Udupi: ಬ್ಯಾಂಕ್, ವಿಮಾ ಕಂಪೆನಿಯಿಂದ ಕಳವಿಗೆ ಯತ್ನ
Team Udayavani, Feb 26, 2024, 9:52 PM IST
ಉಡುಪಿ: ಶನಿವಾರ ಹಾಗೂ ರವಿವಾರ ರಜೆ ಇದ್ದ ಕಾರಣ ನಗರದ ಎರಡು ಬ್ಯಾಂಕ್ಗಳಲ್ಲಿ ಸರಣಿ ಕಳವು ಯತ್ನ ನಡೆದ ಘಟನೆ ನಡೆದಿದೆ. 80 ಬಡಗುಬೆಟ್ಟು ಗ್ರಾಮದ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್ನಲ್ಲಿ ಫೆ.24ರಿಂದ 26ರ ನಡುವೆ ಕಳ್ಳತನಕ್ಕೆ ಯತ್ನ ನಡೆದಿದೆ.
ಕಳ್ಳರು ಬ್ಯಾಂಕಿನ ಪೂರ್ವ ಬದಿಯ ಕಿಟಕಿಯ 4 ಸರಳುಗಳನ್ನು ತುಂಡು ಮಾಡಿ, ಒಳ ಪ್ರವೇಶಿಸಿ ಒಳಗಿದ್ದ ಗೋದ್ರೇಜ್ ಕಪಾಟು, ಕ್ಯಾಶ್ ಕೌಂಟರ್ನಲ್ಲಿದ್ದ ವಸ್ತುಗಳನ್ನು ಚಲ್ಲಾಪಿಲ್ಲಿ ಮಾಡಿರುವುದು ಕಂಡುಬಂದಿದೆ.
ಘಟನೆ – 2
ಮೂಡನಿಡಂಬೂರು ಗ್ರಾಮದ ನ್ಯಾಷನಲ್ ಇನ್ಶೂರೆನ್ಸ್ ಕಂಪೆನಿ ಕಚೇರಿಯಲ್ಲಿ ಫೆ.23ರಿಂದ ಫೆ.26ರ ನಡುವೆ ಕಳವಿಗೆ ಯತ್ನಿಸಿಲಾಗಿದೆ.
ಕಳ್ಳರು ಕಚೇರಿಯ ಕಿಟಕಿಯನ್ನು ಮುರಿದು ಒಳಗೆ ಪ್ರವೇಶಿಸಿ ಡ್ರಾವರ್ ಮತ್ತು ಕಪಾಟನ್ನು ತೆರೆಯಲು ಪ್ರಯತ್ನಿಸಿದ್ದಾರೆ. ಎರಡೂ ಪ್ರಕರಣಗಳು ಉಡುಪಿ ನಗರ ಠಾಣೆಯಲ್ಲಿ ದಾಖಲಾಗಿವೆ. ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದು, ಕಳ್ಳರ ಪತ್ತೆಗೆ ಬಲೆ ಬೀಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ
Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!
Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ
Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ
Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !