KYC ಅಪ್ಡೇಟ್ ಮಾಡಲು ಬಂದ ಲಿಂಕ್ ಕ್ಲಿಕ್ ಮಾಡಿ ಹಣ ಕಳೆದುಕೊಂಡ ಪರ್ಕಳದ ವ್ಯಕ್ತಿ
ಅನಾಮಧೇಯ ಸಂದೇಶದ ಮೇಲೆ ಇರಲಿ ಎಚ್ಚರ
Team Udayavani, Aug 22, 2022, 2:36 PM IST
ಉಡುಪಿ : ಕೆವೈಸಿ ಅಪ್ಡೇಟ್ ಮಾಡಲು ಅನಾಮಧೇಯ ಸಂದೇಶ ಬಂದಿದ್ದು, ಅದರಲ್ಲಿದ್ದ ಲಿಂಕ್ ಅನ್ನು ಕ್ಲಿಕ್ ಮಾಡಿದ ವ್ಯಕ್ತಿಯೊಬ್ಬರು ಸಾವಿರಾರು ರೂ. ಕಳೆದುಕೊಂಡ ಘಟನೆ ನಡೆದಿದೆ.
ಪರ್ಕಳದ ನಿವಾಸಿ ಸುಬ್ರಹ್ಮಣ್ಯ ಕೃಷ್ಣ ನಾಯ್ಕ ಅವರ ಮೊಬೈಲಿಗೆ ಕೆವೈಸಿ ಅಪ್ಡೇಟ್ ಮಾಡಲು ಸಂದೇಶವೊಂದು ಬಂದಿತ್ತು. ಈ ಸಂದೇಶವನ್ನು ಬ್ಯಾಂಕ್ನವರೇ ಕಳುಹಿಸಿರಬಹುದು ಎಂದು ತಿಳಿದ ಅವರು ಆ ಲಿಂಕ್ ಅನ್ನು ಓಪನ್ ಮಾಡಿ ಓಟಿಪಿಯನ್ನು ಅಪ್ಡೇಟ್ ಮಾಡಿದ ತತ್ಕ್ಷಣ ಸುಬ್ರಹ್ಮಣ್ಯ ಕೃಷ್ಣ ನಾಯ್ಕ ಅವರ ಈಶ್ವರ ನಗರ ಮಣಿಪಾಲ ಶಾಖೆಯ ಎಸ್ಬಿಐ ಖಾತೆಯಿಂದ 81,001 ರೂ., ಎಸ್ಬಿಐ ಪರ್ಕಳ ಬ್ಯಾಂಚ್ ಖಾತೆಯಿಂದ 12,803 ರೂ. ಸಹಿತ ಒಟ್ಟು 93,804 ರೂ. ಹಣ ಕಡಿತಗೊಂಡಿದೆ.
ಯಾರೋ ಅಪರಿಚಿತ ವ್ಯಕ್ತಿ ಬ್ಯಾಂಕ್ ಅಧಿಕಾರಿ ಎಂದು ನಂಬಿಸಿ ಹಣವನ್ನು ಆನ್ಲೈನ್ ಮೂಲಕ ವರ್ಗಾವಣೆ ಮಾಡಿಕೊಂಡು ನಷ್ಟ ಉಂಟು ಮಾಡಿದ್ದಾನೆ ಎಂದು ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ :ಶಿಕ್ಷಣ ಸಾಮಾಜಿಕ ಪ್ರಜ್ಞೆಯನ್ನು ಮೂಡಿಸುತ್ತದೆ: ಡಾ. ಕೊಟ್ಟೂರು ಮಹಾಸ್ವಾಮಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಬಿಗ್ಬಾಸ್ ವಿನ್ನರ್ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸುತ್ತಾರೆ: ಮಾಜಿ ಸ್ಪರ್ಧಿ
Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು
T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ