ಹಳ್ಳಿಹೊಳೆ: ಬಾಚುಗುಳಿ ಕೊರಗ ಕಾಲನಿಗೆ ಡಿಸಿ ಭೇಟಿ
Team Udayavani, Sep 26, 2018, 1:45 AM IST
ಸಿದ್ದಾಪುರ: ಕುಂದಾಪುರ ತಾ| ಹಳ್ಳಿಹೊಳೆ ಗ್ರಾ.ಪಂ. ವ್ಯಾಪ್ತಿಯ ಕಮಲಶಿಲೆ ಗ್ರಾಮದ ಬಾಚುಗುಳಿ ಕೊರಗ ಕಾಲನಿಗೆ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಅವರು ಭೇಟಿ ನೀಡಿ ಕೊರಗರ ಅಹವಾಲುಗಳನ್ನು ಸ್ವೀಕರಿಸಿದರು. ಮೂಲ ಸೌಕರ್ಯಗಳಾದ ಕುಡಿಯುವ ನೀರು, ರಸ್ತೆ ಹಾಗೂ ಮನೆ ಮಂಜೂರಾತಿ ಬಗ್ಗೆ ಸೂಚಿಸಿದರು. ಕುಡಿಯುವ ನೀರಿಗಾಗಿ ರೂ. 10 ಲಕ್ಷ ಮಂಜೂರಾಗಿದ್ದು ಅದರ ಕಾಮಗಾರಿ ಕೂಡಲೆ ನಿರ್ವಹಿಸುವಂತೆ ಸೂಚಿಸಿದರು. ಈಗಾಗಲೆ 3 ಕುಟುಂಬಗಳಿಗೆ ಮನೆ ಮಂಜೂರಾತಿ ಆಗಿದ್ದು, ಉಳಿದ 4 ಕುಟುಂಬಗಳಿಗೆ ಮನೆ ಮಂಜೂರಾತಿ ಮಾಡುವಂತೆ ಐಟಿಡಿಪಿ ಇಲಾಖೆಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಅವರೊಂದಿಗೆ ಜಿ. ಪಂ. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶಿವಾನಂದ ಕಾಪಶಿ, ಐಟಿಡಿಪಿ ಇಲಾಖೆ ಅಧಿಕಾರಿ ವಿಶ್ವನಾಥ, ಕುಂದಾಪುರ ತಾ. ಪಂ. ಕಾರ್ಯನಿರ್ವಾಣಾಧಿಕಾರಿ ಕಿರಣ್ ಪಡ್ನೇಕರ್, ಬೈಂದೂರು ತಹಶೀಲ್ದಾರ್ ಕಿರಣ ಗೌರಯ್ಯ, ಕೆಆರ್ಐಡಿಸಿ ನ ಇಇಕೆಎಸ್ ಹೆಪಸೂರ, ಎಇ ದಿನೇಶ, ಅರಣ್ಯಾಧಿಕಾರಿಗಳು, ಪೊಲೀಸ್ ಇನ್ಸ್ ಪೆಕ್ಟರ್, ಕಂದಾಯ ಇಲಾಖೆಯ ಅಧಿಕಾರಿಗಳು, ಪಿಡಿಒ ಅಧಿಕಾರಿಗಳು, ಆಹಾರ ಇಲಾಖೆಯವರು, ಗ್ರಾ. ಪಂ.ನ ಸದಸ್ಯರು, ಸಿಬಂದಿ ಉಪಸ್ಥಿತರಿದ್ದರು.