ಸೆ. 27ರಿಂದ ಕುಂದಾಪುರದಲ್ಲಿ ಯಕ್ಷದಶಮಿ
Team Udayavani, Sep 26, 2018, 1:50 AM IST
ಕುಂದಾಪುರ: ಯಕ್ಷಸೌರಭ ಪ್ರವಾಸಿ ಮೇಳ ಕುಂದಾಪುರ ಇವರಿಂದ ಯಕ್ಷದಶಮಿ 2018 ಯಕ್ಷೋತ್ಸವ ಪೌರಾಣಿಕ ಹಬ್ಬ ಸೆ. 27ರಿಂದ ಅ. 6ರ ವರೆಗೆ ಜೂನಿಯರ್ ಕಾಲೇಜು ಪಕ್ಕದ ರೋಟರಿ ಲಕ್ಷ್ಮೀ ನರಸಿಂಹ ಕಲಾಮಂದಿರದಲ್ಲಿ ನಡೆಯಲಿದೆ. ಸೆ.27ರಂದು ವಕೀಲ ಎ.ಎಸ್.ಎನ್. ಹೆಬ್ಟಾರ್ ಉದ್ಘಾಟಿಸಿ, ಉದ್ಯಮಿ ಆನಂದ ಸಿ. ಕುಂದರ್ ಅಧ್ಯಕ್ಷತೆ ವಹಿಸಲಿದ್ದಾರೆ. ಉದ್ಯಮಿ ಕೃಷ್ಣಮೂರ್ತಿ ಮಂಜ ಮಾರಣಕಟ್ಟೆ, ರಂಗಸ್ಥಳ ಫೌಂಡೇಶನ್ ಅಧ್ಯಕ್ಷ ರಾಘವೇಂದ್ರ ಉಡುಪ, ಉದ್ಯಮಿ ಜಿ. ದತ್ತಾನಂದ ಗಂಗೊಳ್ಳಿ, ಸಹನಾ ಗ್ರೂಪ್ಸ್ನ ಸುರೇಂದ್ರ ಶೆಟ್ಟಿ, ಆದರ್ಶ ಆಸ್ಪತ್ರೆಯ ಡಾ| ಆದರ್ಶ ಹೆಬ್ಟಾರ್, ಕಾರ್ತಿಕ್ ಸ್ಕ್ಯಾನಿಂಗ್ ಸೆಂಟರ್ನ ಡಾ| ವೆಂಕಟರಾಮ ಉಡುಪ, ವಕೀಲ ಟಿ.ಬಿ. ಶೆಟ್ಟಿ, ವಕೀಲ ಕೆ. ಕುಸುಮಾಕರ ಶೆಟ್ಟಿ, ವಿದ್ಯುತ್ ಗುತ್ತಿಗೆದಾರ ಕೆ. ಆರ್. ನಾೖಕ್, ಎನ್.ಆರ್.ಆಚಾರ್ಯ ಆಸ್ಪತ್ರೆಯ ಡಾ| ನಾಗಭೂಷಣ್ ಕಾರಂತ್, ಪ.ಪೂ. ಕಾಲೇಜಿನ ಪ್ರಾಂಶುಪಾಲ ಸುಬ್ರಹ್ಮಣ್ಯ ಜಿ. ಜೋಷಿ, ಬಿ.ಆರ್. ರಾಯರ ಶಾಲೆಯ ಮುಖ್ಯೋಪಾಧ್ಯಾಯಿನಿ ಬಿ. ಶಶಿಕಲಾ, ಪತ್ರಕರ್ತ ಜಾನ್ ಡಿ’ಸೋಜಾ ಭಾಗವಹಿಸಲಿದ್ದಾರೆ.
ಅ.6ರಂದು ಸಮಾರೋಪದಲ್ಲಿ ಕಲಾವಿದರಾದ ಐರೋಡಿ ಗೋವಿಂದಪ್ಪ, ಮತ್ಯಾಡಿ ನರಸಿಂಹ ಶೆಟ್ಟಿ, ಸೌಕೂರಿನ ಮಾಜಿ ಧರ್ಮದರ್ಶಿ ರಾಜೀವ ಶೆಟ್ಟಿ ಬಿಜ್ರಿ, ಕಲಾಪೋಷಕ ಉದ್ಯಮಿ ಜಯಸೂರ್ಯ ಪೂಜಾರಿ, ಹವ್ಯಾಸಿ ಕಲಾವಿದ ಸಿರಿ ಭಟ್ ಶಿರಿಯಾರ, ವಿಮರ್ಶಕ ಸುಧಾಕರ ಆಚಾರ್ಯ ಕಂಡ್ಲೂರು, ಸಮಾಜ ಸೇವಕ ಹುಸೈನ್ ಹೈಕಾಡಿ, ಸಮಾಜ ಸೇವಕ ಹೆಗ್ಡೆ ದಾಸ ಖಾರ್ವಿ, ಕಲಾಪೋಷಕರಾದ ಸುಬ್ರಾಯ ಶೇಟ್ ಕಾವ್ರಾಡಿ, ರಘು ಶೇಟ್ ಕಾವ್ರಾಡಿ, ಗಣಪತಿ ಶೇಟ್ ಕಾವ್ರಾಡಿ, ಮಹಾಲಸಾ ಫಾಸ್ಟ್ಫುಡ್ನ ಪುಂಡಲೀಕ ಶ್ಯಾನುಭಾಗ್ ಅವರನ್ನು ಸಮ್ಮಾನಿಸಲಾಗುವುದು. ಚಿನ್ಮಯಿ ಆಸ್ಪತ್ರೆ ಆಡಳಿತ ನಿರ್ದೇಶಕ ಡಾ| ಉಮೇಶ್ ಪುತ್ರನ್ ಅಧ್ಯಕ್ಷತೆ ವಹಿಸಿ, ಉದ್ಯಮಿಗಳಾದ ರಾಜು ಮೆಂಡನ್ ವಂಡ್ಸೆ, ಕೆ.ಕೆ. ಕಾಂಚನ್, ಹರೀಶ್ ಶೆಟ್ಟಿ, ರತ್ನಾಕರ ಪೂಜಾರಿ, ವಾಹನ ಚಾಲಕ ಮಾಲಕ ಸಂಘದ ಅಧ್ಯಕ್ಷ ಲಕ್ಷ್ಮಣ ಶೆಟ್ಟಿ, ಕಂಡ್ಲೂರು ಡಿಸಿಸಿ ಬ್ಯಾಂಕ್ ಮೆನೇಜರ್ ಪ್ರವೀಣ್ ಕುಮಾರ್ ಶೆಟ್ಟಿ, ಶಂಕರ ಶೆಟ್ಟಿ ಮಡಾಮಕ್ಕಿ, ಪ್ರಸಂಗಕರ್ತ ಬಸವರಾಜ್ ಶೆಟ್ಟಿಗಾರ್, ಸಮಾಜ ಸೇವಕ ಶಂಕರ ಅಂಕದಕಟ್ಟೆ ಭಾಗವಹಿಸಲಿದ್ದಾರೆ.
ಪ್ರತಿದಿನ ಸಂಜೆ 6ರಿಂದ ಯಕ್ಷಗಾನ ನಡೆಯಲಿದ್ದು ಸೆ.27ರಂದು ಚಿತ್ರಾಕ್ಷಿ ಕಲ್ಯಾಣ, ಸೆ.28ರಂದು ಶ್ರೀಕೃಷ್ಣ ಪಾರಿಜಾತ, ಸೆ.29ರಂದು ಭೀಷ್ಮ ವಿಜಯ, ಸೆ.30ರಂದು ಮಾರುತಿ ಪ್ರತಾಪ, ಅ.1ರಂದು ಪಾಪಣ್ಣ ವಿಜಯ, ಅ.2ರಂದು ಶ್ವೇತಕುಮಾರ ಚರಿತ್ರೆ, ಅ.3ರಂದು ದಕ್ಷಯಜ್ಞ , ಅ.4ರಂದು ಸುದರ್ಶನ ವಿಜಯ, ಅ. 5ರಂದು ಬ್ರಹ್ಮಕಪಾಲ, ಅ.6ರಂದು ಕದಂಬ ಕೌಶಿಕೆ ಪ್ರದರ್ಶನ ನಡೆಯಲಿದೆ ಎಂದು ಯಕ್ಷಸೌರಭ ಪ್ರವಾಸಿ ಮೇಳ ಸಂಚಾಲಕ ಮಹಮ್ಮದ್ ಗೌಸ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್ ಎಂ. ಪೈ ಬ್ಲಾಕ್ ಇಂದು ಲೋಕಾರ್ಪಣೆ
ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್ ಹೊಂದಿರುವ ಕ್ಯಾನ್ಸರ್ ಚಿಕಿತ್ಸೆ ಕ್ರಮ
Manipal; ಕೌಶಲಾಧಾರಿತ ಮಾನವ ಶಕ್ತಿ ಇದ್ದರೆ ಸರ್ವ ಸಾಧನೆ: ಕೆ.ವಿ. ಕಾಮತ್
Karkala ಡಾ| ಟಿಎಂಎ ಪೈ ರೋಟರಿ ಆಸ್ಪತ್ರೆಗೆ ಡಯಾಲಿಸಿಸ್ ಯಂತ್ರ ಕೊಡುಗೆ
ಎ. 20ರ ಭಾರೀ ಗಾಳಿ – ಮಳೆ: ರೈತರ 21 ಹೆಕ್ಟೇರ್ ಅಡಿಕೆ ತೋಟಕ್ಕೆ ಹಾನಿ
MUST WATCH
ಹೊಸ ಸೇರ್ಪಡೆ
Prajwal Revanna Case: ಮಾತೃಶಕ್ತಿಗೆ ಅವಮಾನವಾಗೋದನ್ನು ಸಹಿಸಿಕೊಳ್ಳಲ್ಲ: ಅಮಿತ್ ಶಾ
JDS: ಆಶ್ಲೀಲ ವಿಡಿಯೋ ಪ್ರಕರಣ; ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಅಮಾನತು
ಈ ಪೆನ್ಡ್ರೈವ್ನಲ್ಲಿರುವ ವಿಡಿಯೋ ನಿಜ: ನಾನು, ಹೀರೊಯಿನ್ ಸೇರಿ ಮಾಡಿದ ವಿಡಿಯೋ ಇದು; ಪ್ರಥಮ್
Neha ಹತ್ಯೆ ಪ್ರಕರಣ ಮುಚ್ಚಿ ಹಾಕುವ ಯತ್ನ ನಡೆಯುತ್ತಿದೆ: ಸರಕಾರದ ವಿರುದ್ಧ ಆರ್.ಅಶೋಕ್ ಕಿಡಿ
Fake Video: ಅಮಿತ್ ಶಾ ನಕಲಿ ವಿಡಿಯೋ ಪ್ರಕರಣ… ಓರ್ವ ಬಂಧನ, 3 ವಿಪಕ್ಷ ನಾಯಕರಿಗೆ ನೊಟೀಸ್