುತ್ತಿದೆ. ಲಡಾಕ್‌ ರಸ್ತೆ ಸಂಚಾರಕ್ಕಿಂತ ಭಯಾನಕವಾಗಿದೆ. ಮಾತ್ರವಲ್ಲದೆ ನಿತ್ಯ ಪ್ರಯಾಣಿಕರು ಜೀವವನ್ನು ಕೈಯಲ್ಲಿ ಹಿಡಿದು ಸಂಚರಿಸಬೇಕಾಗಿದೆ.

ಕಾದಿದೆ ಅಪಾಯ, ನಿರ್ಲಕ್ಷ್ಯ
ಬೈಂದೂರು ಒತ್ತಿನೆಣೆ ಪರಿಸರ ಮೇಲ್ಪದರದಲ್ಲಿ ಬಾಕ್ಸೈಟ್‌ ಕಲ್ಲು ಗಳಿವೆ. ಆದರೆ ಆಳಕ್ಕೆ ಇಳಿದಂತೆ ಜೇಡಿ ಮಣ್ಣಿನಿಂದಾವೃತವಾಗಿದೆ. ಹೀಗಾಗಿ ಇಲ್ಲಿ ಮೇಲ್ನೋಟಕ್ಕೆ ಯಾವ ತಜ್ಞರಿಂದಲೂ ಮಣ್ಣಿನ ಲಕ್ಷಣಗಳನ್ನು ಹೇಳಲಾಗುತ್ತಿಲ್ಲ. ಹೀಗಾಗಿ ಕೊಂಕಣ ರೈಲ್ವೇ ಮಾರ್ಗ ನಿರ್ಮಾಣವಾಗುವ ಸಂದರ್ಭದಲ್ಲಿ ಸುರಂಗ ನಿರ್ಮಿಸಲು ಹರ ಸಾಹಸ ಪಡಬೇಕಾಯಿತು ಮತ್ತು ಹಲವು ಜನರು ಪ್ರಾಣ ಕಳೆದುಕೊಂಡಿದ್ದರು. 

ಮಣ್ಣು ಕುಸಿಯುತ್ತಿದೆ
ಪ್ರಸ್ತುತ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ನಡೆಸುವ ಕಂಪೆನಿಗೆ ಒತ್ತಿನೆಣೆ ರಸ್ತೆ ನಿರ್ಮಾಣದ ಲೆಕ್ಕಾಚಾರ ತಪ್ಪಿದೆ. ಹೀಗಾಗಿ ಈ ಭಾಗದಲ್ಲಿ ಸ್ಪಷ್ಟತೆ ಇಲ್ಲದೇ ಗುಡ್ಡವನ್ನು ಸೀಳಲಾಗಿದೆ. ಬೃಹತ್‌ ಕಣಿವೆ ಮಧ್ಯೆ ರಸ್ತೆ ನಿರ್ಮಾಣ ಮಾಡಿದ್ದು, ದಿನದಿಂದ ದಿನಕ್ಕೆ ಮಣ್ಣು ಕುಸಿಯುತ್ತಿದೆ. ಮಳೆಗಾಲ ಆರಂಭವಾದರೆ ಸಂಪೂರ್ಣ ಗುಡ್ಡ ಕುಸಿಯುವ ಜತೆಗೆ ಒತ್ತಿನೆಣೆ ಹೆದ್ದಾರಿ ಸಂಪರ್ಕವೇ ಕಡಿದು ಹೋಗುವ ಸಾಧ್ಯತೆಗಳಿದೆ. 

ಚರ್ಮ ಸುಲಿದ ದೇಹದಂತೆ
ಈಗಿರುವ ರಸ್ತೆಯ ಪಕ್ಕದಲ್ಲಿ  ಕಾಮಗಾರಿ ನಡೆಸುವ ಕಂಪೆನಿ ಗುಡ್ಡವನ್ನು ಕೊರೆದು ರಸ್ತೆ ನಿರ್ಮಿಸಲು ಮುಂದಾಗಿದೆ. ಇದರ ಪರಿಣಾಮ ವಿಶಾಲ ಗುಡ್ಡದ ಪರಿಸರ ಸೌಂದರ್ಯ ಕಳೆದುಕೊಂಡು ಚರ್ಮ ಸುಲಿದ ದೇಹದಂತಾಗಿದೆ. ಗುಡ್ಡದ ಮೇಲ್ಭಾಗದಲ್ಲಿ ಬೃಹತ್‌ ಕಲ್ಲುಗಳು ಕುಸಿಯುವ ಭೀತಿ ಒಂದೆಡೆಯಾದರೆ ಮಳೆ ನೀರು ಸುರಿದರೆ ಮಣ್ಣು ಕುಸಿಯುತ್ತದೆ.

ಜನರಲ್ಲಿ  ಭೀತಿ
ಮಳೆಗಾಲಕ್ಕೆ ಒಂದೆರಡು ತಿಂಗಳುಗಳು ಮಾತ್ರ ಇದೆ. ಆದರೆ ಯಾವುದೇ ಮುಂಜಾಗ್ರತೆ ವಹಿಸದಿರುವುದು ಜನರಲ್ಲಿ ಭೀತಿ ಉಂಟು ಮಾಡಿದೆ. ಈಗಿರುವ ರಸ್ತೆಯ ಪಕ್ಕದಲ್ಲಿ ಮೂವತ್ತು ಅಡಿಗೂ ಅಧಿಕ ಕಣಿವೆ ತೆಗೆದಿದ್ದಾರೆ. ಇಷ್ಟೊಂದು ಅಪಾಯಕಾರಿ ರಸ್ತೆಯಲ್ಲಿ ಸುರಕ್ಷತಾ ಕ್ರಮಗಳನ್ನು ಅನುಸರಿಸಿಲ್ಲ. ಒಂದೊಮ್ಮೆ ವಾಹನಗಳು ಕಣಿವೆಗೆ ಉರುಳಿದರೆ ಭಾರೀ ಅಪಾಯ ಸಂಭವಿಸುವ ಸಾಧ್ಯತೆಯಿದೆ. ಅದರಲ್ಲೂ ರಸ್ತೆಗಳು ಉಬ್ಬು ತಗ್ಗುಗಳಿಂದಾವೃತವಾಗಿರುವುದರಿಂದ ವಾಹನ ನಿಯಂತ್ರಣ ತಪ್ಪುವ ಸಾಧ್ಯತೆಗಳಿವೆ.

ಜಲಾವೃತವಾಗುವ ಭೀತಿ 
ಉಪ್ಪುಂದ ಪರಿಸರದಲ್ಲಿ ರಸ್ತೆಯ ಮಧ್ಯ ಭಾಗದಲ್ಲಿ ಮಣ್ಣಿನ ರಾಶಿ ಹಾಕಲಾಗಿದೆ.ಅಕ್ಕಪಕ್ಕದಲ್ಲಿ ಕಿರಿದಾದ ಮಾರ್ಗಗಳಿವೆ. ಮಳೆಗಾಲದಲ್ಲಿ ಉಪ್ಪುಂದ ಪೇಟೆ ಜಲಾವೃತ ಗೊಳ್ಳುವುದು ಖಚಿತ ಎನ್ನುವುದು ಇಲ್ಲಿನ ಸ್ಥಳೀಯರ ಅಭಿಪ್ರಾಯವಾಗಿದೆ. ಕಾಮಗಾರಿ ನಡೆಸುವ ಕಂಪೆನಿ ಸಾರ್ವಜನಿಕ ರಿಗಾಗುತ್ತಿರುವ ಸಮಸ್ಯೆಗಳ ಕುರಿತು ಗಮನಹರಿಸುತ್ತಿಲ್ಲ. 
ಜಿಲ್ಲಾಧಿಕಾರಿ ಪರಿಶೀಲಿಸಲಿ ಕಾಮಗಾರಿಯಲ್ಲೂ ಸ್ಪಷ್ಟತೆಯಿಲ್ಲ ಹೀಗಾಗಿ ಜಿಲ್ಲಾಧಿಕಾರಿಗಳು ಬೈಂದೂರಿನಲ್ಲಿ ನಡೆಯುವ ಕಾಮಗಾರಿ ಪರಿಶೀಲಿಸಬೇಕಾಗಿದೆ. 

ಒಟ್ಟಾರೆಯಾಗಿ ಜನರಿಗೆ ಅನುಕೂಲ ವಾಗಬೇಕಾದ ಹೆದ್ದಾರಿ ಕಾಮಗಾರಿ ಅವೈಜ್ಞಾನಿಕ ಚಿಂತನೆಗಳಿಂದಾಗಿ ಜನರಿಗೆ ಸಮಸ್ಯೆಯಾಗಿ ಪರಿಣಮಿಸುವುದು ಸಾರ್ವಜನಿಕರ ಅತೃಪ್ತಿಗೆ ಕಾರಣವಾಗಿದೆ.

ಕಳೆದ ವರ್ಷದ ಕಹಿ ನೆನಪು 
ಒತ್ತಿನೆಣೆ ಪರಿಸರದಲ್ಲಿ ಕಳೆದ ವರ್ಷ ಮಳೆಗಾಲದಲ್ಲಿ ನೀರಿನ ಹರಿವು ನಿಯಂತ್ರಣ ಮಾಡಲಾಗದೆ ಅಪಾರ ಪ್ರಮಾಣದ ಜೇಡಿಮಣ್ಣು ಒತ್ತಿನೆಣೆ ಗುಡ್ಡದ ಕೆಳ ಭಾಗದಲ್ಲಿ ಶೇಖರಣೆಗೊಂಡಿತ್ತು. ಚರಂಡಿ, ನದಿಗಳು ಶೇಡಿಮಣ್ಣು ತುಂಬಿದ ಪರಿಣಾಮ ಪಡುವರಿ, ಬೈಂದೂರು ಮುಂತಾದ ಕಡೆ ಜನರು ಕಾಮಗಾರಿ ನಡೆಸುವ ಕಂಪೆನಿ ವಿರುದ್ಧ ಪ್ರತಿಭಟನೆ ನಡೆಸಿದ್ದರು. 

ಅರುಣ್‌ ಕುಮಾರ್‌ ಶಿರೂರು

ಟಾಪ್ ನ್ಯೂಸ್

3-

LS Polls: ರಾಷ್ಟ್ರ ಪ್ರೇಮ ಬಿಜೆಪಿಯವರಿಂದ ಕಲಿಯಬೇಕಾಗಿಲ್ಲ: ಮಂಜುನಾಥ್ ಭಂಡಾರಿ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Lok Sabha polls: ಒಡಿಶಾದಲ್ಲಿ ನವೀನ್‌ ಜನಪ್ರಿಯತೆ Vs ಬಿಜೆಪಿ

Lok Sabha polls: ಒಡಿಶಾದಲ್ಲಿ ನವೀನ್‌ ಜನಪ್ರಿಯತೆ Vs ಬಿಜೆಪಿ

ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ

ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

4

IPL: ಆಟ ಮೆರೆದಾಟ; ಬ್ಯಾಟಿಂಗ್‌ ಅಷ್ಟೇ ಕ್ರಿಕೆಟ್ಟಾ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Anegudde Temple: ಭಕ್ತರ ಸಂಖ್ಯೆ ಹೆಚ್ಚಳ; ವಿಶೇಷ ಪಾನಕ ವಿತರಣೆ 

Anegudde Temple: ಭಕ್ತರ ಸಂಖ್ಯೆ ಹೆಚ್ಚಳ; ವಿಶೇಷ ಪಾನಕ ವಿತರಣೆ 

Thekkatte: ಕಾರು ಮರಕ್ಕೆ ಢಿಕ್ಕಿ; ಯುವತಿ ಸ್ಥಳದಲ್ಲೇ ಸಾವು, ನಾಲ್ವರಿಗೆ ಗಂಭೀರ ಗಾಯ

Kundapura ಮಿನಿ ಗೂಡ್ಸ್‌ ವಾಹನ ಢಿಕ್ಕಿ; ಪಾದಚಾರಿ ಸಾವು

Kundapura ಮಿನಿ ಗೂಡ್ಸ್‌ ವಾಹನ ಢಿಕ್ಕಿ; ಪಾದಚಾರಿ ಸಾವು

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

3-

LS Polls: ರಾಷ್ಟ್ರ ಪ್ರೇಮ ಬಿಜೆಪಿಯವರಿಂದ ಕಲಿಯಬೇಕಾಗಿಲ್ಲ: ಮಂಜುನಾಥ್ ಭಂಡಾರಿ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Lok Sabha polls: ಒಡಿಶಾದಲ್ಲಿ ನವೀನ್‌ ಜನಪ್ರಿಯತೆ Vs ಬಿಜೆಪಿ

Lok Sabha polls: ಒಡಿಶಾದಲ್ಲಿ ನವೀನ್‌ ಜನಪ್ರಿಯತೆ Vs ಬಿಜೆಪಿ

ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ

ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.