ಜಂತ್ರ ರಸ್ತೆ ದುರಸ್ತಿ: ಅಪಾಯಕಾರಿ ರಸ್ತೆಗೆ ಮುಕ್ತಿ


Team Udayavani, Dec 12, 2022, 5:15 AM IST

ಜಂತ್ರ ರಸ್ತೆ ದುರಸ್ತಿ: ಅಪಾಯಕಾರಿ ರಸ್ತೆಗೆ ಮುಕ್ತಿ

ಬೆಳ್ಮಣ್‌: ನಿರಂತರ ಅಪಘಾತಗಳಿಗೆ ಕಾರಣವಾಗುತ್ತಿದ್ದ ತಿರುವು ರಸ್ತೆಯಿಂದ ಕೂಡಿದ ಶಿರ್ವ-ಬೆಳ್ಮಣ್‌ ರಸ್ತೆ ಜಂತ್ರ ಬಳಿ ವಿಸ್ತರಣೆ ಜತೆ ದುರಸ್ತಿಯಾಗುತ್ತಿದ್ದು ಕೊನೆಗೂ ಲೋಕೋಪಯೋಗಿ ಇಲಾಖೆ ಸಮಸ್ಯೆಗೆ ಮುಕ್ತಿ ನೀಡಿದೆ.

ಬೆಳ್ಮಣ್‌ನಿಂದ ಶಿರ್ವ ಸಾಗುವ ರಸ್ತೆ ಅಲ್ಲಲ್ಲಿ ತಿರುವಿನಿಂದ ಕೂಡಿದ್ದು ಜಂತ್ರ ಪರಿಸರದಲ್ಲಿ ತಿರುವಿನ ಜತೆಯಲ್ಲಿ ಇಳಿಜಾರಿನಿಂದ ಕೂಡಿದ ರಸ್ತೆಯಾಗಿತ್ತು. ಉದಯವಾಣಿ ನಿರಂತರವಾಗಿ ಜನಪರ ಕಾಳಜಿ ವಿಭಾಗದಲ್ಲಿ ವರದಿ ಪ್ರಕಟಿಸಿತ್ತು. ಲೋಕೋಪಯೋಗಿ ಇಲಾಖೆ ವತಿಯಿಂದ ಸುಮಾರು 3.25 ಕೊ. ರೂ. ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದೆ. ಇಳಿಜಾರಿನಿಂದ ಕೂಡ ರಸ್ತೆಯನ್ನು ಸಂಪೂರ್ಣ ಅಗೆದು ಸಮತಟ್ಟು ಮಾಡುವ ಕಾಮಗಾರಿ ನಡೆದು ಇಳಿಜಾರಿನ ಜತೆ ತಿರುವನ್ನು ತಪ್ಪಿಸಿ ಅಪಘಾತಗಳ ಸಂಖ್ಯೆಯನ್ನು ತಡೆಯುವ ಉದ್ದೇಶದಿಂದ ನೇರವಾದ ರಸ್ತೆ ನಿರ್ಮಿಸಲು ರೂಪುರೇಖೆ ನಡೆದು ಕಾಮಗಾರಿ ಭರದಿಂದ ನಡೆಯುತ್ತಿದೆ.

ಅಪಘಾತಗಳ ತಾಣ
ಶಿರ್ವದಿಂದ ಬೆಳ್ಮಣ್‌ಗೆ ಸಾಗುವ ವೇಳೆ ರಸ್ತೆಯ ತಿರುವು ಹಾಗೂ ಇಳಿಜಾರಿನಿಂದ ಕೂಡಿದ್ದು ಬರುವ ವಾಹನಗಳು ಅತೀ ವೇಗವಾಗಿ ಬಂದು ಬೆಳ್ಮಣ್‌ ಕಡೆಯಿಂದ ಮೇಲೇರಿ ಹೋಗುವ ವಾಹನಗಳ ಗಮನಕ್ಕೆ ಬಾರದೇ ಭಾರೀ ಪ್ರಮಾಣದಲ್ಲಿ ಅಪಘಾತಗಳು ನಡೆದಿದ್ದು ಜೀವಹಾನಿಯ ಜತೆ ಮಾರಣಾಂತಿಕ ಗಾಯಗಳಾದ ಪ್ರಕರಣ ನಡೆಯುತ್ತಿತ್ತು. ಹಲವು ವರ್ಷಗಳ ಹಿಂದೆ ಬಸ್ಸೊಂದು ಅಪಘಾತಕೀಡಾಗಿ ಹಲವರು ಗಾಯಗೊಂಡಿದ್ದರು. ಬೆ„ಕಿನಲ್ಲಿದ್ದ ಪೊಲೀಸ್‌ ಪೇದೆಯೊಬ್ಬರ ಸಹೋದರ ಕಾರು ಆಪಘಾತಕೀಡಾಗಿ ಸ್ಥಳದಲ್ಲೇ ಮƒತ ಪಟ್ಟ ಘಟನೆಯೂ ಇದೇ ಜಾಗದಲ್ಲಿ ನಡೆದಿತ್ತು.

2019ರ ಫೆಬ್ರವರಿ 23ರಂದು ನಡೆದ ಖಾಸಗಿ ಬಸ್ಸು ಹಾಗೂ ಟಿಪ್ಪರ್‌ ಮುಖಾಮುಖೀಯಾಗಿ ಢಿಕ್ಕಿ ಹೊಡೆದು ಯುವತಿಯೊಬ್ಬಳು ಸ್ಥಳದಲ್ಲೆ ಮƒತ ಪಟ್ಟಿದ್ದು, ಸಂಕಲಕರಿಯದ ಎರಡು ಪುಟ್ಟ ಮಗುವೊಂದು ತಾಯಿಯ ಸಮೇತ ಗಂಭೀರವಾಗಿ ಗಾಯಗೊಂಡಿದ್ದರು. ಹಲವರನ್ನು ಆಸ್ಪತ್ರೆಗೆ ಸೇರಿ ಗುಣಮುಖರಾದ ಘಟನೆ ನಡೆದಿತ್ತು. ಅಪಘಾತದಲ್ಲಿ ಬಸ್‌ ಚಾಲಕ ರವಿ ಎಂಬವರು ಕಾಲು ಕಳೆದುಕೊಂಡು ಹಾಸಿಗೆ ಹಿಡಿಯುವಂತಾಗಿತ್ತು. 2019ರ ಮೇ 28ರಂದು ನಡೆದ ಬೆ„ಕುಗಳೆರಡರ ಮುಖಾಮುಖೀ ಢಿಕ್ಕಿಯಲ್ಲಿ ಬೆ„ಕ್‌ ಸವಾರ ರಸ್ತೆಗೆ ಎಸೆಯಲ್ಪಟ್ಟು ಬಸ್ಸಿನಡಿಗೆ ಬಿದ್ದು ಪಳ್ಳಿ ಅಡಪಾಡಿ ನಿವಾಸಿಯೊಬ್ಬರು ಸ್ಥಳದಲ್ಲೇ ಮƒತರಾಗಿದ್ದರು. ಬೆ„ಕ್‌ಗಳ ಅಪಘಾತ, ಟಿಪ್ಪರ್‌ ಬಸ್ಸು ಢಿಕ್ಕಿ ಹೀಗೆ ನಿರಂತರ ಭೀಕರ ಅಪಘಾತಗಳು ಜಂತ್ರ ರಸ್ತೆಯಲ್ಲಿ ನಡೆದಿತ್ತು.

ಸುದಿನ ವರದಿ
ಜಂತ್ರ ರಸ್ತೆಯಲ್ಲಿ ನಿರಂತರ ಅಪಘಾತವನ್ನು ತಪ್ಪಿಸಲು ರಸ್ತೆಯ ತಿರುವು ಸರಿಪಡಿಸಬೇಕಾಗಿದ್ದು ರಸ್ತೆಯ ಕಾಮಗಾರಿ ನಡೆದು ಸುಂದರವಾದ ಹಾಗೂ ನೇರವಾಗಿರುವ ವಾಹನ ಸವಾರರಿಗೆ ಯೋಗ್ಯವಾದ ರಸ್ತೆಯ ನಿರ್ಮಾಣವಾಗಬೇಕು. ಅಪಘಾತಗಳ ಸಂಖ್ಯೆಯನ್ನು ತಪ್ಪಿಸಲು ಇಲಾಖೆ ಸೂಕ್ತ ಕ್ರಮ ಕೈಗೊಳ್ಳುವಂತೆ ಉದಯವಾಣಿ ಸುದಿನ ನಿರಂತರವಾಗಿ ವರದಿ ಪ್ರಕಟಿಸಿತ್ತು. ವರದಿಯನ್ನು ಗಂಭೀರವಾಗಿ ಪರಿಗಣಿಸಿ ಸಚಿವ ವಿ.ಸುನಿಲ್‌ ಕುಮಾರ್‌ ಅವರ ವಿಶೇಷ ಮುತುವರ್ಜಿಯಲ್ಲಿ ಲೋಕೋಪಯೋಗಿ ಇಲಾಖೆಯ ವತಿಯಿಂದ ಇದೀಗ ರಸ್ತೆಯ ಕಾಮಗಾರಿ ನಡೆಯುತ್ತಿದೆ. ಇದೀಗ ರಸ್ತೆಯು ಸುಮಾರು ಶೇ. 80 ತಿರುವು ಮುಕ್ತವಾಗಿದ್ದು ವಾಹನ ಸವಾರರಿಗೆ ಸಂಚಾರಕ್ಕೆ ಯೋಗ್ಯವಾಗುವಂತಿದೆ. ಇಳಿಜಾರಿನ ಜತೆಯಲ್ಲಿ ತಿರುವುನ್ನು ಸಂಪೂರ್ಣ ಅಗೆದು ಸಮತಟ್ಟು ಮಾಡಲಾಗಿದೆ.

ಅಗತ್ಯ ಕಾಮಗಾರಿಯೊಂದು ನಡೆಯುತ್ತಿದೆ. ಎಚ್ಚರಿಸಿದ ಉದಯವಾಣಿಗೆ ಅಭಿನಂದನೆಗಳು.
-ರಘುನಾಥ ನಾಯಕ್‌ ಪುನಾರು, ಗ್ರಾಮಸ್ಥರು

ಅಪಾಯಕಾರಿಯಾದ ರಸ್ತೆ ಯನ್ನು ಸರಿಪಡಿಸಿದ ಇಲಾಖೆ ಹಾಗೂ ಜನಪ್ರತಿನಿಧಿಗಳಿಗೆ ಕೃತಜ್ಞತೆ.
-ಸತೀಶ್‌ ಪಿಲಾರ್‌, ರಿಕ್ಷಾ ಚಾಲಕ

ಟಾಪ್ ನ್ಯೂಸ್

13-bk-hariprasad

ಇದು ದೇಶದ ಚುನಾವಣೆ, ಸಿಎಂ ಸ್ಥಾನದ ಮಾಧ್ಯಮಗಳ ಚರ್ಚೆ ಅಪ್ರಸ್ತುತ: ಬಿ.ಕೆ.ಹರಿಪ್ರಸಾದ್

Hubli; ಜೋಶಿ ವೀರಶೈವ ಲಿಂಗಾಯತರ ಅವನತಿಗಾಗಿ‌ ಹುಟ್ಟಿಕೊಂಡ ಶಕ್ತಿ: ದಿಂಗಾಲೇಶ್ವರ ಸ್ವಾಮೀಜಿ

ಪ್ರಹ್ಲಾದ ಜೋಶಿ ವೀರಶೈವ ಲಿಂಗಾಯತರ ಅವನತಿಗಾಗಿ‌ ಹುಟ್ಟಿಕೊಂಡವರು: ದಿಂಗಾಲೇಶ್ವರ ಸ್ವಾಮೀಜಿ

12-prakash-raj

April 28 ರಂದು ರಾಜ್ಯಮಟ್ಟದ ವಿದ್ಯಾರ್ಥಿ ಸಮಾವೇಶಕ್ಕೆ ಚಿತ್ರನಟ ಪ್ರಕಾಶ ರೈ ಆಗಮನ

ಈಶ್ವರ ಖಂಡ್ರೆ

ಕೇಂದ್ರದಿಂದ 3454 ಕೋಟಿ ರೂ. ಬರ ಪರಿಹಾರ; ರಾಜ್ಯಕ್ಕೆ ಸಂದ ಜಯ: ಈಶ್ವರ ಖಂಡ್ರೆ

Koppala; ಅಮೃತಕಾಲ ಅಲ್ಲ, ಇದು ಅನ್ಯಾಯದ ಕಾಲ, ಬರ್ಬಾದ್ ಕಾಲ: ಹರಿಪ್ರಸಾದ್ ಟೀಕೆ

Koppala; ಅಮೃತಕಾಲ ಅಲ್ಲ, ಇದು ಅನ್ಯಾಯದ ಕಾಲ, ಬರ್ಬಾದ್ ಕಾಲ: ಹರಿಪ್ರಸಾದ್ ಟೀಕೆ

‘ತಾರಕ್​ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್​ ಸಿಂಗ್​ ನಾಪತ್ತೆ… ಮೊಬೈಲ್ ಸ್ವಿಚ್ ಆಫ್

‘ತಾರಕ್​ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್​ ಸಿಂಗ್​ ನಾಪತ್ತೆ… ಮೊಬೈಲ್ ಸ್ವಿಚ್ ಆಫ್

Desi Swara: ಹೊನ್ನುಡಿ- ಕಲಿಯುವ ಮನೋಭಾವ ಮುಖ್ಯ

Desi Swara: ಹೊನ್ನುಡಿ- ಕಲಿಯುವ ಮನೋಭಾವ ಮುಖ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

Kapu Assembly constituency: ನಕಲಿ ಮತದಾನ;ಆರೋಪ

Kapu Assembly constituency: ನಕಲಿ ಮತದಾನ;ಆರೋಪ

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

13-bk-hariprasad

ಇದು ದೇಶದ ಚುನಾವಣೆ, ಸಿಎಂ ಸ್ಥಾನದ ಮಾಧ್ಯಮಗಳ ಚರ್ಚೆ ಅಪ್ರಸ್ತುತ: ಬಿ.ಕೆ.ಹರಿಪ್ರಸಾದ್

Hubli; ಜೋಶಿ ವೀರಶೈವ ಲಿಂಗಾಯತರ ಅವನತಿಗಾಗಿ‌ ಹುಟ್ಟಿಕೊಂಡ ಶಕ್ತಿ: ದಿಂಗಾಲೇಶ್ವರ ಸ್ವಾಮೀಜಿ

ಪ್ರಹ್ಲಾದ ಜೋಶಿ ವೀರಶೈವ ಲಿಂಗಾಯತರ ಅವನತಿಗಾಗಿ‌ ಹುಟ್ಟಿಕೊಂಡವರು: ದಿಂಗಾಲೇಶ್ವರ ಸ್ವಾಮೀಜಿ

12-prakash-raj

April 28 ರಂದು ರಾಜ್ಯಮಟ್ಟದ ವಿದ್ಯಾರ್ಥಿ ಸಮಾವೇಶಕ್ಕೆ ಚಿತ್ರನಟ ಪ್ರಕಾಶ ರೈ ಆಗಮನ

ಈಶ್ವರ ಖಂಡ್ರೆ

ಕೇಂದ್ರದಿಂದ 3454 ಕೋಟಿ ರೂ. ಬರ ಪರಿಹಾರ; ರಾಜ್ಯಕ್ಕೆ ಸಂದ ಜಯ: ಈಶ್ವರ ಖಂಡ್ರೆ

Koppala; ಅಮೃತಕಾಲ ಅಲ್ಲ, ಇದು ಅನ್ಯಾಯದ ಕಾಲ, ಬರ್ಬಾದ್ ಕಾಲ: ಹರಿಪ್ರಸಾದ್ ಟೀಕೆ

Koppala; ಅಮೃತಕಾಲ ಅಲ್ಲ, ಇದು ಅನ್ಯಾಯದ ಕಾಲ, ಬರ್ಬಾದ್ ಕಾಲ: ಹರಿಪ್ರಸಾದ್ ಟೀಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.