ಮುಂಡ್ಕೂರು ಗ್ರಾ.ಪಂ.ನಿಂದ ಮಳೆಗಾಲದ ಮುನ್ನೆಚ್ಚರಿಕೆ
ಚರಂಡಿ ಹೂಳೆತ್ತಿ ನೀರಿನ ಸರಾಗ ಹರಿವಿಗೆ ಯೋಜನೆ
Team Udayavani, Jun 8, 2019, 6:00 AM IST
ಬೆಳ್ಮಣ್: ಮುಂಡ್ಕೂರು ಗ್ರಾ.ಪಂ. ಇದೀಗ ಮಳೆಗಾಲದ ಸಿದ್ಧತೆಯಲ್ಲಿದ್ದು, ಹೂಳು ತುಂಬಿರುವ ಚರಂಡಿಗಳ ಸ್ವಚ್ಛತೆಗೆ ಮುಂದಾಗಿದೆ.
ಇಲ್ಲಿನ ಪೇಟೆಯ ಡಾ. ಬಾಲಕೃಷ್ಣ ಆಳ್ವರ ಶಾಪ್ನಿಂದ ನವಭಾರತ್ ಹೊಟೇಲ್ ವರೆಗಿನ ರಸ್ತೆಯ ಇಕ್ಕೆಲಗಳ ಚರಂಡಿ ಮಣ್ಣಿನಿಂದ ತುಂಬಿಹೋಗಿದ್ದು, ಮಳೆಗಾಲದಲ್ಲಿ ನೀರು ರಸ್ತೆ ಮೇಲೆ ಹರಿದು ಅಂಗಡಿಯೊಳಗೆ ಪ್ರವೇಶಿಸುತ್ತಿತ್ತು. ಶುಕ್ರವಾರ ಪಂಚಾಯತ್ ವತಿಯಿಂದ ಈ ಚರಂಡಿಗಳ ಹೂಳು ತೆಗೆಯಲಾಗಿದ್ದು, ನೀರಿನ ಸರಾಗ ಹರಿವಿಗೆ ವ್ಯವಸ್ಥೆ ಕಲ್ಪಿಸಲಾಗಿದೆ.
ಮುಂಡ್ಕೂರು ಪೇಟೆ ರಸ್ತೆ ಮುಳುಗಿತ್ತು!
ಕಳೆದ ವರ್ಷ ಸುರಿದ ಧಾರಾಕಾರ ಮಳೆಗೆ ಮುಂಡ್ಕೂರು ಪೇಟೆಯಲ್ಲಿ ಚರಂಡಿಗಳಲ್ಲಿ ಹೂಳು ತುಂಬಿದ್ದರಿಂದ ನೀರು ಹರಿಯದೆ ಪೇಟೆ ನೀರಿನಿಂದಾವೃತಗೊಂಡಿತ್ತು. ಪ್ರತಿ ಬಾರಿ ಸಮಸ್ಯೆ ಕಾಡುತ್ತಿದ್ದ ಹಿನ್ನೆಲೆಯಲ್ಲಿ ಹೂಳೆತ್ತಲು ಸಾರ್ವಜನಿಕರು ಆಗ್ರಹಿಸಿದ್ದರು.
ಇನ್ನು, ಜಾರಿಗೆಕಟ್ಟೆ, ಸಂಕಲಕರಿಯ, ಸಚ್ಚೇರಿಪೇಟೆಗಳಲ್ಲಿಯೂ ಚರಂಡಿಯಲ್ಲಿ ಹೂಳು ತುಂಬಿ ಮಳೆಗಾಲಕ್ಕೆ ರಸ್ತೆಯ ಮೇಲೆಯೇ ನೀರು ಹರಿಯುವ ಸಾಧ್ಯತೆ ಇದೆ. ಲೋಕೋಪಯೋಗಿ ಇಲಾಖೆಗೆ ಸಂಬಂಧಪಟ್ಟ ಚರಂಡಿಯಾಗಿದ್ದರೂ ಪಂಚಾಯತ್ ಆಡಳಿತ ತಾತ್ಕಾಲಿಕ ಪರಿಹಾರ ನೀಡಬೇಕೆಂದು ಜನ ಆಗ್ರಹಿಸಿದ್ದಾರೆ.
ಚರಂಡಿ ಹೂಳೆತ್ತಲಾಗುತ್ತಿದೆ
ಮಳೆಗಾಲದ ಅನಾಹುತಗಳಿಗೆ ಮುನ್ನೆಚ್ಚರಿಕೆಯ ಕ್ರಮವಾಗಿ ಚರಂಡಿ ಹೂಳೆತ್ತುವ ಕೆಲಸ ನಡೆಸಲಾಗುತ್ತಿದೆ. ಈಗಾಗಲೇ ಈ ಜಾಗದಲ್ಲಿ ಮೋರಿ ನಿರ್ಮಾಣಗೊಂಡಿದ್ದರೂ ಭಾರೀ ಮಳೆಗೆ ಹೂಳು ತುಂಬುತ್ತದೆ. ಜನರಿಗೆ ತೊಂದರೆಯಾಗಬಾರದೆಂಬ ಉದ್ದೇಶದಿಂದ ಚರಂಡಿ ಹೂಳೆತ್ತಲಾಗುತ್ತಿದೆ.
-ಶಶಿಧರ ಆಚಾರ್ಯ,
ಗ್ರಾ.ಪಂ. ಪಿಡಿಒ
ಕೆಲಸ ನಡೆಯುತ್ತಿದೆ ಮುಂಡ್ಕೂರು ಗ್ರಾ.ಪಂ. ಇತರೆಡೆಗಳಲ್ಲಿರುವ ಸಮಸ್ಯೆಗಳನ್ನೂ ಪರಿಹರಿಸಲಾಗುವುದು. ಮುನ್ನೆಚ್ಚರಿಕೆ ಕ್ರಮವಾಗಿ ಕೆಲಸ ನಡೆಯುತ್ತಿದೆ. ಮುಂದೆ ಶಾಶ್ವತ ಪರಿಹಾರ ಕಲ್ಪಿಸಲಾಗುವುದು.
-ಶುಭಾ ಪಿ.ಶೆಟ್ಟಿ ,
ಗ್ರಾ.ಪಂ.ಅಧ್ಯಕ್ಷೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ
Kapu Assembly constituency: ನಕಲಿ ಮತದಾನ;ಆರೋಪ
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ