Udupi: ನಾಗಾರಾಧನೆಯಿಂದ ಸಂಪತ್ತು ವೃದ್ಧಿ: ಕೃಷ್ಣಾಪುರ ಶ್ರೀ

ಕಿದಿಯೂರ್‌ ಹೊಟೇಲ್ಸ್‌ ಅಷ್ಟಪವಿತ್ರ ನಾಗಮಂಡಲೋತ್ಸವ

Team Udayavani, Jan 27, 2024, 12:35 AM IST

UdupiUdupi: ನಾಗಾರಾಧನೆಯಿಂದ ಸಂಪತ್ತು ವೃದ್ಧಿ: ಕೃಷ್ಣಾಪುರ ಶ್ರೀ

ಉಡುಪಿ: ಪರಶುರಾಮ ಸೃಷ್ಟಿಯ ನಾಗಭೂಮಿಯಾದ ಇಲ್ಲಿ ನಾಗಾರಾಧನೆ ಮಾಡಲೇ ಬೇಕಿದೆ. ನಾಗಾರಾಧನೆಯಿಂದ ಸಂತಾನ ಭಾಗ್ಯ, ವ್ಯವಹಾರ ಅಭಿವೃದ್ಧಿ, ರೋಗ ರುಜಿನ ಪರಿಹಾರವಾಗುವುದಲ್ಲದೆ ಸಕಲ ಸಂಪತ್ತು ಲಭಿಸಲಿದೆ ಎಂದು ಶ್ರೀ ವಿದ್ಯಾ ಸಾಗರತೀರ್ಥ ಶ್ರೀಪಾದರು ನುಡಿದರು.

ಕಿದಿಯೂರ್‌ ಹೊಟೇಲ್ಸ್‌ನ ಕಾರಣಿಕ ಶ್ರೀ ನಾಗ ಸಾನ್ನಿಧ್ಯದಲ್ಲಿ ಜ. 31ರಂದು ನಡೆಯಲಿರುವ ತೃತೀಯ ಅಷ್ಟಪವಿತ್ರ ನಾಗಮಂಡಲೋತ್ಸವದ ಪೂರ್ವಭಾವಿಯಾಗಿ ಶುಕ್ರವಾರ ಶ್ರೀ ವಿಶ್ವೇಶತೀರ್ಥ ವೇದಿಕೆಯಲ್ಲಿ ಆಯೋಜಿಸಲಾದ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮ ವನ್ನು ಅವರು ಉದ್ಘಾಟಿಸಿದರು.

ನಿರಂತರವಾಗಿ ಸಮಾಜಮುಖಿ ಕಾರ್ಯವೆಸಗುವ ವ್ಯಕ್ತಿಯ ಸಂಪತ್ತು ವೃದ್ಧಿಯಾದರೆ ಅದು ಪುನಃ ಸಮಾಜಕ್ಕೆ ಹರಿದು ಬರುತ್ತದೆ ಎಂಬುದಕ್ಕೆ ಭುವನೇಂದ್ರರು ಸಾಕ್ಷಿಯಾಗಿದ್ದಾರೆ ಎಂದು ಆಶೀರ್ವಚನ ನೀಡಿದರು.

ಶ್ರೀ ಕುಕ್ಕೆ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನತೀರ್ಥ ಶ್ರೀಪಾದರು ಆಶೀರ್ವಚನ ನೀಡಿ, ಧರ್ಮ- ಕರ್ಮಗಳ ಸಮನ್ವಯ ಕ್ಷೇತ್ರವಾಗಿ ಗುರುತಿಸಿಕೊಂಡ ಈ ಸಾನ್ನಿಧ್ಯದಲ್ಲಿ ನಾಗ ಮಂಡಲ ಸೇವೆಯಿಂದ ಸರ್ವರಿಗೂ ಅನುಗ್ರಹ ಪ್ರಾಪ್ತಿಯಾಗಲಿ ಎಂದರು.

ನಾಗಮಂಡಲೋತ್ಸವ ಆಯೋಜನಾ ಸಮಿತಿ ಗೌರವಾಧ್ಯಕ್ಷ ಡಾ| ಜಿ. ಶಂಕರ್‌ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಗುರ್ಮೆ ಸುರೇಶ್‌ ಶೆಟ್ಟಿ ಶುಭ ಹಾರೈಸಿದರು.

ಕಿದಿಯೂರ್‌ ಹೊಟೇಲ್ಸ್ ನ ಎಂಡಿ ಭುವನೇಂದ್ರ ಕಿದಿಯೂರು, ಉಜ್ವಲ್‌ ಡೆವಲಪರ್ನ ಎಂಡಿ ಪುರುಷೋತ್ತಮ ಪಿ. ಶೆಟ್ಟಿ, ಮಾಜಿ ಶಾಸಕ ಕೆ. ರಘುಪತಿ ಭಟ್‌, ಉದ್ಯಮಿಗಳಾದ ಗೋಪಾಲ ಸಿ. ಬಂಗೇರ, ಸಾಧು ಸಾಲ್ಯಾನ್‌ ಮಲೆೆ³, ಆದರ್ಶ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ| ಜಿ.ಎಸ್‌. ಚಂದ್ರಶೇಖರ್‌, ಪ್ರಸಾದ್‌ ನೇತ್ರಾಲಯ ಸೂಪರ್‌ ಸ್ಪೆಶಾಲಿಟಿ ಕಣ್ಣಿನ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ| ಕೃಷ್ಣ ಪ್ರಸಾದ್‌ ಕೂಡ್ಲು, ಮಲೆೆ³ ಮೀನುಗಾರರ ಸಂಘದ ಮಾಜಿ ಅಧ್ಯಕ್ಷ ಹಿರಿಯಣ್ಣ ಟಿ. ಕಿದಿಯೂರು, ಸಮಿತಿ ಪ್ರಧಾನ ಕಾರ್ಯದರ್ಶಿ ಯುವರಾಜ್‌ ಸಾಲ್ಯಾನ್‌ ಮಸ್ಕತ್‌, ಕಿದಿಯೂರ್‌ ಹೊಟೇಲ್ಸ್ ನ ನಿರ್ದೇಶಕ ಜಿತೇಶ್‌ ಬಿ. ಕಿದಿಯೂರು, ರಾಜೇಂದ್ರ ಸುವರ್ಣ ಹಿರಿಯಡಕ ಉಪಸ್ಥಿತರಿದ್ದರು.

ನಾಗಮಂಡಲದ ಸಮಗ್ರ ಮಾರ್ಗದರ್ಶಕ, ಜೋತಿಷಿ ವೇ|ಮೂ| ಕಬಿಯಾಡಿ ಜಯರಾಮ ಆಚಾರ್ಯ ಪ್ರಸ್ತಾವನೆಗೈದರು. ಜಯ ಸಿ. ಕೋಟ್ಯಾನ್‌ ಸ್ವಾಗತಿಸಿದರು. ದಾಮೋದರ ಶರ್ಮ ನಿರೂಪಿಸಿದರು. ಡಾ| ವಿಜಯೇಂದ್ರ ವಸಂತ ರಾವ್‌ ವಂದಿಸಿದರು.

ಸಹಾಯಧನ ವಿತರಣೆ-ಸಮ್ಮಾನ
ಕಿಡ್ನಿ ತೊಂದರೆಗೀಡಾದ ಪೂರ್ಣಿಮಾ, ಅಂಗ ವೈಕಲ್ಯವಿರುವ ಪ್ರಜ್ವಲ್‌ ಮತ್ತು ಪ್ರತೀûಾ ಅವರ ಪರವಾಗಿ ಜ್ಯೋತಿ ಶೇಖರ್‌, ಅಸ್ವಸ್ಥರಾಗಿ ಮರಣ ಹೊಂದಿದ ಶಂಕರ್‌ ಅವರ ಪತ್ನಿ ಕಮಲಾ, ಅಂಗವಿಕಲ ದಿನೇಶ್‌ ಪೂಜಾರಿ, ಕ್ಯಾನ್ಸರ್‌ನಿಂದ ಬಳಲುತ್ತಿರುವ ನರೇಶ್‌ ಶೆಟ್ಟಿಗಾರ್‌ ಅವರಿಗೆ ವೈದ್ಯಕೀಯ ಸಹಾಯಧನ ವಿತರಿಸಲಾಯಿತು. ಸಮಾಜಮುಖಿ ಕಾರ್ಯ ಮಾಡಿಕೊಂಡು ಬರುತ್ತಿರುವ ಡಾ| ಕೃಷ್ಣಪ್ರಸಾದ್‌ ಕೂಡ್ಲು, ಅತ್ಯುತ್ತಮ ವೈದ್ಯಕೀಯ ಸೇವೆ ನೀಡುತ್ತಿರುವ ಡಾ| ಜಿ.ಎಸ್‌. ಚಂದ್ರಶೇಖರ್‌ ಅವರನ್ನು ಸಮ್ಮಾನಿಸಲಾಯಿತು.

ಟಾಪ್ ನ್ಯೂಸ್

Davanagere; ಅಪರೂಪದ ಮದುವೆಗೆ ಸಾಕ್ಷಿಯಾದ ಗೋವಿನಕೋವಿ

Davanagere; ಅಪರೂಪದ ಮದುವೆಗೆ ಸಾಕ್ಷಿಯಾದ ಗೋವಿನಕೋವಿ

14-basrur

Road Mishap; ಬಳ್ಕೂರು: ಸ್ಕೂಟರ್‌ಗೆ ಟಿಪ್ಪರ್‌ ಢಿಕ್ಕಿ; ಸವಾರ ಸಾವು

Davanagere; ಅಡಕೆ ಮರ ಕಡಿದಿದ್ದಕ್ಕೆ ಮಹಿಳೆಯ ಕೊಲೆ; ಇಬ್ಬರು ಆರೋಪಿಗಳ ಬಂಧನ

Davanagere; ಅಡಕೆ ಮರ ಕಡಿದಿದ್ದಕ್ಕೆ ಮಹಿಳೆಯ ಕೊಲೆ; ಇಬ್ಬರು ಆರೋಪಿಗಳ ಬಂಧನ

Election; ಮೋದಿ ಚುನಾವಣೆ ಸ್ಪರ್ಧೆ ತಡೆಗೆ ಸಲ್ಲಿಸಿದ್ದ ಅರ್ಜಿ ವಜಾ ಮಾಡಿದ ಸುಪ್ರೀಂ ಕೋರ್ಟ್

Election; ಮೋದಿ ಚುನಾವಣೆ ಸ್ಪರ್ಧೆ ತಡೆಗೆ ಸಲ್ಲಿಸಿದ್ದ ಅರ್ಜಿ ವಜಾ ಮಾಡಿದ ಸುಪ್ರೀಂ ಕೋರ್ಟ್

Is he an astrologer?; Priyanka Gandhi on Pm Modi;s remarks

Loksabha Election; ನರೇಂದ್ರ ಮೋದಿ ಏನು ಜ್ಯೋತಿಷಿಯೇ…? ಪ್ರಿಯಾಂಕಾ ಗಾಂಧಿ ಪ್ರಶ್ನೆ

Lucknow Super Giants; ತಣ್ಣಗಾಯ್ತಾ ರಾಹುಲ್- ಗೋಯೆಂಕಾ ಗಲಾಟೆ; ಇಲ್ಲಿದೆ ಫೋಟೊಗಳು

Lucknow Super Giants; ತಣ್ಣಗಾಯ್ತಾ ರಾಹುಲ್- ಗೋಯೆಂಕಾ ಗಲಾಟೆ; ಇಲ್ಲಿದೆ ಫೋಟೊಗಳು

LTTE Ban Extended: ಮತ್ತೆ ಐದು ವರ್ಷಗಳ ಕಾಲ ನಿಷೇಧ ವಿಸ್ತರಿಸಿದ ಕೇಂದ್ರ ಸರ್ಕಾರ

LTTE Ban Extended: ಮತ್ತೆ ಐದು ವರ್ಷಗಳ ಕಾಲ ನಿಷೇಧ ವಿಸ್ತರಿಸಿದ ಕೇಂದ್ರ ಸರ್ಕಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-basrur

Road Mishap; ಬಳ್ಕೂರು: ಸ್ಕೂಟರ್‌ಗೆ ಟಿಪ್ಪರ್‌ ಢಿಕ್ಕಿ; ಸವಾರ ಸಾವು

Udupi: ಮತಗಟ್ಟೆಗಳಲ್ಲಿ ಮಾಧ್ಯಮದವರಿಗೆ ಆಗಿರುವ ತೊಂದರೆ ಬಗ್ಗೆ ಎಸ್ಪಿಗೆ ಮನವಿ

Udupi: ಮತಗಟ್ಟೆಗಳಲ್ಲಿ ಮಾಧ್ಯಮದವರಿಗೆ ಆಗಿರುವ ತೊಂದರೆ ಬಗ್ಗೆ ಎಸ್ಪಿಗೆ ಮನವಿ

ಮುಂಗಾರಿಗಾಗಿ ಬಿತ್ತನೆ ಬೀಜ ದಾಸ್ತಾನು ಆರಂಭ; ಬೀಜ ದರ ಪ್ರತೀ ಕೆ.ಜಿ.ಗೆ 9.75 ರೂ. ಹೆಚ್ಚಳ!

ಮುಂಗಾರಿಗಾಗಿ ಬಿತ್ತನೆ ಬೀಜ ದಾಸ್ತಾನು ಆರಂಭ; ಬೀಜ ದರ ಪ್ರತೀ ಕೆ.ಜಿ.ಗೆ 9.75 ರೂ. ಹೆಚ್ಚಳ!

Udupi; ಆಟೋ ರಿಕ್ಷಾ ಪಲ್ಟಿ: ಮೂವರಿಗೆ ಗಾಯ

Udupi; ಆಟೋ ರಿಕ್ಷಾ ಪಲ್ಟಿ: ಮೂವರಿಗೆ ಗಾಯ

Theft ಕಳ್ತೂರು: ಮನೆಯ ಬೀಗ ಒಡೆದು ಚಿನ್ನಾಭರಣ ಕಳ್ಳತನ

Theft ಕಳ್ತೂರು: ಮನೆಯ ಬೀಗ ಒಡೆದು ಚಿನ್ನಾಭರಣ ಕಳ್ಳತನ

MUST WATCH

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

ಹೊಸ ಸೇರ್ಪಡೆ

Davanagere; ಅಪರೂಪದ ಮದುವೆಗೆ ಸಾಕ್ಷಿಯಾದ ಗೋವಿನಕೋವಿ

Davanagere; ಅಪರೂಪದ ಮದುವೆಗೆ ಸಾಕ್ಷಿಯಾದ ಗೋವಿನಕೋವಿ

14-basrur

Road Mishap; ಬಳ್ಕೂರು: ಸ್ಕೂಟರ್‌ಗೆ ಟಿಪ್ಪರ್‌ ಢಿಕ್ಕಿ; ಸವಾರ ಸಾವು

13-uv-fusion

Dance: ಬಸಣ್ಣನ ಡ್ಯಾನ್ಸು

12-uv-fusion

Smile: ಕಷ್ಟ – ಸುಖದ ಜೀವನ… ನಗು ನಗುತಾ ಸಾಗಿ

11-uv-fusion

UV Fusion: ಕಡಲ ಕುವರರೇ, ನಿಮಗೊಂದು ಸಲಾಂ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.