ಆರ್ಟಿಐ ಕಾರ್ಯಕರ್ತನ ಮನೆಗೆ ಮರಳು ಮಾಫಿಯಾದವರ ಮುತ್ತಿಗೆ
Team Udayavani, Dec 25, 2022, 1:00 AM IST
ಕೋಟ: ಮರಳುಗಾರಿಕೆ ನಿರತ ತಂಡವೊಂದು ಆರ್.ಟಿ.ಐ. ಕಾರ್ಯಕರ್ತನ ಮನೆಗೆ ಮಾರಕಾಸ್ತ್ರ ಸಹಿತ ಅಕ್ರಮವಾಗಿ ಪ್ರವೇಶಿಸಿ ಹಲ್ಲೆ ನಡೆಸಲು ಮುಂದಾದ ಘಟನೆ ಸಾಸ್ತಾನ ಸಮೀಪದ ಐರೋಡಿಯಲ್ಲಿ ಡಿ.24ರಂದು ನಡೆದಿದೆ.
ಇಲ್ಲಿನ ನಿವಾಸಿ ಥೋಮಸ್ ರೋಡಿಗ್ರಸ್ ಅವರ ಮನೆಯ ಅಂಗಳಕ್ಕೆ ಅರಾಟೆ ರಾಘವೇಂದ್ರ ಆಚಾರ್ಯ, ಕುಂಜಾಲು ಮನೋಜ್ ಆಚಾರ್ಯ, ಮೊವಾಡಿಯ ಸದಾ ಹಾಗೂ ನಾಗರಾಜ ಮೊವಾಡಿ, ರವಿ ಮೊಗವೀರ ಸೇನಾಪುರ, ಚಂದ್ರ ಅರಾಟೆ ಮೊದಲಾದವರು ಅಕ್ರಮ ಪ್ರವೇಶ ಮಾಡಿ, ಹೊಸಾಡು ಸೇನಾಪುರ ಪ್ರದೇಶದಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆಗೆ ವಿರೋಧಿಸಿ ಥೋಮಸ್ ನಡೆಸುತ್ತಿರುವ ಹೋರಾಟವನ್ನು ಕೊನೆಗೊಳಿಸುವಂತೆ, ಇಲ್ಲವಾದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಆದ್ದರಿಂದ ತನಗೆ ಸೂಕ್ತ ರಕ್ಷಣೆ ನೀಡಬೇಕು ಮತ್ತು ಆರೋಪಿಗಳಿಗೆ ಸೂಕ್ತ ಶಿಕ್ಷೆ ವಿಧಿಸಬೇಕು ಎಂದು ಕೋಟ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ಮನವಿ ಮಾಡಿದ್ದಾರೆ.
ಆರೋಪಿಗಳು ಮನೆಯಂಗಳದಲ್ಲಿ ಗಲಾಟೆ ನಡೆಸುತ್ತಿರುವ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿದೆ. ಈ ಬಗ್ಗೆ ಪ್ರಕರಣ ದಾಖಲಾಗಿದೆ. ಥೋಮಸ್ ಅವರ ವಿರುದ್ಧವೂ ಆ ತಂಡದವರು ಪ್ರತಿ ದೂರು ದಾಖಲಿಸಿದ್ದು ಅದು ಪ್ರಕರಣ ದಾಖಲಾಗಲಿದೆ ಎಂದು ಕೋಟ ಠಾಣಾಧಿಕಾರಿ ಮಧು ಬಿ.ಇ. ಅವರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ
Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ
Kapu Assembly constituency: ನಕಲಿ ಮತದಾನ;ಆರೋಪ
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
MUST WATCH
ಹೊಸ ಸೇರ್ಪಡೆ
Koppala; ಅಮೃತಕಾಲ ಅಲ್ಲ, ಇದು ಅನ್ಯಾಯದ ಕಾಲ, ಬರ್ಬಾದ್ ಕಾಲ: ಹರಿಪ್ರಸಾದ್ ಟೀಕೆ
‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್ ಸಿಂಗ್ ನಾಪತ್ತೆ… ಮೊಬೈಲ್ ಸ್ವಿಚ್ ಆಫ್
Desi Swara: ಹೊನ್ನುಡಿ- ಕಲಿಯುವ ಮನೋಭಾವ ಮುಖ್ಯ
Rakshit Shetty: ʼರಿಚರ್ಡ್ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?
Holehonnur: ರಾಜ್ಯದಲ್ಲಿ ಹೆಣ್ಣು ಮಕ್ಕಳಿಗೆ ಸುರಕ್ಷತೆಯಿಲ್ಲ: ಬಿ.ವೈ. ವಿಜಯೇಂದ್ರ