ಉಡುಪಿ: ನ್ಯಾಯ ಸಿಗುವವರೆಗೂ ಲಾಡ್ಜ್ ನಿಂದ ಮೃತದೇಹ ತೆಗೆದುಕೊಂಡು ಹೋಗಲ್ಲ; ಸಂತೋಷ್ ಸಹೋದರ
Team Udayavani, Apr 13, 2022, 1:44 PM IST
ಉಡುಪಿ: ಆರೋಪಿಗಳ ಬಂಧನ ಆಗುವವರೆಗೂ ಲಾಡ್ಜ್ ನಿಂದ ತಮ್ಮನ ಮೃತದೇಹವನ್ನು ತೆಗೆದುಕೊಂಡು ಹೋಗುವುದಿಲ್ಲ ಎಂದು ಸಂತೋಷ್ ಸಹೋದರ ಪ್ರಶಾಂತ್ ಪಾಟೀಲ್ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತಾನಾಡಿದ ಅವರು, ನಮಗೆ ನ್ಯಾಯ ಸಿಗಬೇಕು, ನ್ಯಾಯ ಸಿಗುವವರೆಗೆ ತಮ್ಮನ ಮೃತ ದೇಹವನ್ನು ಲಾಡ್ಜ್ ನಿಂದ ಮೃತದೇಹ ತೆಗೆದುಕೊಂಡು ಹೋಗುವುದಿಲ್ಲ. ನಾವು ಇಲಾಖೆಗೆ ತನಿಖೆಗೆ ಸಂಪೂರ್ಣ ಸಹಕಾರ ಕೊಟ್ಟಿದ್ದೇವೆ. ಇದುವರೆಗೆ ಆರೋಪಿಗಳ ಬಂಧನ ಆಗಿಲ್ಲ. ಇಲಾಖೆಯವರು ಕೂಡ ನಮಗೆ ಸಹಕಾರ ಕೊಟ್ಟು, ಆರೋಪಿಗಳನ್ನು ಬಂಧಿಸಬೇಕೆಂದರು.
ಇದನ್ನೂ ಓದಿ:ಸಂತೋಷ್ ಪ್ರಕರಣದಲ್ಲಿ ಮೇಲ್ನೋಟಕ್ಕೆ ಈಶ್ವರಪ್ಪನವರ ಪಾತ್ರ ಕಂಡುಬಂದಿಲ್ಲ: ಸಿಟಿ ರವಿ
ಸಿಎಂ ಅವರಿಗೆ ಈಗಾಗಲೇ ಮನವಿ ಮಾಡಿದ್ದೇವೆ. ಇದುವರೆಗೆ ಯಾವ ಪ್ರತಿಕ್ರಿಯೆವೂ ಸರ್ಕಾರದಿಂದ ಬಂದಿಲ್ಲ. ನನ್ನ ತಮ್ಮ ಹೇಳಿದೆಲ್ಲವೂ ಸತ್ಯ. ಮಾಧ್ಯಮಗಳಿಗೆ ಸಿಕ್ಕ ಸಾಕ್ಷ್ಯಧಾರ ಸತ್ಯ. ತಮ್ಮನಿಗೆ ನ್ಯಾಯ ಸಿಗಬೇಕೆಂದರು.
ಉಡುಪಿ ಶಾಂಭವಿ ಲಾಡ್ಜ್ ಎದುರು ಪತ್ತೆಯಾದ ಮೃತ ಸಂತೋಷ್ ಪಾಟೀಲ್ ಗೆ ಸಂಬಂಧಿಸಿದ ಕಾರಿನ ಪರಿಶೀಲನೆಯನ್ನು ಪೊಲೀಸರು ನಡೆಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ
Kapu Assembly constituency: ನಕಲಿ ಮತದಾನ;ಆರೋಪ
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ