ಕಡಲು ಪ್ರಕ್ಷುಬ್ಧ : ನಾಡದೋಣಿ ಮೀನುಗಾರಿಕೆ ಮತ್ತಷ್ಟು ವಿಳಂಬ
ಮೀನಿನ ದರ, ಖಾದ್ಯ ದುಬಾರಿ; ಹೊಳೆ ಮೀನಿಗೆ ಭಾರೀ ಬೇಡಿಕೆ
Team Udayavani, Jul 21, 2019, 5:01 AM IST
ಇನ್ನೂ ಕಡಲಿಗಿಳಿಯದೆ ದಡದಲ್ಲೇ ಲಂಗರು ಹಾಕಿರುವ ನಾಡದೋಣಿಗಳು.
ಕುಂದಾಪುರ: ಮಳೆ ಬಿರುಸುಗೊಂಡಿದ್ದು, ಕಡಲು ಕೂಡ ಪ್ರಕ್ಷುಬ್ಧಗೊಂಡಿದೆ. ಸಮುದ್ರ ಶಾಂತವಾಗುವವರೆಗೆ ಮೀನುಗಾರರು ಕಡಲಿಗಿಳಿಯಬಾರದು ಎನ್ನುವ ಮುನ್ನೆಚ್ಚರಿಕೆ ಹಿನ್ನೆಲೆಯಲ್ಲಿ ಈ ಬಾರಿ ನಾಡದೋಣಿ ಮೀನುಗಾರಿಕೆ ಆರಂಭ ಮತ್ತಷ್ಟು ವಿಳಂಬಗೊಳ್ಳುವ ಸಾಧ್ಯತೆಯಿದೆ.
ನಾಡದೋಣಿ ಮೀನುಗಾರಿಕೆಯು ಕೋಡಿ, ಗಂಗೊಳ್ಳಿ, ಮರವಂತೆ, ಕೊಡೇರಿ ಭಾಗದಲ್ಲಿ ಇನ್ನೂ ಕೂಡ ಆರಂಭವಾಗಿಲ್ಲ. ಕಳೆದ ವರ್ಷ ಜು. 16ಕ್ಕೆ ಕೋಡಿ, ಗಂಗೊಳ್ಳಿ ಭಾಗದಲ್ಲಿ ನಾಡದೋಣಿ ಮೀನುಗಾರರು ಕಡಲಿಗಿಳಿದಿದ್ದರು. ಆದರೆ ಈ ಬಾರಿ ಈಗಷ್ಟೇ ಮಳೆ ಚುರುಕುಗೊಂಡಿದ್ದು, ಸಮುದ್ರದಲ್ಲಿ ಅಲೆಗಳ ಅಬ್ಬರವೂ ಹೆಚ್ಚಾಗಿದೆ. ಸಮುದ್ರ ಶಾಂತವಾದ ಬಳಿಕವಷ್ಟೇ ಮೀನುಗಾರಿಕೆಗೆ ತೆರಳಬಹುದು. ಅಂದರೆ ಜು. 23ರಿಂದ ಜು. 25ರೊಳಗೆ ಆರಂಭಗೊಳ್ಳುವ ನಿರೀಕ್ಷೆಯಿದೆ.
ಕೋಡಿ, ಗಂಗೊಳ್ಳಿ, ಕೊಡೇರಿ, ಮರವಂತೆ, ಹೊಸಪೇಟೆ, ಕಂಚುಗೋಡು, ಶಿರೂರು ಸೇರಿ ದಂತೆ ಕುಂದಾಪುರ ಭಾಗದಲ್ಲಿ ಸುಮಾರು 600ಕ್ಕೂ ಹೆಚ್ಚು ನಾಡದೋಣಿ ಗಳಿದ್ದು, ಸಾವಿರಾರು ಮಂದಿ ಮೀನು ಗಾರರಿದ್ದಾರೆ.
ಕೋಟ್ಯಂತರ ರೂ. ನಷ್ಟ
ಇಷ್ಟೊತ್ತಿಗಾಗಲೇ ನಾಡದೋಣಿ ಮೀನುಗಾರಿಕೆ ಆರಂಭವಾಗಿದ್ದರೆ, ಮೀನುಗಾರರಿಗೆ ಉತ್ತಮ ಆದಾಯ ಸಿಗುತ್ತಿತ್ತು. ಈ ವೇಳೆ ಚಟಿÉ (ಸಿಗಡಿ) ಸಿಗುವ ಸಮಯವಾಗಿದ್ದು, ಸಿಗಡಿಗೆ ಉತ್ತಮ ಬೆಲೆ ಸಿಗುವುದರಿಂದ ಹೆಚ್ಚಿನ ಲಾಭವಾಗುತ್ತಿತ್ತು. ಆದರೆ ಇನ್ನೂ ಕಡಲಿಗಿಳಿಯದಿದ್ದುದರಿಂದ ಪ್ರತಿಯೊಬ್ಬ ಮೀನುಗಾರರಿಗೆ ಕನಿಷ್ಠ 30 ಸಾವಿರ ರೂ. ವರೆಗೆ ನಷ್ಟವಾಗಿದೆ. ಒಟ್ಟಾರೆ ದೋಣಿಗೆ ಲಕ್ಷ ರೂ.ಯಂತೆ, ಕೋಟ್ಯಂತರ ರೂ. ನಷ್ಟ ಉಂಟಾಗಿದೆ.
ತಿಂಗಳಾಂತ್ಯಕ್ಕೆ ಆರಂಭದ ನಿರೀಕ್ಷೆ
ಈಗ ಭಾರೀ ಮಳೆಯಾಗುತ್ತಿರು ವುದರಿಂದ ಇಲಾಖೆಯಿಂದಲೇ ಸಮುದ್ರಕ್ಕಿಳಿಯದಂತೆ ಮುನ್ಸೂಚನೆ ಬಂದಿದೆ. ಮಳೆ ಕಡಿಮೆಯಾಗಿ, ಸಮುದ್ರ ಶಾಂತವಾದ ಬಳಿಕ ನಾಡದೋಣಿ ಮೀನುಗಾರಿಕೆ ಆರಂಭವಾಗಬಹುದು.
-ಮಂಜು ಬಿಲ್ಲವ, ಅಧ್ಯಕ್ಷರು, ಗಂಗೊಳ್ಳಿ ನಾಡದೋಣಿ ಮೀನುಗಾರರ ಸಂಘ
ಮೀನಿನ ದರ ಗಗನಕ್ಕೆ
ಯಾಂತ್ರೀಕೃತ ಮೀನುಗಾರಿಕೆಗೆ ನಿಷೇಧವಿದ್ದು, ನಾಡದೋಣಿ ಮೀನುಗಾರಿಕೆ ಇನ್ನೂ ಆರಂಭ ಗೊಂಡಿಲ್ಲ. ಇದರಿಂದ ಮಾರುಕಟ್ಟೆಯಲ್ಲಿ ಮೀನಿನ ದರ ದುಬಾರಿಯಾಗಿದೆ. ಮೀನಿನ ಖಾದ್ಯಗಳಂತೂ ಮತ್ತೂ ದುಪ್ಪಟ್ಟಾಗಿವೆೆ. 3 ಬಂಗುಡೆಗೆ 100 ರೂ. ಇದ್ದರೆ, 1 ಕೆ.ಜಿ. ಬಂಗುಡೆಗೆ 230 ರಿಂದ 250 ರೂ.ವರೆಗೆ ದರವಿದೆ. 1 ಕೆ.ಜಿ. ಬೂತಾಯಿ (ಬೈಗೆ) ಗೆ 150ರಿಂದ 170 ರೂ. ವರೆಗೂ ಮಾರಾಟವಾಗ್ತಿದೆ. ಕೊಡ್ವಾಯಿಗೆ 150 ರೂ. ಇದೆ. ಹೊಳೆ ಮೀನುಗಳಿಗೂ ಭಾರೀ ಬೇಡಿಕೆಯಿದ್ದು, ಕಾಣೆ ಮೀನು ಕೆ.ಜಿ.ಗೆ 700 ರೂ. ನಿಂದ 1000 ರೂ. ವರೆಗೂ ಮಾರಾಟವಾಗ್ತಿದೆ. ಹೊಳೆ ಬೈಗೆಗೆ ಕೆ.ಜಿ.ಗೆ 500 ರೂ. ವರೆಗೆ ಬೇಡಿಕೆಯಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ
Kapu Assembly constituency: ನಕಲಿ ಮತದಾನ;ಆರೋಪ
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…