ಬೆಳ್ವೆ: ಶ್ರೀ ಶಂಕರನಾರಾಯಣ ದೇಗುಲದಲ್ಲಿ ಕಳವು


Team Udayavani, Jul 14, 2017, 3:20 AM IST

1307sidm1.jpg

ಸಿದ್ದಾಪುರ: ಬೆಳ್ವೆ ಶ್ರೀ ಶಂಕರನಾರಾಯಣ ದೇವಸ್ಥಾನದ ಹೊರ ಪೌಳಿಯ ಬಾಗಿಲು ತೆರೆದು ಒಳ ನುಗ್ಗಿದ ಕಳ್ಳರು ಗರ್ಭಗುಡಿ ಎದುರಿನಲ್ಲಿದ್ದ  ಕಾಣಿಕೆ ಡಬ್ಬಿಯನ್ನು ಕಳವು ಮಾಡಿ ಅಲಾºಡಿ ಮೂರುಕೈ ಬಳಿ ರಸ್ತೆ ಬದಿಯ ಚರಂಡಿಗೆ ಎಸೆದು ಹೋದ ಘಟನೆಯು ಜು. 12ರ ರಾತ್ರಿ ಸಂಭವಿಸಿದೆ.

ಬೆಳ್ವೆ ಪರಿಸರದಲ್ಲಿ  ಜು. 11ರ ರಾತ್ರಿ ಸರಣಿ ಕಳ್ಳತನ ನಡೆದಿದ್ದು, ಈ ಹಿನ್ನೆಲೆಯಲ್ಲಿ ಬೆಳ್ವೆ ಶ್ರೀ ಶಂಕರ ನಾರಾಯಣ ದೇಗುಲದ ಆಡಳಿತ ಮಂಡಳಿ ಮಂಗಳವಾರ ಮಧ್ಯಾಹ್ನ ಕಾಣಿಕೆ ಡಬ್ಬವನ್ನು ತೆರೆದು ಕಾಣಿಕೆ ಯನ್ನು ಹೊರ ತೆಗೆದಿದ್ದರು.ಕಳ್ಳರು ದೇಗುಲದ ಕಾಣಿಕೆ ಡಬ್ಬದಲ್ಲಿ ಹಣ ಇದೆ ಎಂದು ಭಾವಿಸಿ,  ಕಾಣಿಕೆ ಡಬ್ಬವನ್ನು ಕದ್ದು ಹೊತ್ತೂಯ್ದಿ ದ್ದರು.  ಕಾಣಿಕೆ ಡಬ್ಬ ವನ್ನು ಅಲಾºಡಿ ಮೂರುಕೈ ಬಳಿ ದೊಡ್ಡ ಕಲ್ಲಿನಿಂದ ಒಡೆದು, ಹಣವಿಲ್ಲದೇ ಇರುವುದರಿಂದ ಡಬ್ಬ ವನ್ನು ಸ್ಥಳದಲ್ಲಿಯೇ ಎಸೆದು ಪರಾರಿಯಾಗಿದ್ದಾರೆ.

ಹಿಂದಿನ ದಿನ ಸರಣಿ ಕಳ್ಳತನ
ಬೆಳ್ವೆ   ಪರಿಸರದಲ್ಲಿ   ಜು. 11ರ ರಾತ್ರಿ ಸರಣಿ ಕಳ್ಳತನ ನಡೆದಿದೆ. ಕೊಂಜಾಡಿ, ಮರೂರು, ಯಳಂ ತೂರು ದೇಗುಲಗಳಲ್ಲಿ ಸರಣಿ ಕಳ್ಳತನ ನಡೆದ ಮರುದಿನ ಕೂಡ ಅದೇ ಪರಿಸರದ ಬೆಳ್ವೆ ಶ್ರೀ ಶಂಕರ ನಾರಾಯಣ  ದೇವಸ್ಥಾನದಲ್ಲಿ   ಕಳ್ಳತನ ನಡೆದಿದೆ.  ಕಳ್ಳರು ಬೆಳ್ವೆ ಪರಿಸರದಲ್ಲಿ ಇದ್ದುಕೊಂಡೇ ದೇವಸ್ಥಾನಗಳ ಮೇಲೆ ಗುರಿ ಇಟ್ಟುಕೊಂಡು ಮರುದಿನ ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ  ಕಳವು ನಡೆಸಿದ್ದಾರೆ ಎನ್ನುವುದು ಸ್ಥಳೀಯರ ಅಭಿಪ್ರಾಯ.

ಕಳೆದ ವರ್ಷ ಕೂಡ ಕಳವು 
ಬೆಳ್ವೆ ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ಕಳೆದ ವರ್ಷ ಜೂ. 11ರಂದು ಕಳ್ಳತನ ನಡೆದಿದೆ. ದೇಗುಲಕ್ಕೆ ನುಗ್ಗಿದ ಕಳ್ಳರು ಬೆಳ್ಳಿಯ ಎರಡು ಕಾಲುದೀಪಗಳು, ಬೆಳ್ಳಿ ಹರಿವಾಣ, ಉತ್ಸವಮೂರ್ತಿ ಮುಖವಾಡ, ಬೆಳ್ಳಿ ಪ್ರಭಾವಳಿ, ಅಮ್ಮನವರ ಮೂರ್ತಿಯ ಚಿನ್ನದ ಪದಕ ಸಹಿತ ಅಪಾರ ಮೌಲ್ಯದ ಸೊತ್ತುಗಳ ಕಳವು ನಡೆಸಿದ್ದರು.

ಸಿಸಿ ಕೆಮರಾದಲ್ಲಿ ಸೆರೆ
ಬೆಳ್ವೆ ಪರಿಸರದಲ್ಲಿ ಜು. 11 ಮತ್ತು 12ರ ರಾತ್ರಿ ನಡೆಸಿರುವ ಸರಣಿ ಕಳ್ಳತನದ ಬಗ್ಗೆ ಮರೂರು ಶ್ರೀ ದುರ್ಗಾಪರಮೇಶ್ವರಿ ಹಾಗೂ ಬೆಳ್ವೆ ಶ್ರೀ ಶಂಕರನಾರಾಯಣ ದೇವಸ್ಥಾನ ದಲ್ಲಿರುವ ಸಿಸಿ ಕೆಮರಾ ದಲ್ಲಿ ಕೃತ್ಯ ಸೆರೆಯಾಗಿದ್ದು, ಎರಡೂ ಕಡೆ ಒಂದೇ ಗ್ಯಾಂಗಿನವರು ನಡೆಸಿರುವ  ಬಗ್ಗೆ  ಶಂಕೆ ವ್ಯಕ್ತವಾಗಿದೆ.  ಈ ಎರಡು ದೇವಸ್ಥಾನಗಳಲ್ಲಿಯೂ ಇಬ್ಬರು ವ್ಯಕ್ತಿಗಳು ಮುಖಕ್ಕೆ ಮುಸುಕು, ಕೈ ಹಾಗೂ ಕಾಲಿಗೆ ಸಾಕ್ಸ್‌ ಹಾಕಿ ಕೊಂಡು ಕಳ್ಳತನ ನಡೆಸಿದ್ದಾರೆ. ಹೆಬ್ರಿ ಹಾಗೂ ಕಾರ್ಕಳದಲ್ಲಿ  ನಡೆದಿರುವ ಕಳ್ಳತನಕ್ಕೂ ಇಲ್ಲಿನ ಕಳವಿಗೂ ಸಾಮ್ಯತೆ ಇದೆ ಎಂದು ಉನ್ನತ ಮೂಲದ ಮಾಹಿತಿಯಿಂದ ತಿಳಿದು ಬಂದಿದೆ.ಕಳ್ಳತನ ಕುರಿತು ಶಂಕರನಾರಾಯಣ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ದೇಗುಲಕ್ಕೆ ಭೇಟಿ ನೀಡಿ, ದೇಗುಲದ ಆಡಳಿತ ಮಂಡಳಿ, ಅರ್ಚಕರು, ಸ್ಥಳೀಯರಿಂದ ಮಾಹಿತಿ ಪಡೆದು ಪರಿಶೀಲನೆ ನಡೆಸಿದ್ದಾರೆ.

ಟಾಪ್ ನ್ಯೂಸ್

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

1-wwewqe

Archery World Cup: ಭಾರತದ ರಿಕರ್ವ್‌ ತಂಡಕ್ಕೆ 14 ವರ್ಷಗಳ ಬಳಿಕ ಬಂಗಾರ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್ ವಾಹನ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

Kundapura ಕಾರು ಡಿವೈಡರ್‌ ಏರಿ ಪಲ್ಟಿ; ಮೂವರಿಗೆ ಗಾಯ

Kundapura ಕಾರು ಡಿವೈಡರ್‌ ಏರಿ ಪಲ್ಟಿ; ಮೂವರಿಗೆ ಗಾಯ

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Brahmavar

Padubidri: ಅಪಘಾತದ ಗಾಯಾಳು ಸಾವು

Uppunda ಡಿವೈಡರ್‌ಗೆ ಬೊಲೇರೊ ವಾಹನ ಢಿಕ್ಕಿ: ಓರ್ವ ಸಾವು; ಐವರಿಗೆ ಗಾಯ

Uppunda ಡಿವೈಡರ್‌ಗೆ ಬೊಲೇರೊ ವಾಹನ ಢಿಕ್ಕಿ: ಓರ್ವ ಸಾವು; ಐವರಿಗೆ ಗಾಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

1-wc

Women’s T20; ಬಾಂಗ್ಲಾದೇಶ ವಿರುದ್ಧ ಭಾರತಕ್ಕೆ 44 ರನ್‌ ಜಯ

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.