ಉದಯವಾಣಿ ವಿಶೇಷ : ಯುದ್ಧ ಗೆದ್ದ ಯೋಧನೀಗ ಸಂಕಷ್ಟದಲ್ಲಿ ಬಂದಿ!


Team Udayavani, Aug 23, 2018, 2:20 AM IST

soldire-22-8.jpg

ಬಸ್ರೂರು: ಭಾರತ- ಪಾಕಿಸ್ಥಾನ ಯುದ್ಧದಲ್ಲಿ ಜೀವದ ಹಂಗು ತೊರೆದು ಹೋರಾಡಿದ ವೀರಯೋಧ ಉಳ್ಳೂರು ಕಂದಾವರದ ಕೃಷ್ಣಯ್ಯ ಶೇರೆಗಾರ್‌ ಅವರ ಬದುಕನ್ನು ಕೇಳುವವರೇ ಇಲ್ಲವಾಗಿದೆ. ಅನಾರೋಗ್ಯದಿಂದ ಪೀಡಿತರಾದ ಕೃಷ್ಣಯ್ಯ ಶೇರೆಗಾರ್‌ ಮಾಕೆ ಆಡಿಮನೆಯವರದ್ದು ದುರಂತ ಕಥೆ. ಇವರಿಗೀಗ 66 ವರ್ಷ. ಪಾರ್ಶ್ವವಾಯು ಪೀಡಿತರಾಗಿ ಮಲಗಿದಲ್ಲೇ ನರಳುವಂತಾಗಿದೆ. ಇದರೊಂದಿಗೆ ಗಾಯದ ಮೇಲಿನ ಬರೆಯಂತೆ ಹೃದಯ ಶಸ್ತ್ರಚಿಕಿತ್ಸೆಯೂ ಆಗಿದೆ.

ಅದು ಭಾರತ ಪಾಕಿಸ್ಥಾನದ ಗಡಿ ಪ್ರದೇಶ. ಪಾಕಿಸ್ಥಾನದ ಸೈನಿಕರು 1971ರಲ್ಲಿ ಭಾರತದ ಗಡಿಯೊಳಗೆ ಬಂದಿದ್ದರು. ಆಗ ಭಾರತೀಯ ಭೂಸೇನೆಯ ಯೋಧರು ಪಾಕಿಸ್ಥಾನದ ಸೈನಿಕರನ್ನು ಬಡಿದೋಡಿಸಲು ಆರಂಭಿಸಿದರು. ಪಾಕಿಸ್ಥಾನ ಕಡೆಯಿಂದ ಗುಂಡು ಹಾರಿ ಬಂದಾಗ ನಮ್ಮವರೂ ಗುಂಡಿನ ಸುರಿಮಳೆಗೈದರು. ಕೊನೆಗೂ ಭಾರತ ಜಯಿಸಿತು. ಇದರಲ್ಲಿ ಕೃಷ್ಣಯ್ಯ ಶೇರೆಗಾರ್‌ ಕೂಡ ಪಾಲ್ಗೊಂಡಿದ್ದರು. ಪ್ರಸ್ತುತ ಬರುವ ಪಿಂಚಣಿ ಕುಟುಂಬದ ಯಾವ ಖರ್ಚಿಗೂ ಸಾಲದು. ಇಬ್ಬರು ಪುತ್ರರಲ್ಲಿ ಓರ್ವ ಅಂಗವಿಕಲನಾಗಿದ್ದರೆ, ಮತ್ತೂಬ್ಬ ಪುತ್ರ ನಿರುದ್ಯೋಗಿ, ಇಬ್ಬರು ಪುತ್ರಿಯರಿದ್ದಾರೆ.

ಆಪರೇಷನ್‌ ಬ್ಲೂಸ್ಟಾರ್‌: ಭಾಗಿ
ಸಿಪಾಯಿಯಾಗಿ ಸೇನೆಗೆ ಸೇರಿದ ಇವರು 1983ರಲ್ಲಿ ನಾಯಕ್‌ ಆಗಿ ಪದೋನ್ನತಿ ಹೊಂದಿದರು. 1984 ರ ಜಾಫ್ನಾ ಯುದ್ಧದಲ್ಲಿ ಪಾಲ್ಗೊಂಡದ್ದಲ್ಲದೇ ಅಮೃತಸರದ ಬ್ಲೂಸ್ಟಾರ್‌ ಕಾರ್ಯಾಚರಣೆಯಲ್ಲೂ ಭಾಗವಹಿಸಿದ್ದರು. ಭಾರತ ಸರಕಾರದಿಂದ ಉತ್ತಮ ಸೇವೆಗಾಗಿ ಸೇವಾ ಪದಕ ಪಡೆದ ಹೆಮ್ಮೆಯ ಸೇನಾನಿ. 25 ನೇ ವರ್ಷದ ಸ್ವಾತಂತ್ರ್ಯ ದಿನದಂದು ವಿಶಿಷ್ಟ ಸೇವಾ ಪದಕ ಪಡೆದ ಇವರನ್ನು ಭಾರತ ಪಾಕ್‌ ಯುದ್ಧದ ವಿಜಯಕ್ಕಾಗಿ ಸಂಗ್ರಾಮ್‌ ಮೆಡಲ್‌ ನೀಡಿ ಪುರಸ್ಕರಿಸಲಾಗಿತ್ತು. ಆದರೂ ಇಂದು ಅವರ ಬದುಕಿನ ಕಥೆ ಕೇಳುವವರಿಲ್ಲ.

ಯಾರಿಗೂ ಕೇಳಿಸದ ಕೂಗು
ಬದುಕಲು ಒಂದು ಸೂರೂ ಸಹ ಇಲ್ಲ. ಇರುವ ಸಣ್ಣ ಮನೆಯೂ ಕುಸಿದು ಬೀಳುವಂತಿದೆ. ಸೇನಾ ಸೇವೆಗಾಗಿ ಇವರು ಪಡೆದ ಯಾವ ಪದಕವೂ ಈ ಕಾಲದಲ್ಲಿ ನೆರವಿಗೆ ಬರುತ್ತಿಲ್ಲ. ಅನೇಕ ಸಂಘ- ಸಂಸ್ಥೆಗಳು ಇವರನ್ನು ಕರೆದು ಸಮ್ಮಾನಿಸಿವೆ. ಆದರೆ ಈ ಕಷ್ಟ ಕಾಲದಲ್ಲಿ ಸಂಘ ಸಂಸ್ಥೆಗಳ ನೆರವು ಅಗತ್ಯವಿದೆ.

ಇನ್ನಾದರೂ ಸರಕಾರ ಸ್ಪಂದಿಸಲಿ
ದೇಶಕ್ಕಾಗಿ ಸೇನೆಯಲ್ಲಿ ಅನೇಕ ಮಹತ್ವದ‌ ಸಂದರ್ಭಗಳಲ್ಲಿ ಕರ್ತವ್ಯ ನಿರ್ವಹಿಸಿರುವ ಯೋಧ ಕೃಷ್ಣಯ್ಯ ಅವರು ನಮ್ಮೂರಿನವರು ಎನ್ನುವುದೇ ನಮ್ಮ ಹೆಮ್ಮೆ. ಆದರೆ ಅವರ ಈಗಿನ ಅನಾರೋಗ್ಯದ ಬಗ್ಗೆ, ಕುಟುಂಬದ ಸಮಸ್ಯೆಯ ಕುರಿತು ಸರಕಾರ ಸರಿಯಾಗಿ ಸ್ಪಂದಿಸಿ ನೆರವಿಗೆ ಬರಬೇಕು.
– ನಾಗರಾಜ, ಸ್ಥಳೀಯರು

— ದಯಾನಂದ  ಬಳ್ಕೂರು

ಟಾಪ್ ನ್ಯೂಸ್

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

IPL 2024; Chahal’s 200-wicket haul; First bowler to achieve this feat

IPL 2024; ಚಹಲ್‌ 200 ವಿಕೆಟ್‌ಗಳ ಕಮಾಲ್‌; ಈ ಸಾಧನೆಗೈದ ಮೊದಲ ಬೌಲರ್‌

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!

ಕಾಂಗ್ರೆಸ್‌ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ

Loksabha election; ಕಾಂಗ್ರೆಸ್‌ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ: 405 ಸೂಕ್ಷ್ಮ ಮತಗಟ್ಟೆ : ಕೆ. ವಿದ್ಯಾಕುಮಾರಿ

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ: 405 ಸೂಕ್ಷ್ಮ ಮತಗಟ್ಟೆ : ಕೆ. ವಿದ್ಯಾಕುಮಾರಿ

Lok Sabha Election ; ಪ್ರಚಾರ ಜೋರು, ಚರ್ಚಾ ವಿಷಯ ಮೂರು!

Lok Sabha Election ; ಪ್ರಚಾರ ಜೋರು, ಚರ್ಚಾ ವಿಷಯ ಮೂರು!

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

12

Theft; ಕೊಲ್ಲೂರು: ಮಹಿಳೆಯ ಚಿನ್ನ, ನಗದು ಕಳವು

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

1-JP-H

Jayaprakash Hegde: ಎಲ್ಲ ವರ್ಗದ ಜನರ ಆಶೋತ್ತರಗಳಿಗೆ ಸ್ಪಂದಿಸುವ ಸಾಮರ್ಥ್ಯ ಇನ್ನೂ ಇದೆ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

IPL 2024; Chahal’s 200-wicket haul; First bowler to achieve this feat

IPL 2024; ಚಹಲ್‌ 200 ವಿಕೆಟ್‌ಗಳ ಕಮಾಲ್‌; ಈ ಸಾಧನೆಗೈದ ಮೊದಲ ಬೌಲರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.