ಬೈಂದೂರು ರೈಲು ನಿಲ್ದಾಣದಲ್ಲಿ ಸರಕು ಸಾಗಣೆಗೆ ಆದ್ಯತೆ
Team Udayavani, Feb 7, 2019, 12:55 AM IST
ಬೈಂದೂರು: ಬೈಂದೂರು ಮೂಕಾಂಬಿಕಾ ರೈಲ್ವೇ ನಿಲ್ದಾಣದಲ್ಲಿ ಮಾರ್ಚ್ನಿಂದ ಸರಕು ಸಾಗಾಟ ಸೇವೆ ಆರಂಭಗೊಳ್ಳುವ ಸಾಧ್ಯತೆ ಇದೆ. ಈ ಭಾಗದ ಮತೊÕéàದ್ಯಮವನ್ನು ಕೇಂದ್ರೀಕರಿಸಿ ಈ ಸೇವೆ ಕೊಂಕಣ ರೈಲ್ವೇಯಿಂದ ಲಭ್ಯವಾಗಲಿದ್ದು, ಮೀನುಗಾರರಲ್ಲಿ ಹೊಸ ಆಶಾಕಿರಣ ಮೂಡಿಸಿದೆ.
ಬೈಂದೂರುನ ಮರವಂತೆ, ಗಂಗೊಳ್ಳಿ, ಕೊಡೇರಿ, ಉಪ್ಪುಂದ, ಅಳ್ವೆಗದ್ದೆಗಳಲ್ಲಿ ದೊಡ್ಡ ಬಂದರುಗಳಿವೆ. ಮೀನುಗಾರಿಕೆ ಈ ಭಾಗದ ಪ್ರಮುಖ ಉದ್ಯಮವಾಗಿದ್ದು, ಅವುಗಳ ಸಾಗಣೆ ರಸ್ತೆ ಸಾರಿಗೆಯಿಂದ ಮಾತ್ರ ಆಗುತ್ತಿತ್ತು. ಇತ್ತೀಚಿನ ದಿನಗಳಲ್ಲಿ ಮತ್ಸéಕ್ಷಾಮ, ಡೀಸೆಲ್ ಬೆಲೆ ಏರಿಕೆ, ಮೀನು ಸಾಗಾಟ ದರ ಹೆಚ್ಚಳ ಇತ್ಯಾದಿ ಕಾರಣಗಳಿಂದ ಮೀನುಗಾರರು ಸಂಕಷ್ಟ ಅನುಭವಿಸುವಂತೆ ಆಗಿತ್ತು.
ಕಳೆದ ತಿಂಗಳು ಈ ಭಾಗಕ್ಕೆ ಸಂಸದರು ಆಗಮಿಸಿದ್ದ ವೇಳೆ ನಿಲ್ದಾಣ ಅಭಿವೃದ್ಧಿ ಮತ್ತು ಸರಕು ಸಾಗಾಟ ಸೇವೆಗೆ ಆದ್ಯತೆ ನೀಡುವ ಬಗ್ಗೆ ಚರ್ಚೆ ನಡೆಸಿದ್ದರು. ಪೂರಕವಾಗಿ ರೈಲ್ವೇ ಇಲಾಖೆ ಸ್ಪಂದಿಸಿ ಮೀನುಗಾರರ ಸಭೆ ಕರೆದು ಚರ್ಚಿಸಿತ್ತು. ಈ ಬಗ್ಗೆ ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕಿದ್ದು, ಈ ವರೆಗೆ ಉಡುಪಿ, ಭಟ್ಕಳ ರೈಲ್ವೇ ನಿಲ್ದಾಣದಲ್ಲಿ ಮಾತ್ರ ಇದ್ದ ಮೀನು ಸಾಗಾಟ ವ್ಯವಸ್ಥೆ ಬೈಂದೂರಿನಲ್ಲೂ ಶುರುವಾಗಲು ಕಾರಣವಾಗಿದೆ.
ಮೀನುಗಾರರಿಗೆ ಲಾಭವೇನು?
ರತ್ನಗಿರಿ, ಗೋವಾ, ಮುಂಬಯಿ, ಕೇರಳ ಮತ್ತು ಚೆನ್ನೈಗೆ ಮೀನನ್ನು ರಸ್ತೆ ಮೂಲಕವೇ ಸಾಗಿಸಬೇಕಾಗಿತ್ತು. ಇದು ವೆಚ್ಚದಾಯಕವಾಗಿತ್ತು. ಈಗ ರೈಲಿನಲ್ಲಿ ಸಾಗಿಸಿದರೆ ಒಂದು ಕೆ.ಜಿ ಗೆ ಕೇವಲ ಒಂದೂವರೆ ರೂಪಾಯಿ ಮಾತ್ರ ವೆಚ್ಚ ತಗಲುತ್ತದೆ.
ನಿತ್ಯ 100 ಟನ್ ಸಾಗಾಟ ನಿರೀಕ್ಷೆ
ಪ್ರತಿ ದಿನ ಬೈಂದೂರು ನಿಲ್ದಾಣದ ಮೂಲಕ 100 ಟನ್ ಮೀನು ಸಾಗಾಟವಾಗುವ ನಿರೀಕ್ಷೆಯಿದೆ. ಇದಕ್ಕೆ ಮೀನುಗಾರರ ಸಂಘದ ಮೂಲಕ ಸರಕು ಏಜೆಂಟ್ ನೇಮಿಸಿ ಬಂದರುಗಳಿಂದ ನೇರ ರೈಲ್ವೇ ನಿಲ್ದಾಣ ತಲುಪುವ ವ್ಯವಸ್ಥೆ ಮಾಡಲಾಗಿದೆ. ಇದರಿಂದ ರಸ್ತೆ ಸಾಗಾಟಕ್ಕಿಂತ 5 ಪಟ್ಟು ಉಳಿತಾಯವಾಗಲಿದೆ ಎಂದು ಮೀನು ಗಾರರ ಮುಖಂಡ ನವೀನ್ಚಂದ್ರ ತಿಳಿಸಿದ್ದಾರೆ.
ಇಲಾಖೆಯಿಂದ ಸಹಕಾರ
ಸರಕು ಮತ್ತು ಮೀನು ಸಾಗಣೆಗೆ ರೈಲ್ವೇ ಸೇವೆ ಬಳಸಿಕೊಳ್ಳುವುದು ಸಾಕಷ್ಟು ಅನುಕೂಲವಾಗಲಿದೆ. ಅತಿ ಕಡಿಮೆ ವೆಚ್ಚದಲ್ಲಿ ಸಾಗಾಟದೊಂದಿಗೆ ಸರಳ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಮೀನು ಸಾಗಾಟಕ್ಕೆ ಇಲಾಖೆಯಿಂದ ಪೂರ್ಣ ಸಹಕಾರ ನೀಡಲಾಗುತ್ತದೆ.
– ವಿನಯ ಕುಮಾರ್, ಕೊಂಕಣ ರೈಲ್ವೇ ಮಾರ್ಕೆಟಿಂಗ್ ವ್ಯವಸ್ಥಾಪಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ
Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ
Kapu Assembly constituency: ನಕಲಿ ಮತದಾನ;ಆರೋಪ
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
MUST WATCH
ಹೊಸ ಸೇರ್ಪಡೆ
Sindhanur; ಹಾಸ್ಟೆಲ್ ವಿದ್ಯಾರ್ಥಿನಿಯರು ಅಸ್ವಸ್ಥ: ಆಸ್ಪತ್ರೆಗೆ ದಾಖಲು
IPL 2024; ಪಂಜಾಬ್ ವಿರುದ್ಧ ಸೋಲು; ಅಂಪೈರ್ ಜತೆ ವಾಗ್ವಾದಕ್ಕಿಳಿದ ಗೌತಮ್ ಗಂಭೀರ್
ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ
Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್ ನಲ್ಲಿ ಪತ್ತೆ!
W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ