ತುರ್ತು ಆರೋಗ್ಯ ಸೇವೆಯಿಂದ ವಂಚಿತ ಗ್ರಾಮಸ್ಥರು
Team Udayavani, Mar 13, 2019, 1:00 AM IST
ಬಸ್ರೂರು: ಗುಲ್ವಾಡಿ ಗ್ರಾಮ ಪಂಚಾಯತ್ನಲ್ಲಿ, 4,846 ಮಂದಿ ಗ್ರಾಮಸ್ಥರು ವಾಸ್ತವ್ಯವಿದ್ದು 820 ಕುಟುಂಬಗಳಿವೆ. ಪ್ರಸ್ತುತ ಅಬ್ಬಿಗುಡ್ಡೆಯಲ್ಲಿ ಕುಡಿಯುವ ನೀರಿನ ಸಮಸ್ಯೆಗಿಂತ ಪ್ರಾಥಮಿಕ ಆರೋಗ್ಯಕೇಂದ್ರದ ಆವಶ್ಯಕತೆಯೇ ಎದ್ದು ಕಾಣುತ್ತಿದೆ.
ಪಂಚಾಯತ್ ವ್ಯಾಪ್ತಿಯ ಬೋಳುಕಟ್ಟೆ ಎಂಬಲ್ಲಿ ಒಂದು ಸರಕಾರಿ ಆಯುರ್ವೇದ ಕೇಂದ್ರವಿದೆ. ಇಲ್ಲಿಗೆ ವೈದ್ಯರನ್ನು ವಾರಕ್ಕೆ ಮೂರು ದಿನ ನಿಯುಕ್ತಿಗೊಳಿಸಿದ್ದರಾದರೂ, ಜನರು ಚಿಕಿತ್ಸೆಯಿಂದ ಮಾತ್ರ ವಂಚಿತರಾಗಿದ್ದಾರೆ.
ನರ್ಸ್ಗಳಿಗೆ ವಸತಿಗƒಹಗಳನ್ನು ಕಲ್ಪಿಸಿದ್ದರೂ, ನಿಯುಕ್ತಿಗೊಂಡ ಶಶ್ರೂಶಕರೂ ಜನರ ಸೇವೆಗೆ ಸಿಗುತ್ತಿಲ್ಲ ಎನ್ನುವುದು ಗ್ರಾಮಸ್ಥರಿಂದ ಬಂದ ದೂರು.
ಈ ಹಿನ್ನೆಲೆಯಲ್ಲಿ ಗುಲ್ವಾಡಿ ಗ್ರಾಮಕ್ಕೆ ಸಮರ್ಪಕ ಪ್ರಾಥಮಿಕ ಆರೋಗ್ಯ ಕೇಂದ್ರದ ಬೇಡಿಕೆಯನ್ನು ಹಲವು ವರ್ಷಗಳಿಂದ ಸರಕಾರದ ಮುಂದಿಟ್ಟಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂಬುದು ಇಲ್ಲಿನ ಜನರ ಅಳಲು.
ಇನ್ನಾದರೂ ಸಂಬಂಧಿಸಿದ ಇಲಾಖೆ ಈ ಕುರಿತಂತೆ ಗಮನ ಹರಿಸುವುದೇ ಎಂದು ಕಾದು ನೋಡಬೇಕಿದೆ.
ಮೂಲಭೂತ ಅವಶ್ಯಕತೆ
ಈಗಾಗಲೇ ಗ್ರಾ.ಪಂ.ವತಿಯಿಂದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮೇÇಧಿಕಾರಿಗಳಿಗೆ ಮನವಿ ನೀಡಿದ್ದರೂ ಇನ್ನೂ ಮಂಜೂರಾಗಿಲ್ಲ ಇದು ಮೂಲಭೂತ ಅವಶ್ಯಕತೆಯಾಗಿದೆ.
-ವನಿತಾ ಶೆಡ್ತಿ,, ಅಭಿವೃದ್ಧಿ ಅಧಿಕಾರಿ ಗ್ರಾ.ಪಂ.ಗುಲ್ವಾಡಿ
ವರ್ಷಗಳ ಬೇಡಿಕೆ
ಅಬ್ಬಿಗುಡ್ಡೆ ಒಂದು ಎತ್ತರದ ಪ್ರದೇಶವಾಗಿದ್ದು ನಾವು ಹಲವು ವರ್ಷಗಳಿಂದ ಆರೋಗ್ಯ ಚಿಕಿತ್ಸೆಯಿಂದ ವಂಚಿತರಾಗಿದ್ದೇವೆ, ಒಂದು ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಇಲ್ಲಿ ಆರಂಭಿಸಿದರೆ ಗ್ರಾಮಸ್ಥರಿಗೆ ಅನುಕೂಲವಾಗುತ್ತದೆ. ಇದು ಹಲವು ವರ್ಷಗಳ ಬೇಡಿಕೆಯಾಗಿದೆ.
-ಪಾರೂಕ್, ಗುಲ್ವಾಡಿ, ಅಬ್ಬಿಗುಡ್ಡೆ ನಿವಾಸಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Water scarcity; ಮಂಗಳೂರು ನಗರಕ್ಕೆ ಎರಡು ದಿನಕ್ಕೊಮ್ಮೆ ನೀರು
Prajwal Case; ಮೊದಲು ರಾಹುಲ್ ಗಾಂಧಿಗೆ ನೋಟಿಸ್ ಕೊಡಬೇಕು: ಎಚ್ ಡಿಕೆ ಆಗ್ರಹ
Pakistan ಜಿಂದಾಬಾದ್ ಅಂದವರನ್ನು ಡಿಶ್ಯುಂ ಡಿಶ್ಯುಂ ಎಂದು ಶೂಟ್ ಮಾಡಬೇಕು: ಜಮೀರ್
Chikkodi:ಅಮಿತ್ ಶಾ ಸಮ್ಮುಖದಲ್ಲಿ ವಿವೇಕರಾವ್ ಪಾಟೀಲ ಬಿಜೆಪಿ ಸೇರ್ಪಡೆ
Bommai Interview: “ನೀರಾವರಿ-ಕೈಗಾರಿಕಾ ಬೆಳವಣಿಗೆ ಜೊತೆ ಆರ್ಥಿಕಾಭಿವೃದ್ಧಿಗೆ ಆದ್ಯತೆ’