ದೇಶ ವಿಭಜಿಸುತ್ತಿರುವ ಆರೆಸ್ಸೆಸ್: ರಾಹುಲ್
Team Udayavani, Mar 21, 2018, 6:00 AM IST
ಪಡುಬಿದ್ರಿ: ಸೇವಾದಳವು ಪರಸ್ಪರ ಪ್ರೀತಿ, ಬ್ರಾತೃತ್ವವನ್ನು ಬೆಳೆಸುತ್ತದೆ. ಆದರೆ ನಮ್ಮ ವಿರೋಧಿ ಸಂಘಟನೆ ಆರೆಸ್ಸೆಸ್ ಕ್ರೋಧ, ಮತ್ಸರಗಳ ಮೂಲಕ ದೇಶವನ್ನು ವಿಭಜಿಸುವ, ಕ್ಷೋಭೆಯನ್ನು ಹೆಚ್ಚಿಸುವ ಕಾರ್ಯ ಮಾಡುತ್ತಿದೆ. ಇದುವೇ ನಮ್ಮ ಮತ್ತು ಆರೆಸ್ಸೆಸ್ ನಡುವಣ ವ್ಯತ್ಯಾಸ. ಆದರೂ ನಾವು ಆರೆಸ್ಸೆಸ್, ಬಿಜೆಪಿ ಮಂದಿಯನ್ನೂ ಪ್ರೀತಿಯಿಂದಲೇ ಕಾಣುತ್ತೇವೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದರು.
ಅವರು ಮಂಗಳವಾರ ತೆಂಕ ಎರ್ಮಾಳಿನಲ್ಲಿ ರಾಜೀವ್ ಗಾಂಧಿ ನ್ಯಾಶನಲ್ ಅಕಾಡೆಮಿ ಆಫ್ ಪೊಲಿಟಿಕಲ್ ಸೈನ್ಸ್ ಸಂಸ್ಥೆಯನ್ನು ಉದ್ಘಾಟಿಸಿದ ಬಳಿಕ ಕಾಂಗ್ರೆಸ್ ಸೇವಾದಳ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದರು. ಸೇವಾದಳದ ಮುಖ್ಯ ಉದ್ದೇಶ ಹಿಂದೂಸ್ಥಾನವನ್ನು ಜೋಡಿಸುವುದಾಗಿದೆ. ಈಚೆಗಷ್ಟೇ ನಾನು ದಿಲ್ಲಿಯಲ್ಲಿ ಮಾಡಿದ ಒಂದು ಭಾಷಣದಲ್ಲಿ ಕಾಂಗ್ರೆಸ್ ಪಕ್ಷವು ಬದಲಾಗಲು ಬಯಸಿರುವುದಾಗಿ ಹೇಳಿದ್ದೆ. ನಾನು ಬಯಸಿರುವ ಈ ಬದಲಾವಣೆಗಳನ್ನು ಸೇವಾದಳವು ವಸ್ತುಶಃ ಮಾಡಿ ತೋರಿಸಬಲ್ಲದು ಎಂದು ರಾಹುಲ್ ಹೇಳಿದರು.
ಮಹಿಳೆಯರು, ಯುವಕರ ಧ್ವನಿ
ಕಾಂಗ್ರೆಸ್ ಇರುವ ವರೆಗೂ ಈ ದೇಶದಲ್ಲಿ ಪರಸ್ಪರ ಪ್ರೀತಿ, ವಿಶ್ವಾಸಗಳೇ ನಮ್ಮೊಳಗೆ ಬೇರು ಬಿಟ್ಟಿರುತ್ತವೆ. ಸೇವಾದಳವು ಈ ದೇಶದ ಬೆಳವಣಿಗೆಗೆ ಸರಿಯಾದ ದಾರಿ ತೋರಬಲ್ಲದು. ಕಾಂಗ್ರೆಸ್ ಪಕ್ಷವು ಮಹಿಳೆಯರು, ಯುವಕರ ಧ್ವನಿಯಾಗಿದೆ ಎಂದೂ ರಾಹುಲ್ ಪ್ರತಿಪಾದಿಸಿದರು.
ಆರೆಸ್ಸೆಸ್ ಮತ್ತು ಬಿಜೆಪಿ ವಿಚಾರಧಾರೆಗಳು ಈ ದೇಶದಲ್ಲಿ ಭಾರತವನ್ನು ಹರಿಹಂಚಾಗಿಸುವ ರೀತಿಯಲ್ಲಿ ಕಾರ್ಯವೆಸಗುತ್ತಿವೆ. ಕಾಂಗ್ರೆಸ್ ಪಕ್ಷವು ವೈವಿಧ್ಯತೆಯಲ್ಲಿ ಏಕತೆಯನ್ನು ಪ್ರತಿಬಿಂಬಿಸುತ್ತದೆ. ನಮಗೆ ಕರ್ನಾಟಕ, ಉತ್ತರಪ್ರದೇಶ, ತಮಿಳುನಾಡು, ಅಸ್ಸಾಂ ರಾಜ್ಯಗಳೆಲ್ಲವೂ ಸೇರಿ ಸಮಗ್ರ ಭಾರತ ವೆನಿಸುತ್ತದೆ. ನಾವು ಅದನ್ನು ಮನ್ನಿಸುತ್ತೇವೆ. ಆದರೆ ಆರೆಸ್ಸೆಸ್ ಈ ರಾಜ್ಯಗಳ ಪರಂಪರೆಯಲ್ಲೂ ತನ್ನದೇ ಆದ ವಿಷಭರಿತ ವಿಚಾರಧಾರೆಯನ್ನು ಪ್ರವಹಿಸಲು ಬಯಸುತ್ತದೆ. ದೇಶದ ಎಲ್ಲ ರಾಜ್ಯಗಳ ಅಭಿವೃದ್ಧಿಯ ಆಶಯಗಳೂ ಕಾಂಗ್ರೆಸ್ನ ಸದಾಶಯಗಳಾಗಿರುತ್ತವೆ ಎಂದೂ ರಾಹುಲ್ ಗಾಂಧಿ ಅವರು ಹೇಳಿದರು.
ನನ್ನ ಕನಸಿನ ನವ ಕಾಂಗ್ರೆಸ್ ಸ್ವರೂಪದಲ್ಲಿ ಕಾಂಗ್ರೆಸ್ ಸೇವಾದಳಕ್ಕೂ ಪ್ರಮುಖ ಸ್ಥಾನವಿರುತ್ತದೆ. ಸೇವಾದಳ ಸದಸ್ಯರೆಲ್ಲರೂ ಕಾಂಗ್ರೆಸ್ನ ಸದಸ್ಯರು ಎಂದು ರಾಹುಲ್ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ: ಮೇ 2 ರಂದು ಕುಬೇರ ಲಕ್ಷ್ಮಿ ಪ್ರತಿಷ್ಠಾ ವರ್ಧಂತಿ
Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್ ಎಂ. ಪೈ ಬ್ಲಾಕ್ ಇಂದು ಲೋಕಾರ್ಪಣೆ
ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್ ಹೊಂದಿರುವ ಕ್ಯಾನ್ಸರ್ ಚಿಕಿತ್ಸೆ ಕ್ರಮ
Manipal; ಕೌಶಲಾಧಾರಿತ ಮಾನವ ಶಕ್ತಿ ಇದ್ದರೆ ಸರ್ವ ಸಾಧನೆ: ಕೆ.ವಿ. ಕಾಮತ್
Karkala ಡಾ| ಟಿಎಂಎ ಪೈ ರೋಟರಿ ಆಸ್ಪತ್ರೆಗೆ ಡಯಾಲಿಸಿಸ್ ಯಂತ್ರ ಕೊಡುಗೆ
MUST WATCH
ಹೊಸ ಸೇರ್ಪಡೆ
T20 World Cup; ಭಾರತ ತಂಡ ಪ್ರಕಟ; ಅವಕಾಶ ಪಡೆದ ಪಾಂಡ್ಯ, ಪಂತ್, ಸ್ಯಾಮ್ಸನ್
ಮಹಾತ್ಮರ ಸಮಾಜಮುಖಿ ಸಂದೇಶ ಸಾರ್ವಕಾಲಿಕ: ಗುರುಮೂರ್ತಿ ಶ್ರೀ
Kollywood: ಕಮಲ್ ಹಾಸನ್ ʼಥಗ್ ಲೈಫ್ʼ ಅಖಾಡಕ್ಕೆ ಬಾಲಿವುಡ್ನ ಖ್ಯಾತ ನಟರು ಎಂಟ್ರಿ?
ಮೋದಿಯಿಂದ ಬಡತನ ಮುಕ್ತ ಭಾರತ: ಬಸವರಾಜ ಬೊಮ್ಮಾಯಿ
Hubli; ಕುಮಾರಸ್ವಾಮಿ ಎದುರೇ ಕಾಂಗ್ರೆಸ್ – ಜೆಡಿಎಸ್ ಕಾರ್ಯಕರ್ತರ ನಡುವೆ ಮಾರಾಮಾರಿ