ಮಣಿಪಾಲ: ರಾತ್ರಿ ವೇಳೆ ಬೈಕ್ ಸವಾರರನ್ನು ಅಡ್ಡಗಟ್ಟಿ ಚಾಕು ತೋರಿಸಿ ದರೋಡೆ!
Team Udayavani, Sep 19, 2020, 11:46 AM IST
ಉಡುಪಿ: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಬೈಕ್ ನಲ್ಲಿ ಬಂದ ತಂಡವೊಂದು ಚಾಕು ತೋರಿಸಿ ಬೆದರಿಸಿ ಮೊಬೈಲ್ ಮತ್ತು ಹಣವನ್ನು ಲೂಟಿ ಮಾಡಿದ ಘಟನೆ ಇಂದು ಬೆಳ್ಳಂಬೆಳಗ್ಗೆ ಮಣಿಪಾಲ ಅಸುಪಾಸಿನಲ್ಲಿ ನಡೆದಿದೆ.
ಒಂದು ಘಟನೆ ಅಲೆವೂರು ಗುಡ್ಡೆಯಂಗಡಿ ಬಳಿ ನಡೆದಿದ್ದರೆ, ಮತ್ತೊಂದು ಘಟನೆ ಮಣಿಪಾಲ ಈಶ್ವರ ನಗರದ ಬಿಗ್ ಬಾಸ್ ಬಾರ್ ಬಳಿ ನಡೆದಿದೆ.
ಅಲೆವೂರು ಗುಡ್ಡೆಯಂಗಡಿ ಬಳಿ ರಾತ್ರಿ ಪಾಳಿ ಮುಗಿಸಿ ಮನೆಗೆ ಹೋಗುತ್ತಿದ್ದ ಯುವಕನನ್ನು ಎದುರಿನಿಂದ ಬೈಕ್ ನಲ್ಲಿ ಬಂದ ತಂಡ ಅಡ್ಡಗಟ್ಟಿ, ಬೆಲೆಬಾಳುವ ವಸ್ತು ನೀಡುವಂತೆ ಬೆದರಿಸಿದ್ದರು. ಯುವಕ ನಿರಾಕರಿಸಿದಾಗ ಚಾಕುವಿನಿಂದ ಆತನ ಎದೆಗೆ ಇರಿಯಲು ಪ್ರಯತ್ನಿಸಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಮಂಗಳೂರು: ಡ್ರಗ್ಸ್ ಸಾಗಿಸುತ್ತಿದ್ದ ಬಾಲಿವುಡ್ ಡ್ಯಾನ್ಸರ್ ಕಿಶೋರ್ ಶೆಟ್ಟಿ ಬಂಧನ!
ಕೂಡಲೇ ಯುವಕ ತಡೆದಿದ್ದು, ಬೊಬ್ಬೆ ಹಾಕಿದ್ದಾನೆ. ದುಷ್ಕರ್ಮಿಗಳು ಆತನ ಮೊಬೈಲ್ ಕಸಿದು ಪರಾರಿಯಾಗಿದ್ದಾರೆ ಎನ್ನಲಾಗಿದೆ.