ಉಚ್ಚಿಲ: ಅಂಗಡಿಗಳಲ್ಲಿ ಸರಣಿ ಕಳವು
Team Udayavani, Nov 2, 2022, 12:24 AM IST
ಪಡುಬಿದ್ರಿ: ಉ.ರಾ. ಹೆದ್ದಾರಿ 66ರ ಬಳಿಯ ಅಂಗಡಿಗಳಿಗೆ ನುಗ್ಗಿದ ಕಳ್ಳ ಶಟರ್ ಬೀಗ ಮುರಿದು, ಕಳ್ಳತನ ನಡೆಸಿದ ಘಟನೆ ಮಂಗಳವಾರ ಮುಂಜಾವ ಸಂಭವಿಸಿದೆ.
ಹೆಲ್ಮೆಟ್ ಮತ್ತು ಜಾಕೆಟ್ ಧರಿಸಿ ಯುವಕ ಬರುವ ಮತ್ತು ಹೋಗುವ ದೃಶ್ಯ ಸಿಸಿ ಕೆಮರಾದಲ್ಲಿ ಸೆರೆಯಾಗಿದೆ. ಉಚ್ಚಿಲದ ಮಹಮ್ಮದ್ ರಫೀಕ್ ಅವರ ಸೈಬರ್ ಕೆಫೆ, ಹೊಟೇಲ್ ಸ್ಪೈಸ್, ತವಕ್ಕಲ್ ಬೇಕರಿ, ಶಶಿ ಲಂಚ್ ಹೋಮ್ನ ಬೀಗ ಮುರಿದಿರುವ ಕಳ್ಳ ಅಲ್ಲಿರುವ ಚಿಲ್ಲರೆ ಹಣವನ್ನು ಮಾತ್ರ ದೋಚಿ ಪರಾರಿಯಾಗಿದ್ದಾನೆ.
ಲ್ಯಾಪ್ಟಾಪ್ ಒಯ್ಯದ ಕಳ್ಳ
ಬೆಳಗ್ಗೆ ಸುಮಾರು 5 ಗಂಟೆಯ ಸುಮಾರಿಗೆ ಸ್ಕೂಟರಿನಲ್ಲಿ ಬಂದ ಕಳ್ಳ ಶಟರ್ ಮುರಿದು ಒಳಗೆ ಹೊಕ್ಕಿರುವುದು ಬೆಳಕಿಗೆ ಬಂದಿದೆ. ಕಳ್ಳ ಕೇವಲ ಚಿಲ್ಲರೆ ಹಣ ಮಾತ್ರ ಕಳ್ಳತನ ಮಾಡಿದ್ದಾನೆ.
ಸೈಬರ್ನಲ್ಲಿ ಲಕ್ಷಾಂತರ ರೂ. ಮೌಲ್ಯದ ಲ್ಯಾಪ್ಟಾಪ್ ಗಳಿದ್ದರು , ಅದನ್ನು ಆತ ಕದ್ದೊಯ್ದಿಲ್ಲ. ಪಡುಬಿದ್ರಿ ಪೊಲೀಸರು ಘಟನ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ