ಸಚ್ಚೇರಿಪೇಟೆಯಲ್ಲೊಬ್ಬ ಭಗೀರಥ
Team Udayavani, Mar 23, 2019, 12:30 AM IST
ಬೆಳ್ಮಣ್: ಸಾವಿರಗಟ್ಟಲೆ ಅಡಿಗಳಷ್ಟು ಬೋರ್ವೆಲ್ ಕೊರೆದರೂ ನೀರು ಸಿಗದ ಈ ಬರಗಾಲದಲ್ಲಿ ಸಚ್ಚೇರಿಪೇಟೆಯ ಭುವನೇಶ ಗೌಡ ತನ್ನ 5 ಸೆಂಟ್ಸ್ ಜಾಗದಲ್ಲಿ ದಿನಂಪ್ರತಿ ಸಂಜೆ 5.30ರಿಂದ 7.30ರವರೆಗೆ ಬಾವಿ ತೋಡಿ 16 ದಿನಗಳಲ್ಲಿ ನೀರು ಪಡೆದಿದ್ದಾರೆ.
ಹಗಲಲ್ಲಿ ಕಾಂಟ್ರಾಕ್ಟ್ ಕೆಲಸ ಮಾಡಿ ಪ್ರತೀ ದಿನ ರಾತ್ರಿ ಮಣ್ಣು ಅಗೆದು ಒಟ್ಟು 18 ಅಡಿ ಬಾವಿ ತೋಡಿ ಇದೀಗ ಎರಡು ಅಡಿ ನೀರು ಪಡೆದು ಪಕ್ಕದ ಮೂರು ಮನೆಗೂ ಜಲಪೂರೈಕೆ ಮಾಡುತ್ತಿದ್ದಾರೆ. ಇವರ ಸಾಧನೆ ಮೆಚ್ಚುಗೆಗೆ ಕಾರಣವಾಗಿದೆ.
32ರ ಹರೆಯದ ಭುವನೇಶ ಗೌಡ ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಪಾವಂಜಿಗುಡ್ಡೆ ಎಂಬಲ್ಲಿ ವಾಸಿಸುತ್ತಿದ್ದು ಹಲವಾರು ವರ್ಷಗಳಿಂದ ನೀರಿನ ತೊಂದರೆ ಅನುಭವಿಸುತ್ತಿದ್ದರು. ಈ ಪರಿಸರದಲ್ಲಿ ಸರಕಾರಿ ಸೈಟುಗಳ ಜನರೂ ನೀರಿನ ತೊಂದರೆ ಅನುಭವಿಸಿ ಜಾಗ ಮಾರಲಾರಂಭಿಸಿದಾಗ ಭುವನೇಶರು ತಾನೂ ಒಂದು ಸೈಟು ಖರೀದಿಸಿದ್ದರು. ಬಳಿಕ ನೀರಿನ ಸಮಸ್ಯೆ ಇದ್ದರಿಂದ ಸಂಜೆ ವೇಳೆ ಬಾವಿ ತೋಡಲು ಶುರುಮಾಡಿದ್ದರು.
ಬಾಲ್ಯದ ಪಾಠ ಸಹಕಾರಿಯಾಯಿತು
ಈ ಹಿಂದೆ ಶಾಲಾ ರಜಾ ದಿನಗಳಲ್ಲಿ ಬಾವಿ ತೋಡುವ ಕೆಲಸಕ್ಕೆ ಚೆರಿಯಮೋನು ಎಂಬ ಗುತ್ತಿಗೆದಾರರ ಬಳಿ ಕೆಲಸ ಮಾಡಿದ್ದ ಅನುಭವವೇ ಇಲ್ಲಿ ಸಹಕಾರಿಯಾಯಿತು ಎನ್ನುವ ಭುವನೇಶ ಇದೀಗ ನಮ್ಮ ಕುಡಿಯುವ ನೀರಿನ ಸಮಸ್ಯೆ ದೂರವಾಗಿದೆ ಎನ್ನುವುದರ ಜತೆ ಇತರ ಎರಡು-ಮೂರು ಮನೆಗಳಿಗೂ ನೀರು ನೀಡುವ ಹೆಮ್ಮೆ ಇದೆ ಎನ್ನುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್
Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ
Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ
BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ
Chikkaballapur: 13.63 ಕೋಟಿ ರೂ. ಚುನಾವಣಾ ಅಕ್ರಮ ಮದ್ಯ ಜಪ್ತಿ!