ದಿಕ್ಕು ತಪ್ಪಿ ಬಂದ ವೃದ್ಧೆಗೆ ರಕ್ಷಣೆ ನೀಡಿದ ಸಾರ್ವಜನಿಕರು
Team Udayavani, Mar 24, 2018, 6:50 AM IST
ತೆಕ್ಕಟ್ಟೆ: ಇಲ್ಲಿನ ತೆಕ್ಕಟ್ಟೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಮೀಪದ ಅಂಗಡಿಯ ಜಗುಲಿಯಲ್ಲಿ ಅಪರಿಚಿತ ವಯೋವೃದ್ಧೆ ಒಂಟಿಯಾಗಿರುವುದನ್ನು ಕಂಡು ಅನುಮಾನಗೊಂಡ ಸಾರ್ವಜನಿಕರು ಬೇಳೂರು ಸ್ಫೂರ್ತಿಧಾಮದಲ್ಲಿ ದಾಖಲಿಸುವ ಮೂಲಕ ಮಾನವೀಯತೆ ಮೆರೆದ ಘಟನೆ ಮಾ. 22ರಂದು ರಾತ್ರಿ ಗಂಟೆ 7ಕ್ಕೆ ಸಂಭವಿಸಿದೆ.
ಕಳೆದೆರಡು ದಿನಗಳಿಂದಲೂ ಅಂಗಡಿಯ ಜಗುಲಿಯಲ್ಲಿ ಒಂಟಿಯಾಗಿದ್ದ ಗಂಗವ್ವ (70) ಹೆಸರಿನ ವಯೋವೃದ್ಧೆಯೋರ್ವರು ಗೋಕಾಕ್ ಮೂಲದವಳು ಎಂದು ಹೇಳಲಾಗುತ್ತಿದ್ದು ಹಿಂದಿ, ತೆಲುಗು ಹಾಗೂ ಕನ್ನಡವನ್ನು ಮಾತನಾಡಬಲ್ಲ ಇವರು ತನ್ನವರಿಗಾಗಿ ತನ್ನವರ ಬರುವಿಕೆ ನಿರೀಕ್ಷೆಯನ್ನು ವ್ಯಕ್ತಪಡಿಸುತ್ತಿರುವುದನ್ನು ಕಂಡ ಸ್ಥಳೀಯರು ತತ್ಕ್ಷಣವೇ ಕೋಟ ಪೊಲೀಸ್ ಠಾಣೆಯನ್ನು ಸಂಪರ್ಕಿಸಿದರು.ತೆಕ್ಕಟ್ಟೆ ಫ್ರೆಂಡ್ಸ್ನ ಆ್ಯಂಬುಲೆನ್ಸ್ ಮೂಲಕ ಬೇಳೂರು ಸ್ಫೂರ್ತಿಧಾಮದೆಡೆಗೆ ಕೊಂಡೊಯ್ಯುವ ಜತೆಗೆ ವಯೋವೃದ್ಧೆಗೆ ರಕ್ಷಣೆ ನೀಡಿದರು.
ಗಣಪತಿ ಟಿ.ಶ್ರೀಯಾನ್, ಕಿರಣ್ ತೆಕ್ಕಟ್ಟೆ, ಮಹಮದ್ ಆಸಿಫ್, ಮಧುಕರ, ಭಾಸ್ಕರ, ರಾಜು, ರಾಜೀವ ಶೆಟ್ಟಿ, ರಾಜೀವ ಪೂಜಾರಿ, ಸುರೇಶ್, ಭರತ್, ಅರ್ಜುನ್, ಗಣೇಶ್ ಪ್ರಭು, ಬೇಳೂರು ಸ್ಫೂರ್ತಿಧಾಮದ ಜಿಜಿ ಮೊದಲಾದವರು ಸಹಕರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್ ಎಂ. ಪೈ ಬ್ಲಾಕ್ ಇಂದು ಲೋಕಾರ್ಪಣೆ
ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್ ಹೊಂದಿರುವ ಕ್ಯಾನ್ಸರ್ ಚಿಕಿತ್ಸೆ ಕ್ರಮ
Manipal; ಕೌಶಲಾಧಾರಿತ ಮಾನವ ಶಕ್ತಿ ಇದ್ದರೆ ಸರ್ವ ಸಾಧನೆ: ಕೆ.ವಿ. ಕಾಮತ್
Karkala ಡಾ| ಟಿಎಂಎ ಪೈ ರೋಟರಿ ಆಸ್ಪತ್ರೆಗೆ ಡಯಾಲಿಸಿಸ್ ಯಂತ್ರ ಕೊಡುಗೆ
ಎ. 20ರ ಭಾರೀ ಗಾಳಿ – ಮಳೆ: ರೈತರ 21 ಹೆಕ್ಟೇರ್ ಅಡಿಕೆ ತೋಟಕ್ಕೆ ಹಾನಿ
MUST WATCH
ಹೊಸ ಸೇರ್ಪಡೆ
Neha ಹತ್ಯೆ ಪ್ರಕರಣ ಮುಚ್ಚಿ ಹಾಕುವ ಯತ್ನ ನಡೆಯುತ್ತಿದೆ: ಸರಕಾರದ ವಿರುದ್ಧ ಆರ್.ಅಶೋಕ್ ಕಿಡಿ
Fake Video: ಅಮಿತ್ ಶಾ ನಕಲಿ ವಿಡಿಯೋ ಪ್ರಕರಣ… ಓರ್ವ ಬಂಧನ, 3 ವಿಪಕ್ಷ ನಾಯಕರಿಗೆ ನೊಟೀಸ್
Sandalwood: ಇದು ನಿಜಕ್ಕೂ ಫ್ಯಾಮಿಲಿ ಡ್ರಾಮಾ!
Lok Sabha Polls: ಈ ಬಾರಿಯ ಲೋಕಸಭಾ ಚುನಾವಣೆಗೆ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲ್ಲ… ವರದಿ
Sandalwood: ಧೀರೇನ್ ರೀ ಇಂಟ್ರೊಡಕ್ಷನ್