ಯೋಜನೆಗೆ ಎಟುಕದ ರಸ್ತೆಯ ಗುಂಡಿ,ಸಂಚಾರ ಸಂಕಟದಲ್ಲಿ ಸವಾರರು

 ಮಟ್ಟು-ಕಟಪಾಡಿ : ಸಂಪರ್ಕ ರಸ್ತೆ ವಿಸ್ತರೀಕರಣ

Team Udayavani, Feb 27, 2020, 5:28 AM IST

2502KPT1E-3

ಕಟಪಾಡಿ: ಒನ್‌ ಟೈಮ್‌ ಡೆವಲಪ್‌ಮೆಂಟ್‌ ಯೋಜನೆಯಡಿ 1 ಕೋಟಿ ರೂ. ವೆಚ್ಚದಲ್ಲಿ ಕಟಪಾಡಿ-ಕೋಟೆ -ಮಟ್ಟು ಸಂಪರ್ಕದ ಪ್ರಮುಖ ರಸ್ತೆಯೊಂದು ವಿಸ್ತರೀಕರಣಗೊಂಡರೂ ರಸ್ತೆಯ ಗುಂಡಿ ಮಾತ್ರ ಯೋಜನೆಯೊಳಗೆ ಎಟುಕದೆ ಇದ್ದು, ಸಂಚಾರಿಗಳ ಸಂಕಟ ಮತ್ತದೇ ರೀತಿಯಲ್ಲಿ ಮುಂದುವರಿದೆ ಎಂದು ವಾಹನ ಸವಾರರು, ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಭಾಗದಲ್ಲಿ ಮಟ್ಟು ಭಾಗದ ಕೆನರಾ ಬ್ಯಾಂಕ್‌ ಬಳಿಯಲ್ಲಿ ಮತ್ತು ಕೋಟೆ ಗ್ರಾ.ಪಂ. ಅಧ್ಯಕ್ಷೆ ಮನೆಬಳಿಯ ರಸ್ತೆಯ ಮೇಲಿನ ಗುಂಡಿ ಮತ್ತು ಧೂಳಿನಿಂದ ಮುಕ್ತಿ ಕಾಣಲು ಹಾಗೂ ಸುಗಮ ಸಂಚಾರಕ್ಕಾಗಿ ಮತ್ತೆ ಟೆಂಡರ್‌ ಹಂತದಲ್ಲಿರುವ 1 ಕೋಟಿ ರೂ. ಅನುದಾನಕ್ಕಾಗಿ ಕಾಯಬೇಕಾದ ದುಸ್ಥಿತಿ ವಾಹನ ಸವಾರರಿಗೆ ಇದೀಗ ನುಂಗಲಾಗದ ಬಿಸಿ ತುಪ್ಪವಾಗಿ ಪರಿಣಮಿಸಿದೆ.

ತಾತ್ಕಾಲಿಕ ತೇಪೆಯಾದರೂ ಬೇಕಿತ್ತು
ಪ್ರಸ್ತುತ ಕೈಗೊಂಡ ರಸ್ತೆ ವಿಸ್ತರೀಕರಣ ಕಾಮಗಾರಿ ಕೊನೆಗೊಂಡ ಅನತಿ ದೂರದಲ್ಲಿಯೇ ಹೊಂಡ ಗುಂಡಿಯಿಂದ ಕೂಡಿ ಹಾಳಾದ ರಸ್ತೆಯು ಸವಾರರ, ಸಂಚಾರಿಗಳ ನಿದ್ದೆ ಕೆಡಿಸುತ್ತಿದೆ. ಕನಿಷ್ಠ ಪಕ್ಷ ತಾತ್ಕಾಲಿಕ ತೇಪೆ ಕೆಲಸವನ್ನಾದರೂ ಮಾಡಿ ಮಾನವೀಯತೆ ತೋರಬಹುದಿತ್ತು ಎಂದು ಸಾರ್ವಜನಿಕರು ತಮ್ಮ ಅಸಹನೆಯನ್ನು ವ್ಯಕ್ತಪಡಿಸುತ್ತಿದ್ದಾರೆ.

ಅರೆಬರೆ ಕಾಮಗಾರಿಯಿಂದ ಸ್ಥಗಿತಗೊಂಡು, ಮತ್ತೆ ಕೆಲಸ ಪುನರಾರಂಭಗೊಂಡು ಸಿದ್ಧಗೊಂಡ ರಸ್ತೆ ನೋಡುವಾಗ ತಲೆಗೆ ಎಳೆದರೆ ಕಾಲಿಗೆ ಬರಲಿಲ್ಲ ಎಂಬ ಪಾಡು ಕಂಡು ಬರುತ್ತಿದ್ದು, ಸಂಚಾರಿಗಳ ಸಂಚಾರಕ್ಕೆ ಸಂಕಟ ಮುಂದುವರಿಯುಂತಾಗಿದೆ
ಕಾಪು ಶಾಸಕ ಲಾಲಾಜಿ ಆರ್‌ ಮೆಂಡನ್‌ ಶಿಫಾರಸಿನ ಮೇರೆಗೆ ಹೆಚ್ಚುವರಿಯಾಗಿ 1 ಕೋಟಿ ರೂ. ಅನುದಾನವನ್ನು ಒದಗಿಸಿ ಉಳಿಕೆ ಕಾಮಗಾರಿಯನ್ನು ಮಟ್ಟು ಸೇತುವೆ ಬಳಿಯ ವರೆಗೆ ಪೂರ್ಣಗೊಳಿಸಲಾಗುತ್ತದೆ. ಇನ್ನೇನು 20-25 ದಿನಗಳೊಳಗಾಗಿ ಟೆಂಡರ್‌ ಪೂರ್ಣಗೊಳ್ಳುವ ಹಂತದಲ್ಲಿದೆ ಎಂದು ಎಂಜಿನಿಯರ್‌ ಮಾಹಿತಿ ನೀಡುತ್ತಿದ್ದಾರೆ.

ಅನುಷ್ಠಾನಗೊಂಡ 1 ಕೋಟಿ ರೂ ಯೋಜನೆಯು ಶಾಶ್ವತ ಪರಿಹಾರ ಎಂದು ನಂಬಿದ ಜನರಲ್ಲಿ ಇದೀಗ ನಿರಾಸೆ ಕಂಡು ಬರುತ್ತಿದ್ದು, ಮತ್ತೆ 1 ಕೋಟಿ ರೂ. ಅನುದಾನವು ಟೆಂಡರ್‌ ಮುಗಿದು ಅಭಿವೃದ್ಧಿ ಕಾಮಗಾರಿ ಆರಂಭಗೊಳ್ಳುವರೆಗೆ ಸುಗಮ ಸಂಚಾರವನ್ನು ನಡೆಸಲು ರಸ್ತೆಯ ಗುಂಡಿ ಮುಚ್ಚಿ ತೇಪೆ ಕೆಲಸವನ್ನಾದರೂ ನಡೆಸಲಿ ಎಂದು ವಾಹನ ಸವಾರರು ಆಗ್ರಹಿಸುತ್ತಿದ್ದಾರೆ.

ಒನ್‌ ಟೈಮ್‌ ಡೆವಲಪ್‌ಮೆಂಟ್‌ ಯೋಜನೆ
ಒನ್‌ ಟೈಮ್‌ ಡೆವಲಪ್‌ಮೆಂಟ್‌ ಯೋಜನೆಯಡಿ ತಾಂತ್ರಿಕ ಮಂಜೂರಾತಿ ಪಡೆದು 1 ಕೋಟಿ ರೂ. ವೆಚ್ಚದಲ್ಲಿ 0 -1.4 ಕಿ.ಮೀ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆದಿದೆ. 400 ಮೀ.ನಷ್ಟು ಭಾಗ ಕಾಂಕ್ರೀಟ್‌, ಒಂದು ಕಿ.ಮೀ.ನಷ್ಟು ಡಾಮರು ಹಾಕಲಾಗಿದೆ.

ಸುಗಮ ಸಂಚಾರ
ಪ್ರಯಾಣಿಕರು ಮತ್ತು ವಾಹನ ಸವಾರರನ್ನು ಹಿತದೃಷ್ಟಿಯಲ್ಲಿರಿಸಿಕೊಂಡು ಮುಂದಿನ 1 ಕೋಟಿ ರೂ. ಅನುದಾನ ಬರುವವರೆಗೆ ಹಾಳಾಗಿರುವ ರಸ್ತೆಯ ಭಾಗಕ್ಕೆ ಪ್ಯಾಚ್‌ ವರ್ಕ್‌ ನಡೆಸಿ ಸುಗಮ ಸಂಚಾರಕ್ಕೆ ಅನುಕೂಲವನ್ನು ಕಲ್ಪಿಸಲಿ.
– ಗುರು ಸುವರ್ಣ,ಕಟಪಾಡಿ

ಕಾಮಗಾರಿಗೆ ಪ್ರಯತ್ನ
ಹೆಚ್ಚುವರಿ 1 ಕೋಟಿ ರೂ. ಅನುದಾನದ ಯೋಜನೆಯು ಟೆಂಡರ್‌ ಹಂತದಲ್ಲಿದ್ದು, ಪ್ರಕ್ರಿಯೆ ಪೂರ್ಣಗೊಂಡ ಕೂಡಲೇ ಮತ್ತೆ ವಿಸ್ತರೀಕರಣದ ಕಾಮಗಾರಿಗಳನ್ನು ಕೈಗೆತ್ತಿಕೊಂಡು ಪೂರೈಸಲಾಗುತ್ತದೆ. ಅದುವರೆಗೆ ಜಲ್ಲಿ ಅಥವಾ ಡಾಮರು ಮಿಕ್ಸ್‌ನ್ನು ರಸ್ತೆಯ ಗುಂಡಿಗೆ ಅಳವಡಿಸಲು ಪ್ರಯತ್ನಿಸುತ್ತೇನೆ.
– ಸವಿತಾ ಆರ್‌, ಅಸಿಸ್ಟೆಂಟ್‌ ಎಂಜಿನಿಯರ್‌ ಲೋಕೋಪಯೋಗಿ ಇಲಾಖೆ

ಟಾಪ್ ನ್ಯೂಸ್

1-wqeqewqe

Muslim ಆದ್ಯತೆ ಹೇಳಿಕೆ ನೀಡಿಲ್ಲವೆಂದು ಸಾಬೀತುಪಡಿಸಿ: ‘ಕೈ’ಗೆ ಮೋದಿ ಸವಾಲು

1-qweqewqe

IPL;ಮುಂಬೈ ಇಂಡಿಯನ್ಸ್‌ ಎದುರಾಳಿ: ಸೇಡಿನ ತವಕದಲ್ಲಿ ಡೆಲ್ಲಿ

Akki

Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು

SHriramulu (2)

BJP ಶ್ರೀರಾಮುಲುಗೆ ಗೆಲುವು ಅನಿವಾರ್ಯ; ಕ್ಷೇತ್ರ ವಶಕ್ಕೆ ಕೈ ತವಕ

1—ewqewqe

IPL; ಅಗ್ರಸ್ಥಾನಿ ರಾಜಸ್ಥಾನ್‌-ಲಕ್ನೋ: ಬಲಿಷ್ಠರ ಸೆಣಸಾಟ

congress

BJP ಅಭ್ಯರ್ಥಿ ಅವಿರೋಧ ಆಯ್ಕೆ: ಸೂರತ್‌ನ ಕಾಂಗ್ರೆಸ್‌ ಅಭ್ಯರ್ಥಿ ಉಚ್ಚಾಟನೆ

1-visa

India VISA ನೀತಿ ಬಗ್ಗೆ ಅಲ್ಲಿನ ಸರಕಾರ ಮಾತನಾಡಲಿ: ಅಮೆರಿಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

Kapu Assembly constituency: ನಕಲಿ ಮತದಾನ;ಆರೋಪ

Kapu Assembly constituency: ನಕಲಿ ಮತದಾನ;ಆರೋಪ

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqeqewqe

Muslim ಆದ್ಯತೆ ಹೇಳಿಕೆ ನೀಡಿಲ್ಲವೆಂದು ಸಾಬೀತುಪಡಿಸಿ: ‘ಕೈ’ಗೆ ಮೋದಿ ಸವಾಲು

1-qweqewqe

IPL;ಮುಂಬೈ ಇಂಡಿಯನ್ಸ್‌ ಎದುರಾಳಿ: ಸೇಡಿನ ತವಕದಲ್ಲಿ ಡೆಲ್ಲಿ

Akki

Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು

SHriramulu (2)

BJP ಶ್ರೀರಾಮುಲುಗೆ ಗೆಲುವು ಅನಿವಾರ್ಯ; ಕ್ಷೇತ್ರ ವಶಕ್ಕೆ ಕೈ ತವಕ

1—ewqewqe

IPL; ಅಗ್ರಸ್ಥಾನಿ ರಾಜಸ್ಥಾನ್‌-ಲಕ್ನೋ: ಬಲಿಷ್ಠರ ಸೆಣಸಾಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.