ಹರಿಹರ ಕ್ಷೇತ್ರದಲ್ಲಿ ನೀರಿನ ಕೊರತೆ ಇಲ್ಲ
Team Udayavani, Jun 8, 2019, 6:00 AM IST
ಉಡುಪಿ: ಹಾವಂಜೆ ಗ್ರಾಮದ ಕೀಳಿಂಜೆಯ ಶ್ರೀ ಮಹಾಲಿಂಗೇಶ್ವರ ಮಹಾವಿಷ್ಣು ದೇವಸ್ಥಾನದ ಕೆರೆಯಲ್ಲಿ ವರ್ಷದ ಎಲ್ಲ ತಿಂಗಳುಗಳಲ್ಲಿ ನೀರು ಕಂಡುಬರುತ್ತದೆ. ಈ ಬಾರಿ ಎಲ್ಲ ಕಡೆಯ ಕೆರೆ, ಬಾವಿಗಳು ಬತ್ತಿ ಹೋದರೂ ಇಲ್ಲಿ ಮಾತ್ರ ಜಲಸಮೃದ್ಧಿ ಇದೆ.
ಇದೇ ಸ್ಥಳದ ಮೇಲಿನ ಗುಡ್ಡದಿಂದ ನೀರು ಹರಿದುಬರುತ್ತಿದೆ. ಇದರಿಂದಲೇ ಕೆರೆ ಒಣಗದೆ ನೀರಿನಿಂದ ಕೂಡಿದೆ. ಗುಡ್ಡದಲ್ಲಿ ಅರಣ್ಯ ಇಲಾಖೆಯವರು ಅಕೇಶಿಯಾ ಕಾಡು ಬೆಳೆಸಿದರೂ ಪ್ರಕೃತಿ ಇದುವರೆಗೆ ಮುನಿಸಿಕೊಳ್ಳದೆ ಜಲರಾಶಿಯನ್ನು ಕೊಡುತ್ತಿದೆ. ವಿಶೇಷವೆಂದರೆ ಅಕ್ಕಪಕ್ಕದಲ್ಲಿ ನೀರಿನ ಕೊರತೆ ಇದ್ದರೂ ಇಲ್ಲಿ ಮಾತ್ರ ಕೊರತೆ ಆಗಿಲ್ಲ.
ಸ್ಥಳೀಯರು, ಸಮಾಜಾಸಕ್ತರು ಸೇರಿ ಅರ್ಚಕ ಶ್ರೀಕಾಂತ್ ಭಟ್ಟರಿಂದ ಪೂಜೆ ಸಲ್ಲಿಸಿ, ಮಳೆಗಾಗಿ ಪ್ರಾರ್ಥಿಸಿದರು. ಕೆರೆಗೆ ಗಂಗಾರತಿ ಮಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ
Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ
Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್
Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್
Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್ ಕೋಡ್ ಅಂಟಿಸಿದ್ದ ಉದ್ಯಮಿ ಸೆರೆ