ಶ್ರೀಕೃಷ್ಣಮಠದೆದುರಿನ ಚರಂಡಿ ಕಾಮಗಾರಿ ದುರಸ್ತಿ
Team Udayavani, Feb 1, 2019, 12:50 AM IST
ಉಡುಪಿ: ಶ್ರೀಕೃಷ್ಣ ಮಠದೆದುರಿಗಿನ ಮಳೆ ನೀರು ಹರಿಯುವ ಚರಂಡಿಯನ್ನು ದುರಸ್ತಿಪಡಿಸಲಾಗುತ್ತಿದೆ.
ಇಲ್ಲಿ ನೀರು ಹರಿಯುವಿಕೆ ಸಮಸ್ಯೆಯಾಗಿತ್ತು. ಇದನ್ನು ನಗರಸಭೆ ನಿಧಿಯಿಂದ ದುರಸ್ತಿಪಡಿಸಲಾಗುತ್ತಿದೆ. ಈ ನೀರು ಅದಮಾರು ಮಠ ಅತಿಥಿಗೃಹದ ಬಳಿಯಿಂದ ಹರಿದುಬಂದು ಕಾಣಿಯೂರು ಮಠದ ಪಕ್ಕದ ತೋಡಿನ ಮೂಲಕ ಬೈಲಕೆರೆ ಕಲ್ಸಂಕ ದೊಡ್ಡ ತೋಡಿಗೆ ಸೇರುತ್ತದೆ.
ಚರಂಡಿಯನ್ನು 7.2 ಲ.ರೂ. ವೆಚ್ಚದಲ್ಲಿ ನಿರ್ವಹಿಸಲಾಗುತ್ತಿದೆ. ಕಾಂಕ್ರೀಟ್ ಬೆಡ್ ಹಾಕಿ ಆಚೀಚೆ ಸಮತಟ್ಟುಗೊಳಿಸುವ ಕಾಮಗಾರಿ ಮಾಡಲಾಗುವುದು.
ರಾಷ್ಟ್ರಪತಿಯವರು ಬರುವ ಸಂದರ್ಭ ಜಿಲ್ಲಾಧಿಕಾರಿಯವರಿಗೆ ಇದರ ಬಗ್ಗೆ ತಿಳಿಸಿದ್ದೆವು. ಅವರು ಕೂಡಲೇ ಸ್ಪಂದಿಸಿದರು. ಆದರೆ ನಿಯಮಾವಳಿ ಪ್ರಕಾರ ಕೆಲವು ದಿನಗಳು ಬೇಕಾದವು. ಆಗ ಸಪ್ತೋತ್ಸವ ಆರಂಭಗೊಂಡಿತು. ಹೀಗಾಗಿ ಸಪ್ತೋತ್ಸವ ಮುಗಿದ ಬಳಿಕ ಮಾಡಲು ತಿಳಿಸಿದೆವು. ಈಗ ಕಾಮಗಾರಿ ನಡೆಯುತ್ತಿದೆ ಎಂದು ಶ್ರೀಕೃಷ್ಣಮಠ ಪರ್ಯಾಯ ಶ್ರೀಪಲಿಮಾರು ಮಠದ ಆಡಳಿತಾಧಿಕಾರಿ ಪ್ರಹ್ಲಾದ್ ತಿಳಿಸಿದರು.
ಕಾಮಗಾರಿಯನ್ನು ಆದಷ್ಟು ಶೀಘ್ರ ಮುಗಿಸುವುದಾಗಿ ನಗರಸಭೆಯ ಅಧಿಕಾರಿಗಳು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್ ಎಂ. ಪೈ ಬ್ಲಾಕ್ ಇಂದು ಲೋಕಾರ್ಪಣೆ
ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್ ಹೊಂದಿರುವ ಕ್ಯಾನ್ಸರ್ ಚಿಕಿತ್ಸೆ ಕ್ರಮ
Manipal; ಕೌಶಲಾಧಾರಿತ ಮಾನವ ಶಕ್ತಿ ಇದ್ದರೆ ಸರ್ವ ಸಾಧನೆ: ಕೆ.ವಿ. ಕಾಮತ್
Karkala ಡಾ| ಟಿಎಂಎ ಪೈ ರೋಟರಿ ಆಸ್ಪತ್ರೆಗೆ ಡಯಾಲಿಸಿಸ್ ಯಂತ್ರ ಕೊಡುಗೆ
Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್ ವಾಹನ ಅಪಘಾತ
MUST WATCH
ಹೊಸ ಸೇರ್ಪಡೆ
ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ
Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್ ಎಂ. ಪೈ ಬ್ಲಾಕ್ ಇಂದು ಲೋಕಾರ್ಪಣೆ
Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್ ಪೋಸ್ಟ್ ವರದಿ
Kerala; ಒಂದೇ ವೇದಿಕೆಯಲ್ಲಿ 150 ಅವಳಿಗಳ ಸಂಭ್ರಮ
ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್ ಹೊಂದಿರುವ ಕ್ಯಾನ್ಸರ್ ಚಿಕಿತ್ಸೆ ಕ್ರಮ