ಅತ್ತೂರು ಜಾತ್ರೆಗೆ ಇಂದು ಚಾಲನೆ, ಇಷ್ಟಾರ್ಥ ಸಿದ್ದಿಗಾಗಿ ಪ್ರಾರ್ಥನೆ

ಸರ್ವಧರ್ಮಿಯರ ಅತ್ತೂರು ಜಾತ್ರೆ,ಜನಸಾಗರದ ಯಾತ್ರೆ

Team Udayavani, Jan 22, 2023, 7:00 AM IST

ಅತ್ತೂರು ಜಾತ್ರೆಗೆ ಇಂದು ಚಾಲನೆ, ಇಷ್ಟಾರ್ಥ ಸಿದ್ದಿಗಾಗಿ ಪ್ರಾರ್ಥನೆ

ಕಾರ್ಕಳ: ಅತ್ತೂರು ಸಂತ ಲಾರೆನ್ಸ್‌ ಬಸಿಲಿಕಾ ಚರ್ಚ್‌ ಜಾತ್ರೆ ವಿಶ್ವವಿಖ್ಯಾತಿ. ಎಲ್ಲೆಡೆಯಿಂದ ಸರ್ವಧರ್ಮಿಯರು ಇಲ್ಲಿಗೆ ಆಗಮಿಸುತ್ತಾರೆ. ಜಾತ್ರೆ ನಡೆಯುವ ಅಷ್ಟೂ ದಿನವೂ ಸಂಭ್ರಮವೋ ಸಂಭ್ರಮ. ವಾರ್ಷಿಕೋತ್ಸವ ದಿನಗಳಲ್ಲಿ ಹಗಲು ರಾತ್ರಿ ಎನ್ನದೆ ಜನಸಾಗರವೇ ಇಲ್ಲಿಗೆ ಹರಿದು ಬರುತ್ತದೆ.

ಇಂದಿನಿಂದ (ಜ.22) ಮುಂದಿನ 5 ದಿನಗಳ ಕಾಲ ಅತ್ತೂರು ವಿಜೃಂಭಣೆಗೆ ತೆರೆದುಕೊಳ್ಳುತ್ತಿದೆ. ಭಕ್ತರ ಆಗಮನ ಜತೆಗೆ ಸಂತೆ ವ್ಯಾಪಾರವೂ ಇಲ್ಲಿ ಜೋರಾಗಿಯೇ ನಡೆಯುತ್ತದೆ. ವ್ಯಾಪಾರ ಮಳಿಗೆಗಳು ತೆರೆದುಕೊಂಡು ವ್ಯಾಪಾರ ವಹಿವಾಟು ಆರಂಬಿಸಿದೆ.

ಕಾರ್ಕಳದ ಸಂತ ಮಾರಿ ಎಂದೆ ಪ್ರಸಿದ್ಧಿ ಹೊಂದಿರುವ ಅತ್ತೂರು ಸಂತ ಲಾರೆನ್ಸ್‌ ಬಸಿಲಿಕಾದ ಜಾತ್ರೆ ಆರಂಭದ ಹಿಂದಿನ ದಿನವೇ ವಿಜೃಂಭಣೆಯಿಂದಲೆ ಪ್ರಾರಂಭಗೊಂಡಿದೆ. ಅತ್ತೂರು ಜಾತ್ರೆ ಎಂದ ಕೂಡಲೆ ಎಲ್ಲರ ಮನಸ್ಸಿನಲ್ಲಿ ಮೂಡುವ ಯೋಚನೆ ಈ ವರ್ಷ ಎಷ್ಟು ಸಂತೆ ಬಂದಿರಬಹುದು ಎಂಬುದಾಗಿದ್ದು, ತೊಟ್ಟಿಲಿನಿಂದ ಹಿಡಿದು ಆಟದ ಜೋಕಾಲಿ, ಮನೋರಂಜನೆಗಳು. ಜಾಯಿಂಟ್‌ವಿಲ್‌, ಮಕ್ಕಳು ಕುಳಿತು ತಿರುಗುವ ವಿವಿಧ ಆಟಿಕೆಗಳು, ಡ್ರೆಸ್‌ ಮೆಟಿರಿಯಲ್‌, ಮಣಿಸರಕಿನ ಸ್ಟಾಲ್‌ಗ‌ಳು, ಐಸ್‌ಕ್ರಿಂ, ಪಾನಿಪುರಿ, ಗೋಬಿ ಮಂಚೂರಿ ಅತ್ತೂರಿನ ಜಾತ್ರೆಯ ವಿಶೇಷ ಕಲ್ಲಂಗಡಿ ಸಹಿತ ವಿವಿಧ ತಿನಿಸುಗಳ ಸ್ಟಾಲ್‌ಗ‌ಳು ಈ ಬಾರಿ ಸಾಕಷ್ಟು ಇವೆ.

ವ್ಯಾಪಾರ ಮಾಡುವುದಕ್ಕೆ ಸಂತೆ ಮಾರುಕಟ್ಟೆಯಲ್ಲಿ 480 ಮಳಿಗೆಗಳು ಸೇರಿ ಸಣ್ಣ ಪುಟ್ಟ ಮಾರಾಟ ಸೇರಿ 500ಕ್ಕೂ ಅಧಿಕ ಅಂಗಡಿಗಳು ತೆರೆದುಕೊಂಡಿವೆ. ಚರ್ಚ್‌ ಮುಂಭಾಗದ ರಸ್ತೆ ಬದಿ, ಎಡಬದಿಗೆ, ವಿಶಾಲವಾದ ಸಂತೆ ಮಾರುಕಟ್ಟೆಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಆರಂಭದ ದಿನದಿಂದಲೆ ಜನರು ಚರ್ಚ್‌ ಕಡೆ ಆಗಮಿಸುತಿದ್ದು, ಮಳೆಗೆಗಳ ಮುಂದೆಲ್ಲ ಜನ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತಿದ್ದಾರೆ.

ಮುಂದಿನ ನಾಲ್ಕೈದು ದಿನಗಳಲ್ಲಿ ಇನ್ನು ಹೆಚ್ಚುವ ಸಾಧ್ಯತೆಗಳಿವೆ. 2 ವರ್ಷಗಳ ಹಿಂದೆ ಕೊರೊನಾದ ಕಾರಣಕ್ಕೆ ಜಾತ್ರೆ ನಡೆದಿರಲಿಲ್ಲ. ಕಳೆದ ವರ್ಷಗಳಿಂದ ಮರಳಿ ಹಿಂದಿನ ಸ್ಥಿತಿಗೆ ಅತ್ತೂರು ಜಾತ್ರೆ ಮರಳಿದೆ.

ದಕ್ಷಿಣ ಭಾರತದಲ್ಲೆ ಭಾವೈಕ್ಯದ ಅಗ್ರ ಧಾರ್ಮಿಕ ಕ್ಷೇತ್ರವಾದ ಸಂತ ಲಾರೆನ್ಸ್‌ ಚರ್ಚ್‌ ಝಗಮಗಿಸುವ ವಿದ್ಯುತ್‌ ದೀಪಗಳಿಂದ ಕಂಗೊಳಿಸುತ್ತಿದೆ. ಉತ್ಸವದಲ್ಲಿ ಸಹಸ್ರಾರು ಮಂದಿ ಭಕ್ತರು ಸಂತ ಲಾರೆನ್ಸ್‌ ಸನ್ನಿಧಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಇಷ್ಟಾರ್ಥ ಸಿದ್ಧಿಗಾಗಿ ಇಲ್ಲಿಗೆ ಆಗಮಿಸಿ ಪ್ರಾರ್ಥಿಸುತ್ತಿದ್ದಾರೆ.

ಟಾಪ್ ನ್ಯೂಸ್

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Brahmavar

Padubidri: ಅಪಘಾತದ ಗಾಯಾಳು ಸಾವು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-wqeqqweqwe

Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.