ಮಹಿಳಾ ಮತದಾರರ ಆಕರ್ಷಣೆಗೆ “ಸಖೀ’ ಮತಗಟ್ಟೆ


Team Udayavani, Mar 14, 2019, 1:00 AM IST

pinkbooth.png

ಉಡುಪಿ: ವಿಶೇಷವಾಗಿ ಮಹಿಳಾ ಮತದಾರರು ಹೆಚ್ಚು ಹೆಚ್ಚು ಆಸಕ್ತಿಯಿಂದ ಮತದಾನ ಮಾಡಲು ಲೋಕಸಭಾ ಚುನಾವಣೆಯಲ್ಲಿ ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದೆ. ಹೋದ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಇಂತಹ ಮತಗಟ್ಟೆಗಳಿಗೆ ಪಿಂಕ್‌ ಮತಗಟ್ಟೆ ಎಂದು ಹೆಸರಿಡಲಾಗಿತ್ತು. ಈ ಬಾರಿ ಇದಕ್ಕೆ ಹೆಸರು “ಸಖೀ ಮತಗಟ್ಟೆ’ ಎಂದು ಹೆಸರಿಡಲಾಗುತ್ತಿದೆ. 

ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಎರಡೆರಡು ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದೆ. ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಹೆಮ್ಮಾಡಿ ಸರಕಾರಿ ಮಾ.ಹಿ.ಪ್ರಾ. ಶಾಲೆಯ ಎರಡು ಮತಗಟ್ಟೆಗಳು, ಕುಂದಾಪುರ ಕ್ಷೇತ್ರದ ಕುಂಭಾಸಿ ಸ.ಮಾ.ಹಿ.ಪ್ರಾ. ಶಾಲೆಯ ಎರಡು ಮತಗಟ್ಟೆಗಳು, ಉಡುಪಿ ಕ್ಷೇತ್ರದ ಬ್ರಹ್ಮಾವರ ನಿರ್ಮಲಾ ಪ್ರೌಢಶಾಲೆಯ ಎರಡು ಮತಗಟ್ಟೆಗಳು, ಕಾಪು ವಿಧಾನಸಭಾ ಕ್ಷೇತ್ರದ ಉದ್ಯಾವರ ಸೈಂಟ್‌ ಫ್ರಾನ್ಸಿಸ್‌ ಕ್ಸೇವಿಯರ್‌ ಹಿ.ಪ್ರಾ. ಶಾಲೆಯ ಎರಡು ಮತಗಟ್ಟೆಗಳು, ಕಾರ್ಕಳ ವಿಧಾನಸಭಾ ಕ್ಷೇತ್ರದ ಎರ್ಲಪಾಡಿ ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಮತಗಟ್ಟೆಯಲ್ಲಿ ತಲಾ ಒಂದು ಮತಗಟ್ಟೆಗಳನ್ನು ಸ್ಥಾಪಿಸಲು ಚಿಂತನೆ ನಡೆಸಲಾಗಿದೆ. 

ನಿರ್ದಿಷ್ಟ ಬಣ್ಣ 
ಮಹಿಳಾ ಮತದಾರರು ಹೆಚ್ಚಿರುವ ಸಖೀ ಮತಗಟ್ಟೆಗಳಲ್ಲಿ ಮಹಿಳಾ ಸಿಬಂದಿ ನಿಯೋಜಿಸಲಾಗುತ್ತದೆ. ಅವರು ನಿರ್ದಿಷ್ಟ ಬಣ್ಣದ ಬಟ್ಟೆಗಳನ್ನೇ ತೊಟ್ಟು ಬರಲಿದ್ದಾರೆ.  ಹೋದ ಚುನಾವಣೆಯಲ್ಲಿ ಪಿಂಕ್‌ ಬಣ್ಣಕ್ಕೆ ಆದ್ಯತೆ ಕೊಡಲಾಗಿತ್ತು. ಈ ಬಾರಿ ಬಣ್ಣದ ಬಗ್ಗೆ ಇನ್ನೂ ತೀರ್ಮಾನವಾಗಬೇಕಿದೆ. ಸಾಧ್ಯವಾದರೆ ಮಹಿಳಾ ಪೊಲೀಸರನ್ನೇ ನಿಯೋಜಿಸುವ ಸಾಧ್ಯತೆ ಇದೆ. ಒಂದು ವೇಳೆ ಅರೆ ಸೇನಾ ಪಡೆಯ ಸಿಬಂದಿ ಬಂದಲ್ಲಿ ಬಟ್ಟೆಯ ನಿರ್ದಿಷ್ಟ ಬಣ್ಣ ನಿರೀಕ್ಷಿಸುವುದು ತುಸು ಕಷ್ಟ. ಈ ಮತಗಟ್ಟೆಗಳನ್ನು ಬಣ್ಣದಿಂದ ಸಿಂಗರಿಸಲಾಗುತ್ತದೆ. ಒಂದು ವಿಶೇಷ ಸ್ವಾಗತ ಕಮಾನು ಇರಲಿದೆ. ರ್‍ಯಾಂಪ್‌ ಇರುವಲ್ಲಿ ಬಣ್ಣದ ಮ್ಯಾಟ್‌ ಬರಲಿದೆ. ಗೋಡೆಗೂ ನಿರ್ದಿಷ್ಟ ಬಣ್ಣ ಕೊಡುವ ಪ್ರಯತ್ನ ಮಾಡಲಾಗುತ್ತದೆ. 

ಸೆಲ್ಫಿ ಕಾರ್ನರ್‌
ಮಹಿಳಾ ಮತಗಟ್ಟೆಯಲ್ಲಿ ಹಿಂದಿನ ಬಾರಿ ಚುನಾವಣೆಯಲ್ಲಿ ಮಾಡಿದಂತೆ ಸೆಲ್ಫಿ ಕಾರ್ನರ್‌ ಕೂಡ ಇರಲಿದೆ. ಇಲ್ಲಿ ನಿಂತು ಸೆಲ್ಫಿಪ್ರಿಯರು ಚಿತ್ರ ತೆಗೆಸಿಕೊಳ್ಳಬಹುದು. ಕುಡಿಯುವ ನೀರು, ಪ್ರಥಮ ಚಿಕಿತ್ಸೆ  ಪೆಟ್ಟಿಗೆ ಇದ್ದು ಆಶಾ ಕಾರ್ಯಕರ್ತೆಯರು ಇದನ್ನು ನಿರ್ವಹಿಸಲಿದ್ದಾರೆ. 

ಸೌಡದಲ್ಲಿ ಗಿರಿಜನ ಮತಗಟ್ಟೆ
ಕುಂದಾಪುರ ತಾಲೂಕಿನ ಸೌಡ ಸ.ಹಿ.ಪ್ರಾ. ಶಾಲೆಯ ಮತಗಟ್ಟೆಯನ್ನು ಗಿರಿಜನ ಮತಗಟ್ಟೆ (ಟ್ರೈಬಲ್‌ ಎತ್ನಿಕ್‌ ಪೋಲಿಂಗ್‌ ಸ್ಟೇಶನ್‌) ಎಂದು ಗುರುತಿಸಲಾಗಿದೆ. ಇಲ್ಲಿ ಕೊರಗ ಸಮುದಾಯದ ಮತದಾರರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಹೋದ ಚುನಾವಣೆಯಲ್ಲಿ ಕುಂದಾಪುರದ ರಾಗಿಹಕ್ಲು, ಹೆಬ್ರಿ ಬಡಾಗುಡ್ಡೆ ಮತಗಟ್ಟೆಗಳನ್ನು ಆಯ್ದುಕೊಳ್ಳಲಾಗಿತ್ತು. ಈ ಬಾರಿ ಸೌಡವನ್ನು ಆಯ್ದುಕೊಳ್ಳಲಾಗಿದೆ. ಮತದಾರರನ್ನು ಆಕರ್ಷಿಸಲು ಗಿರಿಜನರ ಸಂಪ್ರದಾಯದಂತೆ ಡೋಲು, ಬುಟ್ಟಿ ಇತ್ಯಾದಿಗಳಿಂದ ಈ ಮತಗಟ್ಟೆಯನ್ನು ಸಿಂಗರಿಸಲಾಗುತ್ತದೆ.  

ಕೋಡಿಕನ್ಯಾನ: ಅಂಗವಿಕಲ ಮತಗಟ್ಟೆ
ಅಂಗವಿಕಲ ಮತದಾರರನ್ನು ಆಕರ್ಷಿಸಲು ಒಂದು ವಿಶೇಷ ಮತಗಟ್ಟೆಯನ್ನು ಸ್ಥಾಪಿಸಲಾಗುತ್ತಿದೆ. ಬಹುತೇಕ ಎಲ್ಲ ಮತಗಟ್ಟೆಗಳಲ್ಲಿ ಹತ್ತಿಪ್ಪತ್ತು ಅಂಗವಿಕಲ ಮತದಾರರಿದ್ದರೂ ಸ್ವಲ್ಪ ಹೆಚ್ಚಿಗೆ ಇರುವ ಮತಗಟ್ಟೆಯನ್ನು ಆಯ್ದುಕೊಳ್ಳಲಾಗುತ್ತದೆ. ಈ ಬಾರಿ ಸಾಸ್ತಾನದ ಕೋಡಿಕನ್ಯಾನ ಸ.ಹಿ.ಪ್ರಾ. ಶಾಲೆಯ (ಪೂರ್ವ) ಮತಗಟ್ಟೆಯನ್ನು ಅಂಗವಿಕಲರ ಮತಗಟ್ಟೆ ಎಂದು ಗುರುತಿಸಲಾಗುತ್ತಿದೆ. ಈ ಮತಗಟ್ಟೆಗೆ ಸಂಪೂರ್ಣ ಅಂಗವಿಕಲ ಸಿಬಂದಿಯನ್ನೇ ನಿಯೋಜಿಸುವುದು ತುಸು ಕಷ್ಟ. ಸುಗಮ ಕಾರ್ಯನಿರ್ವಹಣೆಯಾಗಬೇಕು ಎಂಬ ಉದ್ದೇಶದಿಂದ ಸ್ವಲ್ಪ ಅಂಗವೈಕಲ್ಯ ಇರುವವರನ್ನು ಆಯ್ದು ಇಲ್ಲಿಗೆ ನಿಯೋಜಿಸಲಾಗುತ್ತದೆ. ಇಲ್ಲಿ ವೀಲ್‌ ಚೆಯರ್‌, ವಾಕಿಂಗ್‌ ಸ್ಟಿಕ್‌, ಸ್ಟ್ರೆಚರ್‌, ವಾಕರ್‌ ಇತ್ಯಾದಿಗಳನ್ನು ಒದಗಿಸಲಾಗುತ್ತದೆ. ಇಂತಹ ಸೌಲಭ್ಯಗಳನ್ನು ಇತರ ಮತಗಟ್ಟೆಗಳಲ್ಲಿಯೂ ಅಳವಡಿಸಲಾಗುತ್ತದೆ. 

ಟಾಪ್ ನ್ಯೂಸ್

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Brahmavar

Padubidri: ಅಪಘಾತದ ಗಾಯಾಳು ಸಾವು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-wqeqqweqwe

Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.