ಅಗತ್ಯದಷ್ಟು ಮರಳಿಲ್ಲ: ಕಾರ್ಮಿಕರಿಗೆ ಕೆಲಸವಿಲ್ಲ


Team Udayavani, Nov 29, 2018, 9:50 AM IST

sandd.jpg

ಅಕ್ರಮ ಮರಳುಗಾರಿಕೆಯನ್ನು ಬಗ್ಗುಬಡಿದು ಪರಿಸರವನ್ನು ಸಂರಕ್ಷಿಸಬೇಕೆಂಬುದಕ್ಕೆ ಎರಡು ಮಾತಿಲ್ಲ. ಹಾಗೆಯೇ ಸಾಂಪ್ರದಾಯಿಕ ಮರಳುಗಾರಿಕೆಯನ್ನೂ ಒಂದು ನಿರ್ದಿಷ್ಟ ನಿಯಮದಡಿ ತಂದು ಶಿಸ್ತು ಬದ್ಧಗೊಳಿಸಬೇಕಾದುದೂ ಅವಶ್ಯ. ಇದೇ ಸಂದರ್ಭದಲ್ಲಿ ಜಿಲ್ಲಾಡಳಿತ ಮರಳನ್ನೇ ನಂಬಿರುವ ಕ್ಷೇತ್ರದ ಆರೋಗ್ಯವನ್ನು ಕಾಪಾಡಲೂ ಪರ್ಯಾಯ ಕ್ರಮಗಳನ್ನು ಕೈಗೊಳ್ಳಬೇಕು. ಈ ನೆಲೆಯಲ್ಲಿ ನಿರ್ದಿಷ್ಟ ಕ್ರಮ ಕೈಗೊಳ್ಳಲು ವಿಳಂಬವಾಗಿರುವುದು ಕಟ್ಟಡ ನಿರ್ಮಾಣ ಕ್ಷೇತ್ರದ ಕಾರ್ಮಿಕರನ್ನು ಕಂಗಾಲಾಗಿಸಿದೆ.

ಬ್ರಹ್ಮಾವರ: ಉಡುಪಿ ಜಿಲ್ಲಯಲ್ಲಿ ಮರಳಿನ ಕೊರತೆಯು ಕಟ್ಟಡ ನಿರ್ಮಾಣ ಕ್ಷೇತ್ರವನ್ನು ಅಗಾಧವಾಗಿ ತಟ್ಟಿದೆ. ಅದರಲ್ಲೂ ಇದರ ನೇರ ಬಿಸಿ ಅನುಭವಿಸುತ್ತಿರುವವರು ಕೂಲಿ ಕಾರ್ಮಿಕರು. 

ಈ ಭಾಗದಲ್ಲಿ ಹಲವು ವರ್ಷಗಳಿಂದ ಸಾಂಪ್ರದಾಯಿಕ ಮರಳುಗಾರಿಕೆಯ ಮರಳನ್ನೇ ಈ ಕ್ಷೇತ್ರ ಅವಲಂಬಿಸಿತ್ತು. ಬಳಿಕ ರಾಜ್ಯ ಸರಕಾರ ರಾಯಧನ ಪಾವತಿಸಿ ಪರವಾನಿಗೆ ಪಡೆದು ನಿಗದಿತ ಪ್ರಮಾಣ ದಷ್ಟೇ ಮರಳು ತೆಗೆಯುವ ಪದ್ಧತಿ ಜಾರಿಗೊಳಿಸಿತು. ಈ ಸಂದರ್ಭದಲ್ಲಿ ಕೆಲವರು ರಾಯಧನ ತಪ್ಪಿಸಲು ಹಾಗೂ ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಮರಳನ್ನು ಜೆಸಿಬಿ ಮೂಲಕ ಬಳಸಿ ತೆಗೆದು ರಾಜ್ಯದ ಬೇರೆ ಭಾಗಗಳಲ್ಲದೇ, ಹೊರರಾಜ್ಯಗಳಿಗೂ ಕಳುಹಿಸಲು ಆರಂಭಿಸಿದರು. ಇದು ಅಕ್ರಮ ದಂಧೆಯಾಗಿ ಮಾರ್ಪಟ್ಟಿತು. ಈ ಹಿನ್ನೆಲೆಯಲ್ಲಿ ಅಕ್ರಮ ಮರಳುಗಾರಿಕೆಯನ್ನು ತಡೆಯುವ ಸಲುವಾಗಿ ಸರಕಾರ ಪರವಾನಿಗೆಯನ್ನು ನೀಡುವುದನ್ನೇ ನಿರ್ಬಂಧಿಸಿತು. 

ಸಾಂಪ್ರದಾಯಿಕ ಮರಳುಗಾರಿಕೆಗೂ ಪರವಾನಿಗೆ ಸಿಗದ ಪರಿಣಾಮ ಕಟ್ಟಡ ನಿರ್ಮಾಣ ಕಾಮಗಾರಿಗಳು ಸ್ಥಗಿತಗೊಳ್ಳತೊಡಗಿದವು. ಕೆಲವರು ಕಾಳಸಂತೆಯಿಂದ ಮರಳನ್ನು ಹೆಚ್ಚಿನ ದರಕ್ಕೆ ಪಡೆದು ಅಂತಿಮ ಹಂತದಲ್ಲಿದ್ದ ಕಾಮಗಾರಿ ಮುಗಿಸಿದರು. ಇನ್ನು ಕೆಲವರು ದರ ಇಳಿಯಲೆಂದು ಸುಮ್ಮನಾದರು. ಇವೆ
ಲ್ಲದರ ಪರಿಣಾಮ ಕಾರ್ಮಿಕ ವರ್ಗ ಕಂಗಾಲಾಯಿತು. ಈ ಪರಿಸ್ಥಿತಿ ಜಿಲ್ಲೆಯ ನಿರ್ದಿಷ್ಟ ಭಾಗಕ್ಕೆಂದಿಲ್ಲ. ಬಹುತೇಕ ಕಡೆ ಇದೇ ಸ್ಥಿತಿ. ಬ್ರಹ್ಮಾವರವನ್ನೇ ಉದಾಹರಣೆ ತೆಗೆದುಕೊಂಡರೆ, ಮೊದಲು ವಾರಪೂರ್ತಿ ಕೆಲಸವಿರುತ್ತಿತ್ತು. ಈಗ ಒಂದೆರಡು ದಿನಕ್ಕೂ ಕಷ್ಟ. ಕೆಲಸಕ್ಕೆ ರಜೆ ಮಾಡಿದರೆ ಬೈಯುವ ಕಾಲವಿತ್ತು. ಈಗ ಕಾರ್ಮಿಕರನ್ನು ಎಲ್ಲಿ ಕೆಲಸಕ್ಕೆ ಕಳುಹಿಸುವುದೆನ್ನುವುದೇ ಸಮಸ್ಯೆ ಎನ್ನುತ್ತಾರೆ ಮೇಸ್ತ್ರಿಯೊಬ್ಬರು.

ಸಾಲದ ಶೂಲ 
ಪ್ರತಿನಿತ್ಯದ ಸಂಬಳವನ್ನೇ ನಂಬಿ ಸಂಘಗಳಲ್ಲಿ ಸಾಲ ಮಾಡಲಾಗಿತ್ತು. ಅದನ್ನು ತೀರಿಸಲು ಹಣವಿಲ್ಲದಾಗಿದೆ ಎಂಬುದು ಮತ್ತಷ್ಟು ಮಂದಿಯ ಸವಾಲಾದರೆ, ಮಕ್ಕಳ ಶಿಕ್ಷಣದ ವೆಚ್ಚ ನಿರ್ವಹಣೆ, ಮನೆಯಲ್ಲಿ ಹಿರಿಯರ ಆರೋಗ್ಯ ನಿರ್ವಹಣೆ, ಮನೆಯ ಖರ್ಚಿನ ನಿರ್ವಹಣೆ ಎಲ್ಲದಕ್ಕೂ ಆದಾಯದ ಕೊರತೆ ಉದ್ಭವಿಸಿದೆ. 

ಪರಿಸ್ಥಿತಿ ಬದಲು
 ಹಲವು ಮನೆಗಳಲ್ಲಿ ಮನೆಯೊಡತಿ ಮನೆಯನ್ನು ನಿರ್ವಹಿಸುತ್ತಿದ್ದರು. ಕೆಲಸಕ್ಕೆ ಹೋದರೂ ಮನೆಯ ಸುತ್ತ ಲಿನ ಕೆಲಸವಷ್ಟೇ. ಈಗ ಪತಿಗೂ ಕೆಲಸವಿಲ್ಲದ ಕಾರಣ, ಸ್ವಲ್ಪ ದೂರ ವಾದರೂ ಪರವಾಗಿಲ್ಲ ವೆಂದು ಆಕೆಯೂ ಕೆಲಸಕ್ಕೆ ಹೋಗುತ್ತಿರುವ ಪ್ರಕರಣ ಹೆಚ್ಚಾಗಿದೆ. ಭತ್ತದ ಕಟಾವು ಬಹುತೇಕ ಮುಗಿದಿದ್ದು, ಕೃಷಿ ಕೆಲಸವೂ ಮುಗಿಯುತ್ತಾ ಬಂದಿದೆ. ಮುಂದೇನು ಎಂಬುದೇ ಚಿಂತೆ ಎನ್ನುತ್ತಾರೆ ಬ್ರಹ್ಮಾವರ ಬಳಿಯ ಕೂಲಿ ಕಾರ್ಮಿಕರೊಬ್ಬರು.

ಕ್ಷೇತ್ರವೇ ದೊಡ್ಡದು 
ನಿರ್ಮಾಣ ಕಾರ್ಯ ಸ್ಥಗಿತದಿಂದ ಸಾವಿರಾರು ಕಾರ್ಮಿಕರಿಗೆ ಉದ್ಯೋಗವಿಲ್ಲ. ಕಲ್ಲು ಕೋರೆ, ಪಂಚಾಂಗ ಕಟ್ಟುವ, ಮಣ್ಣು ತುಂಬಿಸುವ, ಗಾರೆ, ಪೈಂಟಿಂಗ್‌ ಮಾಡುವವರಿಗೂ ಕೆಲಸವಿಲ್ಲದಾಗಿದೆ.

 ಪ್ರವೀಣ್‌ ಬ್ರಹ್ಮಾವರ

ಟಾಪ್ ನ್ಯೂಸ್

ವಿವಿಧೆಡೆ ಕುಸಿದು ಬಿದ್ದು ಮೂವರು ವ್ಯಕ್ತಿಗಳ ಸಾವು

ವಿವಿಧೆಡೆ ಕುಸಿದು ಬಿದ್ದು ಮೂವರು ವ್ಯಕ್ತಿಗಳ ಸಾವು

ಮಂಗಳೂರಿನಲ್ಲಿ ಜನಾಕರ್ಷಣೆ ಕೇಂದ್ರವಾದ ರ್‍ಯಾಂಬೊ ಸರ್ಕಸ್‌

ಮಂಗಳೂರಿನಲ್ಲಿ ಜನಾಕರ್ಷಣೆ ಕೇಂದ್ರವಾದ ರ್‍ಯಾಂಬೊ ಸರ್ಕಸ್‌

Kapu ಪಿಲಿ ಕೋಲ ಸಂಪನ್ನ; ಓರ್ವನನ್ನು ಸ್ಪರ್ಶಿಸಿದ ಪಿಲಿ!

Kapu ಪಿಲಿ ಕೋಲ ಸಂಪನ್ನ; ಓರ್ವನನ್ನು ಸ್ಪರ್ಶಿಸಿದ ಪಿಲಿ!

Surathkal ಸೂರಿಂಜೆ ಮೂಡುಬೆಟ್ಟು; ಅಣೆಕಟ್ಟು ಕುಸಿತ, ಕೃಷಿಕರು ಕಂಗಾಲು

Surathkal ಸೂರಿಂಜೆ ಮೂಡುಬೆಟ್ಟು; ಅಣೆಕಟ್ಟು ಕುಸಿತ, ಕೃಷಿಕರು ಕಂಗಾಲು

ಜನಾಭಿಪ್ರಾಯಕ್ಕೆ ಸ್ಪಂದಿಸಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಕಾಂಗ್ರೆಸ್‌ ಆಗ್ರಹ

ಜನಾಭಿಪ್ರಾಯಕ್ಕೆ ಸ್ಪಂದಿಸಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಕಾಂಗ್ರೆಸ್‌ ಆಗ್ರಹ

car-parkala

Road Mishap ಬೈಕ್‌ ಅಪಘಾತ: ಸವಾರ ಸಾವು

Fraud Case ಆನ್‌ಲೈನ್‌ ಮೂಲಕ ಲಕ್ಷಾಂತರ ರೂಪಾಯಿ ವಂಚನೆ

Fraud Case ಆನ್‌ಲೈನ್‌ ಮೂಲಕ ಲಕ್ಷಾಂತರ ರೂಪಾಯಿ ವಂಚನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kapu ಪಿಲಿ ಕೋಲ ಸಂಪನ್ನ; ಓರ್ವನನ್ನು ಸ್ಪರ್ಶಿಸಿದ ಪಿಲಿ!

Kapu ಪಿಲಿ ಕೋಲ ಸಂಪನ್ನ; ಓರ್ವನನ್ನು ಸ್ಪರ್ಶಿಸಿದ ಪಿಲಿ!

ಜನಾಭಿಪ್ರಾಯಕ್ಕೆ ಸ್ಪಂದಿಸಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಕಾಂಗ್ರೆಸ್‌ ಆಗ್ರಹ

ಜನಾಭಿಪ್ರಾಯಕ್ಕೆ ಸ್ಪಂದಿಸಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಕಾಂಗ್ರೆಸ್‌ ಆಗ್ರಹ

Fraud Case ಆನ್‌ಲೈನ್‌ ಮೂಲಕ ಲಕ್ಷಾಂತರ ರೂಪಾಯಿ ವಂಚನೆ

Fraud Case ಆನ್‌ಲೈನ್‌ ಮೂಲಕ ಲಕ್ಷಾಂತರ ರೂಪಾಯಿ ವಂಚನೆ

Kapu ಜಾಂಡೀಸ್ ಕಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿ ಸಾವು

Kapu ಜಾಂಡೀಸ್ ಕಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿ ಸಾವು

Udupi ಇನ್ನೂ ನಡೆಯದ ಟೆಂಡರ್‌ ಪ್ರಕ್ರಿಯೆ; ರಾಜ್ಯದಲ್ಲಿ ಅಗ್ನಿಶಾಮಕ ವಾಹನ ಕೊರತೆ

Udupi ಇನ್ನೂ ನಡೆಯದ ಟೆಂಡರ್‌ ಪ್ರಕ್ರಿಯೆ; ರಾಜ್ಯದಲ್ಲಿ ಅಗ್ನಿಶಾಮಕ ವಾಹನ ಕೊರತೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ವಿವಿಧೆಡೆ ಕುಸಿದು ಬಿದ್ದು ಮೂವರು ವ್ಯಕ್ತಿಗಳ ಸಾವು

ವಿವಿಧೆಡೆ ಕುಸಿದು ಬಿದ್ದು ಮೂವರು ವ್ಯಕ್ತಿಗಳ ಸಾವು

ಮಂಗಳೂರಿನಲ್ಲಿ ಜನಾಕರ್ಷಣೆ ಕೇಂದ್ರವಾದ ರ್‍ಯಾಂಬೊ ಸರ್ಕಸ್‌

ಮಂಗಳೂರಿನಲ್ಲಿ ಜನಾಕರ್ಷಣೆ ಕೇಂದ್ರವಾದ ರ್‍ಯಾಂಬೊ ಸರ್ಕಸ್‌

Kapu ಪಿಲಿ ಕೋಲ ಸಂಪನ್ನ; ಓರ್ವನನ್ನು ಸ್ಪರ್ಶಿಸಿದ ಪಿಲಿ!

Kapu ಪಿಲಿ ಕೋಲ ಸಂಪನ್ನ; ಓರ್ವನನ್ನು ಸ್ಪರ್ಶಿಸಿದ ಪಿಲಿ!

Surathkal ಸೂರಿಂಜೆ ಮೂಡುಬೆಟ್ಟು; ಅಣೆಕಟ್ಟು ಕುಸಿತ, ಕೃಷಿಕರು ಕಂಗಾಲು

Surathkal ಸೂರಿಂಜೆ ಮೂಡುಬೆಟ್ಟು; ಅಣೆಕಟ್ಟು ಕುಸಿತ, ಕೃಷಿಕರು ಕಂಗಾಲು

ಜನಾಭಿಪ್ರಾಯಕ್ಕೆ ಸ್ಪಂದಿಸಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಕಾಂಗ್ರೆಸ್‌ ಆಗ್ರಹ

ಜನಾಭಿಪ್ರಾಯಕ್ಕೆ ಸ್ಪಂದಿಸಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಕಾಂಗ್ರೆಸ್‌ ಆಗ್ರಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.