ಮಲ್ಪೆ: ಸಮುದ್ರಪಾಲಾಗುತ್ತಿದ್ದ 6 ಮಂದಿಯ ರಕ್ಷಣೆ, ಓರ್ವ ಸಾವು
Team Udayavani, Oct 5, 2022, 11:29 PM IST
ಮಲ್ಪೆ: ಸಮುದ್ರದಲ್ಲಿ ಈಜಲು ಹೋಗಿ ಮುಳುಗುತ್ತಿದ್ದ 6 ಮಂದಿ ಪ್ರವಾಸಿಗರನ್ನು ರಕ್ಷಿಸಿದ ಹಾಗೂ ಓರ್ವ ಸಾವನ್ನಪ್ಪಿರುವ ಪ್ರತ್ಯೇಕ ಘಟನೆಗಳು ಮಲ್ಪೆ ಬೀಚ್ನಲ್ಲಿ ಮಂಗಳವಾರ ಸಂಭವಿಸಿವೆ.
ಮೈಸೂರಿನ ಅಬ್ರಾರ್ ಅಹಮದ್ ಶರೀಫ್ (28) ನೀರಿನಲ್ಲಿ ಮುಳುಗಿದ್ದು, ಜೀವರಕ್ಷಕ ತಂಡ ರಕ್ಷಿಸಿ ಮೇಲೆ ತಂದರೂ ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲಿ ಮೃತಪಟ್ಟರು.
ಕುಟುಂಬಿಕರೊಂದಿಗೆ ಪ್ರವಾಸಕ್ಕೆ ಬಂದಿದ್ದ ಅವರು ಕಾಸರಗೋಡು, ಮಂಗಳೂರಿಗೆ ತೆರಳಿ ಮಲ್ಪೆ ಬೀಚ್ಗೆ ಬಂದಿದ್ದರು. ಜೀವರಕ್ಷಕ ತಂಡದವರು ಎಚ್ಚರಿಕೆಯ ಮಾತುಗಳ ಹೊರತಾಗಿಯೂ ಮಾರಿಯ (ಗುಂಡಿ) ಇರುವ ಜಾಗದಲ್ಲಿ ನೀರಿ ಗಿಳಿದು ಈಜಾಡುತ್ತಿದ್ದರು. ಅಲೆಗಳ ಅಬ್ಬರಕ್ಕೆ ಕೊಚ್ಚಿ ಹೋಗುತ್ತಿದ್ದ ಅವ ರನ್ನು ಜೀವರಕ್ಷಕ ತಂಡದವರು ಹಿಡಿದು ಮೇಲೆ ತಂದರು. ಗಂಭೀರ ಸ್ಥಿತಿಯಲ್ಲಿದ್ದ ಅಬ್ರಾರ್ ಅವರನ್ನು ಮಣಿಪಾಲ ಆಸ್ಪತ್ರೆಗೆ ಕರೆತಂದಿದ್ದು, ಆದಾಗಲೇ ಅವರು ಅಸುನೀಗಿದ್ದರು.
6 ಮಂದಿಯ ರಕ್ಷಣೆ
ಮೈಸೂರಿನ ಉದಯಗಿರಿಯ ತೌಸೀಫ್ ಅಹಮದ್ ಎಂಬಾತ ಮಧ್ಯಾಹ್ನದ ವೇಳೆ ಅತ್ಮಹತ್ಯೆ ಮಾಡಿಕೊಳ್ಳ
ಲೆಂದು ಕಡಲಿಗೆ ಹಾರಿದ್ದು, ಮುಳು ಗೇಳುತ್ತಿದ್ದ ಅತನನ್ನು ಜೀವರಕ್ಷಕ ತಂಡದವರು ರಕ್ಷಿಸಿದ್ದಾರೆ. ಇನ್ನೊಂದು ಘಟನೆಯಲ್ಲಿ ಸಮುದ್ರಪಾಲಾಗುತ್ತಿದ್ದ ತಮಿಳುನಾಡು ಸೇಲಂನ ಸೆಂಥಿಲ್ ಅವರನ್ನು ರಕ್ಷಿಸಲಾಗಿದೆ. ಕುಟುಂಬ ಸಮೇತರಾಗಿ ಬಂದಿದ್ದ ವಿಜಯಪುರದ ಬಸವರಾಜ್ ಅವರನ್ನು ಜೀವರಕ್ಷಕ ತಂಡದವರು ಪಾರು ಮಾಡಿದ್ದಾರೆ. ಮತ್ತೊಂದು ಘಟನೆಯಲ್ಲಿ ನವಾಜ್ ಎಂಬವರನ್ನು ರಕ್ಷಿಸಲಾಗಿದೆ. ಅವರು ಮದ್ಯಸೇವಿಸಿ ನೀರಿಗೆ ಇಳಿದಿದ್ದು, ಅಲೆಗಳ ಹೊಡೆತಕ್ಕೆ ಸಿಲುಕಿ ಕೊಚ್ಚಿ ಹೋಗುತ್ತಿರುವುದನ್ನು ಗಮನಿಸಿದ ಜೀವರಕ್ಷಕರು ಧಾವಿಸಿ ಕಾಪಾಡಿದ್ದಾರೆ. ಸ್ನೇಹಿತರೊಂದಿಗೆ ಈಜಾಡಲು ತೆರಳಿ ಸಮುದ್ರಪಾಲಾಗುತ್ತಿದ್ದ ಬೆಂಗಳೂರಿನ ಸೋಹಮ್ ಘೋಷ್ ಅವರನ್ನೂ ರಕ್ಷಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ
Kapu Assembly constituency: ನಕಲಿ ಮತದಾನ;ಆರೋಪ
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ