ಉಡುಪಿ: ಸಾಧಕದ್ವಯರಿಗೆ ಸಮ್ಮಾನ
Team Udayavani, Jul 14, 2017, 3:00 AM IST
ಉಡುಪಿ: ಅದಮಾರು ಹಿರಿಯ ಮಠಾಧೀಶ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರ ಜನ್ಮ ನಕ್ಷತ್ರದ ಪ್ರಯುಕ್ತ ಉಡುಪಿಯ ಪೂರ್ಣಪ್ರಜ್ಞ ಅಡಿಟೋರಿಯಂನಲ್ಲಿ ಶ್ರೀಪಾದರ ಅಭಿಮಾನಿ ಶಿಷ್ಯರಿಂದ ನಿವೃತ್ತ ಪ್ರಾಂಶುಪಾಲರು, ವಿವಿಧ ಸಂಘಟನೆಗಳಲ್ಲಿ ತೊಡಗಿಸಿಕೊಂಡು ಜವಾಬ್ದಾರಿ ಕೆಲಸಗಳನ್ನು ನಿರ್ವಹಿಸಿದ ಪ್ರೊ| ಪಾಡಿಗಾರು ರಾಧಾಕೃಷ್ಣ ಆಚಾರ್ಯ, ಅದಮಾರಿನ ಮೂಲ ಮಠದಲ್ಲಿ ಹಲವಾರು ವರ್ಷಗಳಿಂದ ಕೆಲಸ ಮಾಡಿಕೊಂಡಿದ್ದು ನಾಲ್ವರು ಶ್ರೀಪಾದರ ತಲೆಮಾರನ್ನು ಕಂಡಂತಹ ಹಿರಿಯ ಕಷ್ಟ ಜೀವಿ ಸೇಸು ದೇವಾಡಿಗ ಅವರನ್ನು ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಸಮ್ಮಾನಿಸಿದರು.
ನಿಸ್ವಾರ್ಥ ಮನಸ್ಸಿನಿಂದ ಕೆಲಸ ಮಾಡುವವರು ಇ¨ªಾಗ ಮಾತ್ರ ಯಾವುದೇ ಸಂಸ್ಥೆಯು ಬೆಳೆಯಲು ಸಾಧ್ಯ. ಗುರುಗಳು ಸ್ಥಾಪಿಸಿದ ವಿದ್ಯಾ ಸಂಸ್ಥೆಗಳÇÉಾಗಲಿ, ಪುರಾತನ ಕಾಲದಿಂದ ಮಠಗಳಲ್ಲಿ ನಡೆದುಕೊಂಡು ಬರುತ್ತಿರುವ ಕೆಲಸಗಳನ್ನಾಗಲಿ ದೇವರ ಕಾರ್ಯವೆಂದು ಸ್ವಾರ್ಥ ಮನೋಭಾವನೆ ಇಲ್ಲದೆ ಕೆಲಸ ಮಾಡುತ್ತಿರುವರಿಗೆ ದೇವರ ಶ್ರೀರಕ್ಷೆ ಇರಲಿ. ಅಭಿಮಾನಿ ಶಿಷ್ಯರಾದ ಗೋವಿಂದರಾಜ್, ಜನಾರ್ದನ, ವಿಜಯ ಅವರಿಗೆ ದೇವತಾನುಗ್ರಹವಿದ್ದು ಸಮಾಜಸೇವೆಯಲ್ಲಿ ತೊಡಗಿಸಿಕೊಂಡ ಯೋಗ್ಯ ವ್ಯಕ್ತಿಗಳನ್ನು ಗುರುತಿಸುವ ಕಾರ್ಯ ಅವರಿಂದ ಮುಂದುವರಿಯಲಿ ಎಂದು ಅನುಗ್ರಹಿಸಿದರು.
ಗೋವಿಂದರಾಜ್ ಸ್ವಾಗತಿಸಿ, ಸಮ್ಮಾನ ಪತ್ರ ವಾಚಿಸಿದರು. ವಾಸುದೇವ ರಂಗ ಭಟ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಅತಿಥಿ ಕಲಾವಿದರಿಂದ ಯಕ್ಷಗಾನ ಪ್ರದರ್ಶನ ನಡೆಯಿತು.