ಉದಯವಾಣಿ ವಿಶೇಷ : ಯುದ್ಧ ಗೆದ್ದ ಯೋಧನೀಗ ಸಂಕಷ್ಟದಲ್ಲಿ ಬಂದಿ!


Team Udayavani, Aug 23, 2018, 2:20 AM IST

soldire-22-8.jpg

ಬಸ್ರೂರು: ಭಾರತ- ಪಾಕಿಸ್ಥಾನ ಯುದ್ಧದಲ್ಲಿ ಜೀವದ ಹಂಗು ತೊರೆದು ಹೋರಾಡಿದ ವೀರಯೋಧ ಉಳ್ಳೂರು ಕಂದಾವರದ ಕೃಷ್ಣಯ್ಯ ಶೇರೆಗಾರ್‌ ಅವರ ಬದುಕನ್ನು ಕೇಳುವವರೇ ಇಲ್ಲವಾಗಿದೆ. ಅನಾರೋಗ್ಯದಿಂದ ಪೀಡಿತರಾದ ಕೃಷ್ಣಯ್ಯ ಶೇರೆಗಾರ್‌ ಮಾಕೆ ಆಡಿಮನೆಯವರದ್ದು ದುರಂತ ಕಥೆ. ಇವರಿಗೀಗ 66 ವರ್ಷ. ಪಾರ್ಶ್ವವಾಯು ಪೀಡಿತರಾಗಿ ಮಲಗಿದಲ್ಲೇ ನರಳುವಂತಾಗಿದೆ. ಇದರೊಂದಿಗೆ ಗಾಯದ ಮೇಲಿನ ಬರೆಯಂತೆ ಹೃದಯ ಶಸ್ತ್ರಚಿಕಿತ್ಸೆಯೂ ಆಗಿದೆ.

ಅದು ಭಾರತ ಪಾಕಿಸ್ಥಾನದ ಗಡಿ ಪ್ರದೇಶ. ಪಾಕಿಸ್ಥಾನದ ಸೈನಿಕರು 1971ರಲ್ಲಿ ಭಾರತದ ಗಡಿಯೊಳಗೆ ಬಂದಿದ್ದರು. ಆಗ ಭಾರತೀಯ ಭೂಸೇನೆಯ ಯೋಧರು ಪಾಕಿಸ್ಥಾನದ ಸೈನಿಕರನ್ನು ಬಡಿದೋಡಿಸಲು ಆರಂಭಿಸಿದರು. ಪಾಕಿಸ್ಥಾನ ಕಡೆಯಿಂದ ಗುಂಡು ಹಾರಿ ಬಂದಾಗ ನಮ್ಮವರೂ ಗುಂಡಿನ ಸುರಿಮಳೆಗೈದರು. ಕೊನೆಗೂ ಭಾರತ ಜಯಿಸಿತು. ಇದರಲ್ಲಿ ಕೃಷ್ಣಯ್ಯ ಶೇರೆಗಾರ್‌ ಕೂಡ ಪಾಲ್ಗೊಂಡಿದ್ದರು. ಪ್ರಸ್ತುತ ಬರುವ ಪಿಂಚಣಿ ಕುಟುಂಬದ ಯಾವ ಖರ್ಚಿಗೂ ಸಾಲದು. ಇಬ್ಬರು ಪುತ್ರರಲ್ಲಿ ಓರ್ವ ಅಂಗವಿಕಲನಾಗಿದ್ದರೆ, ಮತ್ತೂಬ್ಬ ಪುತ್ರ ನಿರುದ್ಯೋಗಿ, ಇಬ್ಬರು ಪುತ್ರಿಯರಿದ್ದಾರೆ.

ಆಪರೇಷನ್‌ ಬ್ಲೂಸ್ಟಾರ್‌: ಭಾಗಿ
ಸಿಪಾಯಿಯಾಗಿ ಸೇನೆಗೆ ಸೇರಿದ ಇವರು 1983ರಲ್ಲಿ ನಾಯಕ್‌ ಆಗಿ ಪದೋನ್ನತಿ ಹೊಂದಿದರು. 1984 ರ ಜಾಫ್ನಾ ಯುದ್ಧದಲ್ಲಿ ಪಾಲ್ಗೊಂಡದ್ದಲ್ಲದೇ ಅಮೃತಸರದ ಬ್ಲೂಸ್ಟಾರ್‌ ಕಾರ್ಯಾಚರಣೆಯಲ್ಲೂ ಭಾಗವಹಿಸಿದ್ದರು. ಭಾರತ ಸರಕಾರದಿಂದ ಉತ್ತಮ ಸೇವೆಗಾಗಿ ಸೇವಾ ಪದಕ ಪಡೆದ ಹೆಮ್ಮೆಯ ಸೇನಾನಿ. 25 ನೇ ವರ್ಷದ ಸ್ವಾತಂತ್ರ್ಯ ದಿನದಂದು ವಿಶಿಷ್ಟ ಸೇವಾ ಪದಕ ಪಡೆದ ಇವರನ್ನು ಭಾರತ ಪಾಕ್‌ ಯುದ್ಧದ ವಿಜಯಕ್ಕಾಗಿ ಸಂಗ್ರಾಮ್‌ ಮೆಡಲ್‌ ನೀಡಿ ಪುರಸ್ಕರಿಸಲಾಗಿತ್ತು. ಆದರೂ ಇಂದು ಅವರ ಬದುಕಿನ ಕಥೆ ಕೇಳುವವರಿಲ್ಲ.

ಯಾರಿಗೂ ಕೇಳಿಸದ ಕೂಗು
ಬದುಕಲು ಒಂದು ಸೂರೂ ಸಹ ಇಲ್ಲ. ಇರುವ ಸಣ್ಣ ಮನೆಯೂ ಕುಸಿದು ಬೀಳುವಂತಿದೆ. ಸೇನಾ ಸೇವೆಗಾಗಿ ಇವರು ಪಡೆದ ಯಾವ ಪದಕವೂ ಈ ಕಾಲದಲ್ಲಿ ನೆರವಿಗೆ ಬರುತ್ತಿಲ್ಲ. ಅನೇಕ ಸಂಘ- ಸಂಸ್ಥೆಗಳು ಇವರನ್ನು ಕರೆದು ಸಮ್ಮಾನಿಸಿವೆ. ಆದರೆ ಈ ಕಷ್ಟ ಕಾಲದಲ್ಲಿ ಸಂಘ ಸಂಸ್ಥೆಗಳ ನೆರವು ಅಗತ್ಯವಿದೆ.

ಇನ್ನಾದರೂ ಸರಕಾರ ಸ್ಪಂದಿಸಲಿ
ದೇಶಕ್ಕಾಗಿ ಸೇನೆಯಲ್ಲಿ ಅನೇಕ ಮಹತ್ವದ‌ ಸಂದರ್ಭಗಳಲ್ಲಿ ಕರ್ತವ್ಯ ನಿರ್ವಹಿಸಿರುವ ಯೋಧ ಕೃಷ್ಣಯ್ಯ ಅವರು ನಮ್ಮೂರಿನವರು ಎನ್ನುವುದೇ ನಮ್ಮ ಹೆಮ್ಮೆ. ಆದರೆ ಅವರ ಈಗಿನ ಅನಾರೋಗ್ಯದ ಬಗ್ಗೆ, ಕುಟುಂಬದ ಸಮಸ್ಯೆಯ ಕುರಿತು ಸರಕಾರ ಸರಿಯಾಗಿ ಸ್ಪಂದಿಸಿ ನೆರವಿಗೆ ಬರಬೇಕು.
– ನಾಗರಾಜ, ಸ್ಥಳೀಯರು

— ದಯಾನಂದ  ಬಳ್ಕೂರು

ಟಾಪ್ ನ್ಯೂಸ್

1-assam

UNESCO ವಿಶ್ವ ಪಾರಂಪರಿಕ ತಾಣ ಪಟ್ಟಿಗೆ ‘ದಿಬ್ಬ ಸಮಾಧಿಗಳು’: ಏನಿದು ಮೊಯಿಡಮ್ಸ್‌?

New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್‌ ಗ್ಯಾಂಗ್‌’

New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್‌ ಗ್ಯಾಂಗ್‌’

1-kanwar-msid

Uttara Khand; ಕನ್ವರ್‌ ಯಾತ್ರೆ: ಮಸೀದಿಗೇ ಪರದೆ ಹಾಕಿದ ಹರಿದ್ವಾರ ಆಡಳಿತ!

court

Court; ದೇಶಾದ್ಯಂತ 5 ಕೋಟಿ ಕೇಸು ಇತ್ಯರ್ಥಕ್ಕೆ ಬಾಕಿ: ಉ.ಪ್ರ.ದಲ್ಲೇ ಹೆಚ್ಚು!

robbers

Note!;ಕಳ್ಳತನಕ್ಕೆಂದು ಬಂದವ ತಾನೇ 20 ರೂಪಾಯಿ ನೋಟು ಇಟ್ಟು ಹೋದ!

1-tatoo

Mumbai: 22 ಶತ್ರುಗಳ ಹೆಸರು ಟ್ಯಾಟೂ ಹಾಕಿಸಿಕೊಂಡಾತನ ಕೊಲೆ!

1-wewqewq

Mumbai; 2005ರ ಭೀಕರ ಪ್ರವಾಹ ನೆನಪಿಸಿದ ಮಳೆ!:19 ವರ್ಷ ಹಿಂದಿನ ಸ್ಥಿತಿ ಮರುಕಳಿಸಲಿದೆಯೇ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

27 ವರ್ಷದಿಂದ ತಲೆಮರೆಸಿಕೊಂಡಿದ್ದ ಅತ್ಯಾಚಾರ ಆರೋಪಿ ಬಂಧನ

27 ವರ್ಷದಿಂದ ತಲೆಮರೆಸಿಕೊಂಡಿದ್ದ ಅತ್ಯಾಚಾರ ಆರೋಪಿ ಬಂಧನ

Udupi ಕೇಂದ್ರ ಸರಕಾರದ ವಿರುದ್ಧ ಜಿಲ್ಲಾ ಕಾಂಗ್ರೆಸ್‌ ಪ್ರತಿಭಟನೆ

Udupi ಕೇಂದ್ರ ಸರಕಾರದ ವಿರುದ್ಧ ಜಿಲ್ಲಾ ಕಾಂಗ್ರೆಸ್‌ ಪ್ರತಿಭಟನೆ

Fraud Case ಟರಿಂಗ್‌ ವ್ಯವಹಾರದ ಕಮಿಷನ್‌ ಹೆಸರಲ್ಲಿ ವಂಚನೆ

Fraud Case ಟರಿಂಗ್‌ ವ್ಯವಹಾರದ ಕಮಿಷನ್‌ ಹೆಸರಲ್ಲಿ ವಂಚನೆ

Udupi 36 ವರ್ಷಗಳ ಹಿಂದಿನ ಆರೋಪಿ ಬಂಧನ

Udupi 36 ವರ್ಷಗಳ ಹಿಂದಿನ ಆರೋಪಿ ಬಂಧನ

Shirva: ಭಾರೀ ಗಾಳಿ ಮಳೆಗೆ ವ್ಯಾಪಕ ಹಾನಿ; ಲಕ್ಷಾಂತರ ರೂ. ನಷ್ಟ

Shirva: ಭಾರೀ ಗಾಳಿ ಮಳೆಗೆ ವ್ಯಾಪಕ ಹಾನಿ; ಲಕ್ಷಾಂತರ ರೂ. ನಷ್ಟ

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

1-assam

UNESCO ವಿಶ್ವ ಪಾರಂಪರಿಕ ತಾಣ ಪಟ್ಟಿಗೆ ‘ದಿಬ್ಬ ಸಮಾಧಿಗಳು’: ಏನಿದು ಮೊಯಿಡಮ್ಸ್‌?

New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್‌ ಗ್ಯಾಂಗ್‌’

New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್‌ ಗ್ಯಾಂಗ್‌’

1-kanwar-msid

Uttara Khand; ಕನ್ವರ್‌ ಯಾತ್ರೆ: ಮಸೀದಿಗೇ ಪರದೆ ಹಾಕಿದ ಹರಿದ್ವಾರ ಆಡಳಿತ!

court

Court; ದೇಶಾದ್ಯಂತ 5 ಕೋಟಿ ಕೇಸು ಇತ್ಯರ್ಥಕ್ಕೆ ಬಾಕಿ: ಉ.ಪ್ರ.ದಲ್ಲೇ ಹೆಚ್ಚು!

robbers

Note!;ಕಳ್ಳತನಕ್ಕೆಂದು ಬಂದವ ತಾನೇ 20 ರೂಪಾಯಿ ನೋಟು ಇಟ್ಟು ಹೋದ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.