“ಎಲ್ಲ ಪೌರ ಕಾರ್ಮಿಕರನ್ನು ಖಾಯಂಗೊಳಿಸಲು ಆಗ್ರಹ
ಕುಂದಾಪುರ : ಪೌರ ಕಾರ್ಮಿಕರ ದಿನಾಚರಣೆ
Team Udayavani, Sep 24, 2019, 5:40 AM IST
ಕುಂದಾಪುರ: ಇಡೀ ಪುರಸಭೆಯನ್ನು ಸ್ವತ್ಛ ಹಾಗೂ ಸುಂದರವಾಗಿ ಇಡುವ ಸಲುವಾಗಿ ದಿನವಿಡೀ ನಾವು ಶ್ರಮಿಸುತ್ತೇವೆ. ಆದರೆ 6-7 ವರ್ಷಗಳಿಂದ ಇದೇ ಕೆಲಸ ಮಾಡುತ್ತಿದ್ದರೂ ಇದುವರೆಗೂ ನಮಗೆ ಈ ಕೆಲಸದಲ್ಲಿ ಭದ್ರತೆಯಿಲ್ಲ. ಪೌರ ಕಾರ್ಮಿಕರೊಂದಿಗೆ ಹೊರ ಗುತ್ತಿಗೆಯಲ್ಲಿ ಕೆಲಸ ಮಾಡುತ್ತಿರುವವರನ್ನು ಕೂಡ ಖಾಯಂ ಮಾಡಿದರೆ, ಇನ್ನಷ್ಟು ಒಳ್ಳೆಯ ಕೆಲಸ ಮಾಡಲು ಉತ್ತೇಜನ ಸಿಗುತ್ತದೆ ಎಂದು ಕುಂದಾಪುರ ಪುರಸಭೆಯ ಪೌರ ಕಾರ್ಮಿಕ ಮಿಥುನ್ ಹೇಳಿದರು.
ಅವರು ಸೋಮವಾರ ಕುಂದಾಪುರ ಪುರಸಭೆಯ ವತಿಯಿಂದ ಇಲ್ಲಿನ ಗಾಂಧಿ ಪಾರ್ಕ್ನ ಆವರಣದಲ್ಲಿ ಆಯೋಜಿಸಿದ ಪೌರ ಕಾರ್ಮಿಕರ ದಿನಾಚರಣೆಯಲ್ಲಿ ಸಮ್ಮಾನ ಸ್ವೀಕರಿಸಿ ಮಾತನಾಡಿದರು.
ಈ ಸಮ್ಮಾನ ನನ್ನೊಂದಿಗೆ ಕೆಲಸ ಮಾಡುವ ಎಲ್ಲ ಪೌರ ಕಾರ್ಮಿಕರಿಗೂ ಸಿಕ್ಕ ಗೌರವ. ಮುಂದಿನ ದಿನಗಳಲ್ಲಾದರೂ ಕೆಲಸದೊಂದಿಗೆ ಭದ್ರತೆಯೂ ಸಿಗುವಂತಾಗಲಿ ಎಂದರು.
ಪುರಸಭೆಯ ಮಾಜಿ ಉಪಾಧ್ಯಕ್ಷ ರಾಜೇಶ್ ಕಾವೇರಿ ಮಾತನಾಡಿ, ಇಂದು ಅವರಿಗೆ ರಜೆ ನೀಡಿದ್ದರೂ ಬೆಳಗ್ಗಿನಿಂದ ಇದುವರೆಗೂ ಅವರು ಸ್ವತ್ಛತೆಯ ಕೆಲಸ ಮಾಡಿಯೇ ಈ ಕಾರ್ಯಕ್ರಮಕ್ಕೆ ಬಂದಿದ್ದಾರೆ. ಅವರ ಕರ್ತವ್ಯ ನಿಷ್ಠೆ ಎಲ್ಲರಿಗೂ ಮಾದರಿ ಎಂದರು. ಪುರಸಭೆಯ ಮಾಜಿ ಅಧ್ಯಕ್ಷೆ ವಸಂತಿ ಮೋಹನ್ ಸಾರಂಗ, ಹಾಲಿ ಸದಸ್ಯ ವಿ. ಪ್ರಭಾಕರ ಮಾತನಾಡಿದರು. ಹಿರಿಯ ಪೌರ ಕಾರ್ಮಿಕ ಸತೀಶ್ ಕಾರ್ಯಕ್ರಮ ಉದ್ಘಾಟಿಸಿದರು. ಪುರಸಭೆಯ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪುರಸಭೆಯ ಮಾಜಿ ಅಧ್ಯಕ್ಷೆ ದೇವಕಿ ಸಣ್ಣಯ್ಯ, ಹಾಲಿ ಸದಸ್ಯರು, ಮಾಜಿ ಸದಸ್ಯರು ಉಪಸ್ಥಿತರಿದ್ದರು.
ಸಮ್ಮಾನ ಪೌರ ಕಾರ್ಮಿಕರಾದ ರೇಣುಕಾ ಭಜಂತ್ರಿ, ಮಿಥುನ್, ಪ್ರದೀಪ್ ಅವರನ್ನು ಪುರಸಭೆ ವತಿಯಿಂದ ಸಮ್ಮಾನಿಸಲಾಯಿತು. ಪುರಸಭೆಯ ಪರಿಸರ ಅಭಿಯಂತರ
ಮಂಜುನಾಥ ಶೆಟ್ಟಿ ಪ್ರಸ್ತಾವನೆಗೈದರು. ಸಿಬಂದಿ ಗಣೇಶ್ ಕಾರ್ಯಕ್ರಮ ನಿರ್ವಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
CM Siddaramaiah ಚುನಾವಣೆ ಅನಂತರ ಬಿಜೆಪಿಯ ಭಿನ್ನಮತದ ಮಹಾಸ್ಫೋಟ
CM Siddaramaiah: ಸಿಎಂ,ಡಿಸಿಎಂ ಕಾವೇರಿ ನಿವಾಸದಲ್ಲಿ ಮಹತ್ವದ ಸಭೆ
German ಅಧಿಕಾರಿಗಳ ಜತೆ ಸಂಪರ್ಕ; ಪ್ರಜ್ವಲ್ ಪತ್ತೆ ಮಾಹಿತಿ ಕಲೆ ಹಾಕುತ್ತಿರುವ ಅಧಿಕಾರಿಗಳು
ಅಪ್ರಾಪ್ತರಲ್ಲಿ ಡೋಪಿಂಗ್ ಪತ್ತೆ: ಹೆಚ್ಚಿನ ಬಜೆಟ್ಗೆ ಬೇಡಿಕೆ
Patna; ಸರ್ಕಾರಿ ಗೌರವದೊಂದಿಗೆ ಸುಶೀಲ್ ಮೋದಿ ಅಂತ್ಯ ಸಂಸ್ಕಾರ